AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Apr 06, 2022 | 11:15 PM

Share

ದೆಹಲಿ: ಜಿಯೋ ಟವರ್ ಹಾಳುಗೆಡಹುವ, ತಡೆಯೊಡ್ಡುವ ಕೃತ್ಯ ಎಸಗಿದವರಿಗೆ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಕುಮ್ಮಕ್ಕು ನೀಡಿವೆ ಎಂಬ ಜಿಯೋ ಆರೋಪವನ್ನು ಉದ್ದೇಶಿಸಿ ಏರ್​ಟೆಲ್ ಟೆಲಿಕಾಂ ವಿಭಾಗಕ್ಕೆ (DoT) ಪತ್ರ ಬರೆದಿದೆ. ಜಿಯೋ ಮಾಡಿರುವ ಆರೋಪ ಆಧಾರರಹಿತ ಎಂದು ಏರ್​ಟೆಲ್ ಕಟುವಾಗಿ ಪ್ರತಿಕ್ರಿಯಿಸಿದೆ.

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ. ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ. ಹಾಗಾಗಿ, ದೂರನ್ನು ತಿರಸ್ಕರಿಸಬೇಕು ಎಂದು ಏರ್​ಟೆಲ್ ತಿಳಿಸಿದೆ.

ಏರ್​ಟೆಲ್, ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್​ಗೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಜಿಯೋ, ಡಿಸೆಂಬರ್ 28ರಂದು ಪತ್ರದ ಮೂಲಕ ಮಾಡಿರುವ ಆರೋಪದ ಬಗ್ಗೆ ಅರಿವಿದೆ. ಅಂಥದ್ದೇ ಆರೋಪವನ್ನು ಜಿಯೋ ಡಿಸೆಂಬರ್ ಮೊದಲ ವಾರದಲ್ಲೂ ಮಾಡಿತ್ತು. ಅದಕ್ಕೆ ಏರ್​ಟೆಲ್ ಪ್ರತಿಕ್ರಿಯಿಸಿತ್ತು ಎಂದು ವಿವರಿಸಿದೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಜಿಯೋ ಈ ದೂರು ನೀಡಿತ್ತು. ಜಿಯೋ ಆರೋಪಕ್ಕೆ ಏರ್​ಟೆಲ್ ಮುಖ್ಯ ನಿಯಂತ್ರಕ ಅಧಿಕಾರಿ ರಾಹುಲ್ ವಾಟ್ಸ್ ಟೆಲಿಕಾಂ ವಿಭಾಗಕ್ಕೆ ಬರೆದ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಿಯೋ ಸಿಮ್ ತಿರಸ್ಕರಿಸುವ ರೈತರ ಆಂದೋಲನದಲ್ಲಿ ಏರ್​ಟೆಲ್ ಪಾತ್ರವಹಿಸಿದೆ ಎಂಬ ಆರೋಪ ಆಧಾರ ರಹಿತವಾಗಿದೆ. ಮಾತ್ರವಲ್ಲ, ಇದು ಅತಿರೇಕದ ಆರೋಪವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರನ್ನು ಜಿಯೋನಿಂದ ಪೋರ್ಟ್ ಮಾಡುವಂತೆ ಏರ್​ಟೆಲ್ ಬಲವಂತ ಮಾಡಿದೆ ಎಂದು ಜಿಯೋ ಸಂಸ್ಥೆ ನಂಬಿರುವ ಬಗ್ಗೆ ಏರ್​ಟೆಲ್ ಆಶ್ಚರ್ಯ ವ್ಯಕ್ತಪಡಿಸಿದೆ. ಏರ್​ಟೆಲ್ ಅಷ್ಟು ಸರ್ವಶಕ್ತವಾಗಿದ್ದರೆ, ಮೂರು ವರ್ಷಗಳ ಹಿಂದೆ ಗ್ರಾಹಕರ ಮೇಲೆ ಜಿಯೋ ಪ್ರಭಾವ ಹೆಚ್ಚುತ್ತಿದ್ದಾಗಲೇ ಏರ್​ಟೆಲ್ ಕ್ರಮ ಕೈಗೊಳ್ಳುತ್ತಿತ್ತು ಎಂದು ಸಂಸ್ಥೆ ಹೇಳಿದೆ.

ಹರ್ಯಾಣ ಹಾಗೂ ಪಂಜಾಬ್ ಭಾಗಗಳಲ್ಲಿ ನಡೆದ ಜಿಯೋ ಮೇಲಿನ ಹಾನಿಗೆ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಹಂಚಿಕೆದಾರರು, ಚಾನಲ್ ಪಾರ್ಟ್ನರ್​ಗಳು ಕಾರಣ ಎಂದು ಜಿಯೋ ಆರೋಪಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರತಿಸ್ಪರ್ಧಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜಿಯೋ ತಿಳಿಸಿತ್ತು.

Published On - 1:39 pm, Sun, 3 January 21

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್