AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ

Tripura police ಇದೀಗ 68 ಹ್ಯಾಂಡಲ್‌ಗಳನ್ನು ನಿರ್ಬಂಧಿಸಲು ಮತ್ತು ಬಳಕೆದಾರರ ವಿವರಗಳನ್ನು ಒದಗಿಸಲು ಟ್ವಿಟರ್‌ಗೆ ಪೊಲೀಸರು ಕೇಳಿದ ಎರಡು ವಾರಗಳ ನಂತರ, 24 ಪ್ರೊಫೈಲ್‌ಗಳನ್ನು ತೆಗೆದುಹಾಕಲಾಗಿದೆ.

ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 18, 2021 | 11:01 AM

ಅಗರ್ತಲಾ: ಬಿಜೆಪಿ (BJP) ಮತ್ತು ಅದರ ನಾಯಕರನ್ನು ಟೀಕಿಸುವವರನ್ನು ಮತ್ತು ಅಲ್ಪಸಂಖ್ಯಾತ ಸಮುದಾಯ ಮೇಲಿನ ಆಪಾದಿತ ದಾಳಿಗಳ ಬಗ್ಗೆ ಕ್ರಮ ಮತ್ತು ತನಿಖೆಗೆ ಕರೆ ನೀಡಿದ ವಕೀಲರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ (IPC)ಸೆಕ್ಷನ್‌ಗಳಡಿಯಲ್ಲಿ  ತ್ರಿಪುರಾ ಪೊಲೀಸರು (Tripura police) ಪ್ರಕರಣ  ದಾಖಲಿದ್ದಾರೆ.ಇದೀಗ 68 ಹ್ಯಾಂಡಲ್‌ಗಳನ್ನು ನಿರ್ಬಂಧಿಸಲು ಮತ್ತು ಬಳಕೆದಾರರ ವಿವರಗಳನ್ನು ಒದಗಿಸಲು ಟ್ವಿಟರ್‌ಗೆ ಪೊಲೀಸರು ಕೇಳಿದ ಎರಡು ವಾರಗಳ ನಂತರ, 24 ಪ್ರೊಫೈಲ್‌ಗಳನ್ನು ತೆಗೆದುಹಾಕಲಾಗಿದೆ ಆದರೆ 57 ಟ್ವೀಟ್‌ಗಳು ಇನ್ನು ಮುಂದೆ ಲಭ್ಯವಿಲ್ಲ, ಇದರಲ್ಲಿ 23 “ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ತಡೆಹಿಡಿಯಲಾಗಿದೆ” ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ಹೆಚ್ಚಿನ ಪ್ರೊಫೈಲ್‌ಗಳು ಹೊಸತಾಗಿದ್ದು 2020-2021ರ ಅವಧಿಯಲ್ಲಿ 15 ಮಂದಿ ಟ್ವಿಟರ್ ಸೇರಿದವರಾಗಿದ್ದಾರೆ . 2015 ಮತ್ತು 2019 ರ ನಡುವೆ 19, 2010 ಮತ್ತು 2014 ರ ನಡುವೆ ಸೇರಿದ 7 ಮಂದಿ ಇದ್ದಾರೆ. ಹೆಚ್ಚಿನ ಹ್ಯಾಂಡಲ್‌ಗಳು ಕಡಿಮೆ ವ್ಯಾಪ್ತಿಯನ್ನು ಹೊಂದಿವೆ .ಅಂದರೆ 8 ಪ್ರೊಫೈಲ್ ಗಳು 10 ಕ್ಕಿಂತ ಕಡಿಮೆ ಫಾಲೋವರ್, 17 ಪ್ರೊಫೈಲ್ 100 ಕ್ಕಿಂತ ಕಡಿಮೆ ಫಾಲೋವರ್ ಮತ್ತು 21 ಪ್ರೊಫೈಲ್ ಗಳು 1,000 ಕ್ಕಿಂತ ಕಡಿಮೆ ಅ ಫಾಲೋವರ್ ಗಳನ್ನು ಹೊಂದಿದ್ದು 12 ಪ್ರೊಫೈಲ್ ಗಳಿಗೆ 10,000 ಕ್ಕಿಂತ ಹೆಚ್ಚು ಫಾಲೋವರ್ ಗಳಿದ್ದಾರೆ. ಈ ಹ್ಯಾಂಡಲ್‌ಗಳಲ್ಲಿ ಹಲವರು ಬಿಜೆಪಿ, ಅದರ ನಾಯಕರು ಮತ್ತು ಅವರ ಸಿದ್ಧಾಂತವನ್ನು ಟೀಕಿಸಿದ್ದಾರೆ. ಇದರಲ್ಲಿ 9 ಬಳಕೆದಾರರು ತಮ್ಮನ್ನು ಪತ್ರಕರ್ತರು, 7 ರಾಜಕೀಯ ಕಾರ್ಯಕರ್ತರು, 5 ವಿದ್ಯಾರ್ಥಿಗಳು, 2 ಕಾರ್ಯಕರ್ತರು ಎಂದು ಗುರುತಿಸಿಕೊಂಡರೆ 7 ಜನರು ಧಾರ್ಮಿಕ ಸಂಸ್ಥೆಗಳಿಗೆ ಸೇರಿದವರು ಎಂದು ತೋರಿಸಿದೆ. ಹಲವಾರು ಪ್ರೊಫೈಲ್‌ಗಳು ಯಾವುದೇ ವೈಯಕ್ತಿಕ ವಿವರಣೆಯನ್ನು ಹೊಂದಿಲ್ಲ.

ಈ ಟ್ವಿಟರ್ ಖಾತೆಗಳಲ್ಲಿ ನಕಾಂಗ್ರೆಸ್, ಯುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಐಎಂಐಎಂ ಮತ್ತು ಭಾರತೀಯ ಇನ್ಸಾನ್ ಪಾರ್ಟಿ (ಬಿಐಪಿ) ಸದಸ್ಯರು ಎಂದು ಹೇಳಿಕೊಳ್ಳುವವರು ಇದ್ದಾರೆ. ಇದಲ್ಲದೆ, ಉತ್ತರ ತ್ರಿಪುರಾದ ಪಾಣಿಸಾಗರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡ ನಂತರ, ಲಾಯರ್ಸ್ ಫಾರ್ ಡೆಮಾಕ್ರಸಿ ಅಡಿಯಲ್ಲಿ ಸತ್ಯಶೋಧನಾ ತಂಡವಾಗಿ ತ್ರಿಪುರಾಕ್ಕೆ ಬಂದ ನಾಲ್ವರು ವಕೀಲರ ಮೇಲೂ ನವೆಂಬರ್ 3 ರಂದು ಪ್ರಕರಣ ದಾಖಲಿಸಲಾಗಿದೆ. ಅವರು ಪೊಲೀಸ್ ಕ್ರಮ ಮತ್ತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ನಾಲ್ವರು ವಕೀಲರು – ಸುಪ್ರೀಂಕೋರ್ಟ್ ವಕೀಲ ಎಹ್ತೇಶಾಮ್ ಹಶ್ಮಿ, ಲಾಯರ್ಸ್ ಫಾರ್ ಡೆಮಾಕ್ರಸಿ ಸಂಚಾಲಕ ಅಮಿತ್ ಶ್ರೀವಾಸ್ತವ್, ಎನ್‌ಸಿಎಚ್‌ಆರ್‌ಒ ರಾಷ್ಟ್ರೀಯ ಕಾರ್ಯದರ್ಶಿ ಅನ್ಸಾರ್ ಇಂದೋರಿ ಮತ್ತು ಪಿಯುಸಿಎಲ್ ಸದಸ್ಯ ಮುಖೇಶ್ ಕುಮಾರ್ ಅವರಿಗೆ ನೋಟಿಸ್ ನೀಡಿದ್ದು, ಐಪಿಸಿ ಸೆಕ್ಷನ್‌ಗಳು ಮತ್ತು ಯುಎಪಿಎಯನ್ನು ಪ್ರಚೋದಿಸುವ ಹೇಳಿಕೆಗಳನ್ನು “ಉತ್ತೇಜಿಸುವ ಹೇಳಿಕೆಗಳ ಮೇಲೆ ದಾಖಲಿಸಲು”, ಧಾರ್ಮಿಕ ಗುಂಪುಗಳ ನಡುವಿನ ದ್ವೇಷ” ಮತ್ತು “ವಿವಿಧ ಧಾರ್ಮಿಕ ಸಮುದಾಯಗಳ ಜನರನ್ನು ಶಾಂತಿ ಭಂಗಕ್ಕೆ ಕಾರಣವಾಗುವಂತೆ ಪ್ರಚೋದಿಸುವುದು” ಮೊದಲಾದುದನ್ನು ಉಲ್ಲೇಖಿಸಿ ನೋಟಿಸ್ ನೀಡಿದ್ದಾರೆ.

ನವೆಂಬರ್ 3 ರಂದು ಪೊಲೀಸರು ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗೆ ನೋಟಿಸ್‌ಗಳನ್ನು ನೀಡಿದ್ದು, ತ್ರಿಪುರಾ ರಾಜ್ಯದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ವಿಷಯವನ್ನು ಪೋಸ್ಟ್ ಮಾಡಿದ 102 ಬಳಕೆದಾರರ ಖಾತೆಗಳು ಮತ್ತು ಪುಟಗಳನ್ನು ನಿರ್ಬಂಧಿಸುವಂತೆ ಕೇಳಿಕೊಂಡರು. ಇವು ಕೋಮುಗಲಭೆಗಳಿಗೆ ಕಾರಣವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ. ಇವರ ವಿರುದ್ಧ ಫೋರ್ಜರಿ, ಕ್ರಿಮಿನಲ್ ಪಿತೂರಿ ಮತ್ತು ಯುಎಪಿಎ ಆರೋಪದ ಮೇಲೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಕೀಲರ ಹೇಳಿಕೆಗಳ “ಒಂದರಿಂದ ಒಂದಕ್ಕೆ ಪರಸ್ಪರ ಸಂಬಂಧ” ಮತ್ತು ಸಾಮಾಜಿಕ ಮಾಧ್ಯಮದಲ್ಲಿ “ಕೋಮು ಪ್ರಚಾರ” ವನ್ನು ಉಲ್ಲೇಖಿಸಿ, ಪೊಲೀಸರು ಈ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಅದೇ ಪ್ರಕರಣದಲ್ಲಿ ಅದೇ ಆರೋಪದ ಮೇಲೆ ದಾಖಲಿಸಿದ್ದಾರೆ.

ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಿಂದ ಟ್ವಿಟರ್ ಲಾ ಎನ್‌ಫೋರ್ಸ್‌ಮೆಂಟ್ ಆನ್‌ಲೈನ್ ರಿಕ್ವೆಸ್ಟ್ ಸಿಸ್ಟಂ ಮೂಲಕ ಕಳುಹಿಸಲಾದ ನೋಟಿಸ್‌ನಲ್ಲಿ ಹೀಗೆ ಹೇಳಲಾಗಿದೆ: “ಈ ಸುದ್ದಿಗಳು/ಪೋಸ್ಟ್‌ಗಳನ್ನು ಪ್ರಕಟಿಸುವಾಗ, ವ್ಯಕ್ತಿಗಳು/ಸಂಸ್ಥೆಗಳು ಇತರ ಕೆಲವು ಘಟನೆಗಳ ಛಾಯಾಚಿತ್ರಗಳು/ವಿಡಿಯೋಗಳು, ಪ್ರಚಾರಕ್ಕಾಗಿ ಕಪೋಲಕಲ್ಪಿತ ಹೇಳಿಕೆಗಳು/ಕಾಮೆಂಟರಿಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಕ್ರಿಮಿನಲ್ ಪಿತೂರಿಯ ಉಪಸ್ಥಿತಿಯಲ್ಲಿ ಧಾರ್ಮಿಕ ಗುಂಪುಗಳು / ಸಮುದಾಯಗಳ ನಡುವಿನ ದ್ವೇಷ ಪೋಸ್ಟ್‌ಗಳು ತ್ರಿಪುರಾ ರಾಜ್ಯದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳ ಜನರ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ, ಇದು ಕೋಮು ಗಲಭೆಗೆ ಕಾರಣವಾಗಬಹುದು”.

ಹತ್ತು ದಿನಗಳ ನಂತರ, ತ್ರಿಪುರಾ ಪೊಲೀಸ್ ಮಹಾನಿರ್ದೇಶಕ ವಿ ಎಸ್ ಯಾದವ್ ಅವರ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ಇದುವರೆಗೆ 128 ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗುರುತಿಸಲಾಗಿದೆ ಮತ್ತು ಇವು 94 ಟ್ವಿಟರ್ ಪೋಸ್ಟ್‌ಗಳು, 32 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು 2 ಯೂಟ್ಯೂಬ್ ಪೋಸ್ಟ್‌ಗಳನ್ನು ಒಳಗೊಂಡಿವೆ ಎಂದು ಹೇಳಿದ್ದಾರೆ.

“ಆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತ್ರಿಪುರಾದಲ್ಲಿನ ಸಮುದಾಯಗಳಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಮತ್ತು ತ್ರಿಪುರಾದ ಶಾಂತಿ-ಪ್ರೀತಿಯ ನಿವಾಸಿಗಳ ಖ್ಯಾತಿಯನ್ನು ಕೆಡಿಸಲು ನಕಲಿ ಫೋಟೋಗಳು, ತಿರುಚಿದ ಸುದ್ದಿಗಳು ಮತ್ತು ಇತರ ಹೇಳಿಕೆಗಳನ್ನು ಬಳಸಿವೆ” ಎಂದು ಪ್ರಕಟಣೆ ತಿಳಿಸಿದೆ.

ಕನಿಷ್ಠ ಒಂದು ಪೋಸ್ಟ್ ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ ಮತ್ತು ಪಾಕಿಸ್ತಾನಿ ಗೂಢಚಾರಿಕೆ ಸಂಸ್ಥೆ ಐಎಸ್‌ಐಗೆ ಶಾಮೀಲಾಗಿ ಭಾರತದ ವಿರುದ್ಧ ಲಾಬಿ ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

“ಇದು ಹೆಚ್ಚಿನ ತನಿಖೆಯಲ್ಲಿದೆ. ಕನಿಷ್ಠ 14 ಲಿಂಕ್‌ಗಳು ಭಾರತದ ಹೊರಗಿನಿಂದ ಹುಟ್ಟಿಕೊಂಡಿವೆ. ಇದು ಭಾರತದ ಹೊರಗೆ ಹೂಡಲಾದ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಮತ್ತು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಮತ್ತು ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು.

ಇದನ್ನೂ ಓದಿ: ಇಬ್ಬರು ಪತ್ರಕರ್ತೆಯರು ರಾಜಕೀಯ ಪಕ್ಷದ ಏಜೆಂಟರು, ನಕಲಿ ದೃಶ್ಯಗಳಿಂದ ಪ್ರಚೋದಿಸಲು ಬಯಸಿದ್ದರು: ತ್ರಿಪುರಾ ಸಚಿವರ ಆರೋಪ

ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ