AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Apr 06, 2022 | 11:15 PM

Share

ದೆಹಲಿ: ಜಿಯೋ ಟವರ್ ಹಾಳುಗೆಡಹುವ, ತಡೆಯೊಡ್ಡುವ ಕೃತ್ಯ ಎಸಗಿದವರಿಗೆ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಕುಮ್ಮಕ್ಕು ನೀಡಿವೆ ಎಂಬ ಜಿಯೋ ಆರೋಪವನ್ನು ಉದ್ದೇಶಿಸಿ ಏರ್​ಟೆಲ್ ಟೆಲಿಕಾಂ ವಿಭಾಗಕ್ಕೆ (DoT) ಪತ್ರ ಬರೆದಿದೆ. ಜಿಯೋ ಮಾಡಿರುವ ಆರೋಪ ಆಧಾರರಹಿತ ಎಂದು ಏರ್​ಟೆಲ್ ಕಟುವಾಗಿ ಪ್ರತಿಕ್ರಿಯಿಸಿದೆ.

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ. ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ. ಹಾಗಾಗಿ, ದೂರನ್ನು ತಿರಸ್ಕರಿಸಬೇಕು ಎಂದು ಏರ್​ಟೆಲ್ ತಿಳಿಸಿದೆ.

ಏರ್​ಟೆಲ್, ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್​ಗೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಜಿಯೋ, ಡಿಸೆಂಬರ್ 28ರಂದು ಪತ್ರದ ಮೂಲಕ ಮಾಡಿರುವ ಆರೋಪದ ಬಗ್ಗೆ ಅರಿವಿದೆ. ಅಂಥದ್ದೇ ಆರೋಪವನ್ನು ಜಿಯೋ ಡಿಸೆಂಬರ್ ಮೊದಲ ವಾರದಲ್ಲೂ ಮಾಡಿತ್ತು. ಅದಕ್ಕೆ ಏರ್​ಟೆಲ್ ಪ್ರತಿಕ್ರಿಯಿಸಿತ್ತು ಎಂದು ವಿವರಿಸಿದೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಜಿಯೋ ಈ ದೂರು ನೀಡಿತ್ತು. ಜಿಯೋ ಆರೋಪಕ್ಕೆ ಏರ್​ಟೆಲ್ ಮುಖ್ಯ ನಿಯಂತ್ರಕ ಅಧಿಕಾರಿ ರಾಹುಲ್ ವಾಟ್ಸ್ ಟೆಲಿಕಾಂ ವಿಭಾಗಕ್ಕೆ ಬರೆದ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಿಯೋ ಸಿಮ್ ತಿರಸ್ಕರಿಸುವ ರೈತರ ಆಂದೋಲನದಲ್ಲಿ ಏರ್​ಟೆಲ್ ಪಾತ್ರವಹಿಸಿದೆ ಎಂಬ ಆರೋಪ ಆಧಾರ ರಹಿತವಾಗಿದೆ. ಮಾತ್ರವಲ್ಲ, ಇದು ಅತಿರೇಕದ ಆರೋಪವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರನ್ನು ಜಿಯೋನಿಂದ ಪೋರ್ಟ್ ಮಾಡುವಂತೆ ಏರ್​ಟೆಲ್ ಬಲವಂತ ಮಾಡಿದೆ ಎಂದು ಜಿಯೋ ಸಂಸ್ಥೆ ನಂಬಿರುವ ಬಗ್ಗೆ ಏರ್​ಟೆಲ್ ಆಶ್ಚರ್ಯ ವ್ಯಕ್ತಪಡಿಸಿದೆ. ಏರ್​ಟೆಲ್ ಅಷ್ಟು ಸರ್ವಶಕ್ತವಾಗಿದ್ದರೆ, ಮೂರು ವರ್ಷಗಳ ಹಿಂದೆ ಗ್ರಾಹಕರ ಮೇಲೆ ಜಿಯೋ ಪ್ರಭಾವ ಹೆಚ್ಚುತ್ತಿದ್ದಾಗಲೇ ಏರ್​ಟೆಲ್ ಕ್ರಮ ಕೈಗೊಳ್ಳುತ್ತಿತ್ತು ಎಂದು ಸಂಸ್ಥೆ ಹೇಳಿದೆ.

ಹರ್ಯಾಣ ಹಾಗೂ ಪಂಜಾಬ್ ಭಾಗಗಳಲ್ಲಿ ನಡೆದ ಜಿಯೋ ಮೇಲಿನ ಹಾನಿಗೆ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಹಂಚಿಕೆದಾರರು, ಚಾನಲ್ ಪಾರ್ಟ್ನರ್​ಗಳು ಕಾರಣ ಎಂದು ಜಿಯೋ ಆರೋಪಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರತಿಸ್ಪರ್ಧಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜಿಯೋ ತಿಳಿಸಿತ್ತು.

Published On - 1:39 pm, Sun, 3 January 21

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ