AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 11:15 PM

ದೆಹಲಿ: ಜಿಯೋ ಟವರ್ ಹಾಳುಗೆಡಹುವ, ತಡೆಯೊಡ್ಡುವ ಕೃತ್ಯ ಎಸಗಿದವರಿಗೆ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಕುಮ್ಮಕ್ಕು ನೀಡಿವೆ ಎಂಬ ಜಿಯೋ ಆರೋಪವನ್ನು ಉದ್ದೇಶಿಸಿ ಏರ್​ಟೆಲ್ ಟೆಲಿಕಾಂ ವಿಭಾಗಕ್ಕೆ (DoT) ಪತ್ರ ಬರೆದಿದೆ. ಜಿಯೋ ಮಾಡಿರುವ ಆರೋಪ ಆಧಾರರಹಿತ ಎಂದು ಏರ್​ಟೆಲ್ ಕಟುವಾಗಿ ಪ್ರತಿಕ್ರಿಯಿಸಿದೆ.

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ. ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ. ಹಾಗಾಗಿ, ದೂರನ್ನು ತಿರಸ್ಕರಿಸಬೇಕು ಎಂದು ಏರ್​ಟೆಲ್ ತಿಳಿಸಿದೆ.

ಏರ್​ಟೆಲ್, ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್​ಗೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಜಿಯೋ, ಡಿಸೆಂಬರ್ 28ರಂದು ಪತ್ರದ ಮೂಲಕ ಮಾಡಿರುವ ಆರೋಪದ ಬಗ್ಗೆ ಅರಿವಿದೆ. ಅಂಥದ್ದೇ ಆರೋಪವನ್ನು ಜಿಯೋ ಡಿಸೆಂಬರ್ ಮೊದಲ ವಾರದಲ್ಲೂ ಮಾಡಿತ್ತು. ಅದಕ್ಕೆ ಏರ್​ಟೆಲ್ ಪ್ರತಿಕ್ರಿಯಿಸಿತ್ತು ಎಂದು ವಿವರಿಸಿದೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಜಿಯೋ ಈ ದೂರು ನೀಡಿತ್ತು. ಜಿಯೋ ಆರೋಪಕ್ಕೆ ಏರ್​ಟೆಲ್ ಮುಖ್ಯ ನಿಯಂತ್ರಕ ಅಧಿಕಾರಿ ರಾಹುಲ್ ವಾಟ್ಸ್ ಟೆಲಿಕಾಂ ವಿಭಾಗಕ್ಕೆ ಬರೆದ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಿಯೋ ಸಿಮ್ ತಿರಸ್ಕರಿಸುವ ರೈತರ ಆಂದೋಲನದಲ್ಲಿ ಏರ್​ಟೆಲ್ ಪಾತ್ರವಹಿಸಿದೆ ಎಂಬ ಆರೋಪ ಆಧಾರ ರಹಿತವಾಗಿದೆ. ಮಾತ್ರವಲ್ಲ, ಇದು ಅತಿರೇಕದ ಆರೋಪವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರನ್ನು ಜಿಯೋನಿಂದ ಪೋರ್ಟ್ ಮಾಡುವಂತೆ ಏರ್​ಟೆಲ್ ಬಲವಂತ ಮಾಡಿದೆ ಎಂದು ಜಿಯೋ ಸಂಸ್ಥೆ ನಂಬಿರುವ ಬಗ್ಗೆ ಏರ್​ಟೆಲ್ ಆಶ್ಚರ್ಯ ವ್ಯಕ್ತಪಡಿಸಿದೆ. ಏರ್​ಟೆಲ್ ಅಷ್ಟು ಸರ್ವಶಕ್ತವಾಗಿದ್ದರೆ, ಮೂರು ವರ್ಷಗಳ ಹಿಂದೆ ಗ್ರಾಹಕರ ಮೇಲೆ ಜಿಯೋ ಪ್ರಭಾವ ಹೆಚ್ಚುತ್ತಿದ್ದಾಗಲೇ ಏರ್​ಟೆಲ್ ಕ್ರಮ ಕೈಗೊಳ್ಳುತ್ತಿತ್ತು ಎಂದು ಸಂಸ್ಥೆ ಹೇಳಿದೆ.

ಹರ್ಯಾಣ ಹಾಗೂ ಪಂಜಾಬ್ ಭಾಗಗಳಲ್ಲಿ ನಡೆದ ಜಿಯೋ ಮೇಲಿನ ಹಾನಿಗೆ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಹಂಚಿಕೆದಾರರು, ಚಾನಲ್ ಪಾರ್ಟ್ನರ್​ಗಳು ಕಾರಣ ಎಂದು ಜಿಯೋ ಆರೋಪಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರತಿಸ್ಪರ್ಧಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜಿಯೋ ತಿಳಿಸಿತ್ತು.

Published On - 1:39 pm, Sun, 3 January 21

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್