AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಗಲಾಟೆ ಬಗ್ಗೆ ಆತುರದ ಟ್ವೀಟ್​ ಮಾಡಿದ ಪತ್ರಕರ್ತ ರಾಜ್​ದೀಪ್ ಸರ್ದೇಸಾಯಿಗೆ 2 ವಾರ ಟಿವಿ ಪರದೆಯಿಂದ ದೂರ ಉಳಿಯುವಂತೆ ನಿರ್ಬಂಧ

ರೈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ರಾಜ್​ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ದೆಹಲಿ ಗಲಾಟೆ ಬಗ್ಗೆ ಆತುರದ ಟ್ವೀಟ್​ ಮಾಡಿದ ಪತ್ರಕರ್ತ ರಾಜ್​ದೀಪ್ ಸರ್ದೇಸಾಯಿಗೆ 2 ವಾರ ಟಿವಿ ಪರದೆಯಿಂದ ದೂರ ಉಳಿಯುವಂತೆ ನಿರ್ಬಂಧ
ರಾಜ್​ದೀಪ್ ಸರ್ದೇಸಾಯಿ
TV9 Web
| Edited By: |

Updated on:Apr 06, 2022 | 8:34 PM

Share

ದೆಹಲಿ: ಹಿರಿಯ ಪತ್ರಕರ್ತ ಹಾಗೂ ಪ್ರತಿಷ್ಠಿತ ವಾರ್ತಾ ವಾಹಿನಿಯ ನ್ಯೂಸ್ ಆಂಕರ್ ರಾಜ್​ದೀಪ್ ಸರ್ದೇಸಾಯಿ ಅವರಿಗೆ ಎರಡು ವಾರಗಳ ಕಾಲ ವಾಹಿನಿಯ ತೆರೆಯ ಮೇಲೆ ಬರದಂತೆ ನಿರ್ಬಂಧ ಹಾಗೂ ಒಂದು ತಿಂಗಳ ಸಂಬಳವನ್ನು ಕಡಿತಗೊಳಿಸಿ ಇಂಡಿಯಾ ಟುಡೇ ಗ್ರೂಪ್ ಆದೇಶ ನೀಡಿದೆ.

ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಚಳುವಳಿಯಲ್ಲಿ, ರೈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ರಾಜ್​ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈಗ ಡಿಲೀಟ್ ಆಗಿರುವ ಟ್ವೀಟ್​ನಲ್ಲಿ, ‘45 ವರ್ಷದ ನವ್​ನೀತ್ ಎಂಬ ರೈತನೊಬ್ಬ, ಐಟಿಒ ಬಳಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ’ ಎಂದು ಸರ್ದೇಸಾಯಿ ಹೇಳಿದ್ದರು. ಈ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ ಎಂದೂ ರಾಜ್​ದೀಪ್ ಸರ್ದೇಸಾಯಿ ಟ್ವಿಟ್​ನಲ್ಲಿ ಬರೆದುಕೊಂಡಿದ್ದರು. ಇಂಡಿಯಾ ಟುಡೇ ವರದಿಗಾರನೊಂದಿಗೆ ಮಾತನಾಡುವ ವೇಳೆ, ನವ್​ನೀತ್ ಸಿಂಗ್, ರೈತ ಚಳುವಳಿಯ ಗುರುತಾಗಿ ಉಳಿಯುತ್ತಾರೆ ಮತ್ತು ನವ್​ನೀತ್​ಗೆ ನ್ಯಾಯ ಸಿಗುವವರೆಗೂ ರೈತರು ತಮ್ಮ ಜಾಗ ಬಿಟ್ಟು ಕದಲುವುದಿಲ್ಲ ಎಂದು ಕೂಡ ಸರ್ದೇಸಾಯಿ ಹೇಳಿದ್ದರು.

ರಾಜ್​ದೀಪ್ ಡಿಲೀಟ್ ಮಾಡಿದ್ದ ಟ್ವೀಟ್​ ಇದು..

ಇದನ್ನೂ ಓದಿ: Explainer | ಕೆಂಪುಕೋಟೆಯಲ್ಲಿ ರೈತ ಪ್ರತಿಭಟನಾಕಾರರು ಹಾರಿಸಿದ ಕೇಸರಿ ಧ್ವಜ ಯಾವುದು?

ಟ್ವೀಟ್​ನ್ನು ನಿನ್ನೆಯೇ ಹಿಂಪಡೆದುಕೊಂಡಿದ್ದ ರಾಜ್​ದೀಪ್ ಸರ್ದೇಸಾಯಿ, ಬಳಿಕ, ಟ್ರಾಕ್ಟರ್ ಮಗುಚಿ ರೈತ ಮೃತಪಟ್ಟಿದ್ದಾನೆ ಎಂದು ಸೂಚಿಸುವ ವೀಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಚಳುವಳಿಗಾರರು ರೈತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ, ಪೊಲೀಸ್ ಬ್ಯಾರಿಕೇಡ್​ಗಳನ್ನು ಉರುಳಿಸಲು ಹೊರಟಾಗ, ಟ್ರಾಕ್ಟರ್ ಮಗುಚಿ ಬಿದ್ದು ನವ್​ನೀತ್ ಮೃತಪಟ್ಟಿದ್ದಾರೆ ಎಂದು ಈ ವೀಡಿಯೋ ಹೇಳುತ್ತಿದೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದರು.

ಜೊತೆಗೆ, ರೈತರು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಬಹು ತಾಳ್ಮೆ ವಹಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಹೊರತು, ರೈತರು ಹೇಳಿದಂತೆ ಗುಂಡಿನ ದಾಳಿ ನಡೆಸಿರುವ ಬಗ್ಗೆ ಸಾಕ್ಷಿ ಲಭ್ಯವಿಲ್ಲ ಎಂದು ಕೂಡ ತಿಳಿಸಿದ್ದರು.

ರೈತ ಮೃತಪಟ್ಟಿರುವ ಬಗ್ಗೆ ದೆಹಲಿ ಪೊಲೀಸರು ವೀಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನವ್​ನೀತ್ ಸಿಂಗ್ ಟ್ರಾಕ್ಟರ್ ಮಗುಚಿ ಮೃತಪಟ್ಟಿರುವುದು ಕಂಡಿದೆ. ಜೊತೆಗೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆತನ ದೇಹದ ಎಡಭಾಗಕ್ಕೆ ಬಲವಾದ ಏಟಾದ ಕಾರಣ ಮೃತಪಟ್ಟಿದ್ದಾನೆ ಎಂದು ಖಚಿತವಾಗಿದೆ. ಇದೀಗ, ರಾಜ್​ದೀಪ್ ಸರ್ದೇಸಾಯಿ ಮೇಲೆ ನಿರ್ಬಂಧ ಹೇರಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಆರಂಭಿಸಿದ್ದು. ಟ್ವಿಟರ್ನ ನ್ಯೂಸ್ ವಿಭಾಗದಲ್ಲಿ ಈ ವಿಚಾರವು ಟ್ರೆಂಡಿಂಗ್​ನಲ್ಲಿದೆ.

ರಾಜ್​ದೀಪ್​ ಸರ್​ದೇಸಾಯಿ.. ಸುಳ್ಳು ಸುದ್ದಿಯ ಸರದಾರ?: ಟ್ವಿಟರ್​ನಲ್ಲಿ ಬಂಧನಕ್ಕೆ ಆಗ್ರಹ

Published On - 9:44 pm, Thu, 28 January 21

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ