AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ. ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ […]

ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ
ಆಯೇಷಾ ಬಾನು
|

Updated on:Jun 04, 2020 | 3:15 PM

Share

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ.

ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ ಬಿಡಿಸಿ ಬಿಡಿಸಿ ಹೇಳ್ತಿವೆ.

ಮತ್ತೊಂದು ಮಹಾವಿಪತ್ತಿನಿಂದ ಮುಂಬೈ ಜಸ್ಟ್ ಮಿಸ್! ಮುಂಬೈ ನಗರ ಕೊರೊನಾದಿಂದ ನಲುಗಿದೆ. ದಿನವೊಂದಕ್ಕೆ ಸಾವಿರಾರು ಜನರಿಗೆ ಕೊರೊನಾ ಅಟ್ಯಾಕ್ ಆಗುತ್ತಿದೆ. ಈಮಧ್ಯೆ ಮುಂಬೈಗೆ ಮತ್ತೊಂದು ಆತಂಕ ಶುರುವಾಗಿತ್ತು.‌ ಭಾರಿ ಭೀತಿ ಹುಟ್ಟುಹಾಕಿದ್ದ ನಿಸರ್ಗ ಸೈಕ್ಲೋನ್‌ ಹೊಡೆತದಿಂದ ಮುಂಬೈ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಮಹಾರಾಷ್ಟ್ರದ ಅಲಿಬಾಗ್​ಗೆ ಪ್ರವೇಶಿಸಿದ ಸೈಕ್ಲೋನ್‌ ತನ್ನ ವೇಗವನ್ನ ತಗ್ಗಿಸಿದ್ದು, ಭಾರಿ ಅನಾಹುತ ತಪ್ಪಿದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಸೈಕ್ಲೋನ್‌ಗೆ ಇಬ್ಬರು ಬಲಿಯಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ವಿದ್ಯುತ್ ತಂತಿ ಸ್ಪರ್ಶಿಸಿ 2 ಜಾನುವಾರು ಕೂಡ ಮೃತಪಟ್ಟಿವೆ.

150ರ ಲೆಕ್ಕ.. 40 ಕಿಲೋಮೀಟರ್ ಪಕ್ಕಾ! ಅಂದಹಾಗೆ ಮಹಾರಾಷ್ಟ್ರ ಪ್ರವೇಶಿಸುವ ಮುನ್ನ ನಿಸರ್ಗ ಸೈಕ್ಲೋನ್ ದಕ್ಷಿಣದ ಕಡೆ ತನ್ನ ಪಥ ಬದಲಿಸಿದ್ದು ಇದರ ಪ್ರಭಾವ ಕಡಿಮೆಯಾಗಲು ಕಾರಣವಾಗಿದೆಯಂತೆ. ಅರಬ್ಬಿ ಸಮುದ್ರದಲ್ಲಿ ಹುಟ್ಟಿದ್ದ ನಿಸರ್ಗ ಸೈಕ್ಲೋನ್‌ ಮಹಾರಾಷ್ಟ್ರದಲ್ಲಿ ಭಾರೀ ಆತಂಕ ಮೂಡಿಸಿತ್ತು. ಮೊದಲೇ ಕೊರೊನಾದಿಂದ ಕಂಗಾಲಾಗಿದ್ದ ಮುಂಬೈಗೆ ನಿಸರ್ಗ ಮತ್ತೊಂದು ಶಾಪವಾಗುತ್ತೆ ಅಂತಾ ಹೇಳಲಾಗಿತ್ತು. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು.

ಇದು 150 ಕಿಲೋ ಮೀಟರ್​ಗೂ ತಲುಪುವ ಸಾಧ್ಯತೆ ಇದೆ‌ ಎನ್ನಲಾಗಿತ್ತು. ಆದ್ರೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಬಾಗ್‌ ಸಮೀಪ ಭೂಮಿಗಪ್ಪಳಿಸಿದ ನಿಸರ್ಗ ಸೈಕ್ಲೋನ್‌ ತನ್ನ ವೇಗವನ್ನ 40 ಕಿಲೋ ಮೀಟರ್​ಗೆ ತಗ್ಗಿಸಿತು. ಹೀಗಾಗಿ ಮುಂಬೈ ಜನ ನಿಟ್ಟುಸಿರುಬಿಟ್ರು. ಮಹಾನಗರಿ ಮುಂಬೈನಲ್ಲಿ ಗಾಳಿ ಮತ್ತು ಮಳೆ ಆಗ್ತಿರೋದನ್ನ ಬಿಟ್ರೆ ಭಾರಿ ಅನಾಹುತಗಳು ಸಂಭವಿಸಿಲ್ಲ. ಹೀಗಿದ್ದರೂ ಮುಂಬೈನಲ್ಲಿ ಇಂದು ಮಧ್ಯಾಹ್ನದವರೆಗೂ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

ಒಟ್ನಲ್ಲಿ ಕರಾವಳಿಗೆ ಅಪ್ಪಳಿಸುವ ಮೊದಲೇ ಭಾರಿ ಆತಂಕ ಸೃಷ್ಟಿಸಿದ್ದ ನಿಸರ್ಗ ಚಂಡಮಾರುತ ವೀಕ್ ಆಗಿದೆ. ಇದು ಅಪಾಯದ ಮುನ್ಸೂಚನೆಯಲ್ಲಿದ್ದ ಪ್ರದೇಶಗಳಲ್ಲಿ ನೆಮ್ಮದಿ ತಂದಿದೆ. ಆದ್ರೂ ಒಂದು ಬಲಿ ಪಡೆದಿರುವ ನಿಸರ್ಗ ಸೈಕ್ಲೋನ್ ಇನ್ನೂ ತಣ್ಣಗಾಗಿಲ್ಲ. ಮಧ್ಯಪ್ರದೇಶದ ಹಲವು ಜಿಲ್ಲೆಗಳು ನಿಸರ್ಗ ಸೈಕ್ಲೋನ್ ಸುಳಿಗೆ ಸಿಲುಕಿ, ಭಾರಿ ಮಳೆಯ ಪರಿಣಾಮ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಅಪಾಯದ ಮುನ್ಸೂಚನೆ ಇರುವ ಪ್ರದೇಶಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Published On - 7:49 am, Thu, 4 June 20

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್