Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಗುಟ್ಕಾ ವಿತರಕರ ಮೇಲೆ ಐಟಿ ದಾಳಿ; ₹100 ಕೋಟಿಗಿಂತಲೂ ಹೆಚ್ಚು ಅಘೋಷಿತ ಆದಾಯ ಪತ್ತೆ

ದಾಳಿ ವೇಳೆ ಸುಮಾರು ₹ 7.5 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಾಗೂ ₹ 4 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ₹ 30 ಕೋಟಿ ಮೌಲ್ಯದ ಅಘೋಷಿತ ಆದಾಯವನ್ನು ಹೊಂದಿರುವುದನ್ನು ಗುಂಪು ಒಪ್ಪಿಕೊಂಡಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಗುಜರಾತ್ ಗುಟ್ಕಾ ವಿತರಕರ ಮೇಲೆ ಐಟಿ ದಾಳಿ; ₹100 ಕೋಟಿಗಿಂತಲೂ ಹೆಚ್ಚು ಅಘೋಷಿತ ಆದಾಯ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 24, 2021 | 10:38 AM

ಅಹಮದಾಬಾದ್: ಗುಜರಾತ್ (Gujarat) ಮೂಲದ ಗುಟ್ಕಾ ವಿತರಕರೊಬ್ಬರ (gutkha distributor) ಆವರಣದಲ್ಲಿ ಆದಾಯ ತೆರಿಗೆ ಇಲಾಖೆ(Income Tax department) ನಡೆಸಿದ ಶೋಧದ ವೇಳೆ ₹ 100 ಕೋಟಿಗೂ ಹೆಚ್ಚು ಅಘೋಷಿತ ಆದಾಯ (Undisclosed income)ಪತ್ತೆಯಾಗಿದೆ. ಸರ್ಕಾರ ಹೊರಡಿಸಿದ ಹೇಳಿಕೆಯ ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳು ನವೆಂಬರ್ 16 ರಂದು ಅಹಮದಾಬಾದ್‌ನಲ್ಲಿ ಗುಟ್ಕಾ ವಿತರಕರ ಕನಿಷ್ಠ 15 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಹೇಳಿಕೆಯು ಗುಂಪಿನ ಹೆಸರನ್ನು ಬಹಿರಂಗಪಡಿಸಿಲ್ಲ. ದಾಳಿ ವೇಳೆ ಸುಮಾರು ₹ 7.5 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಾಗೂ ₹ 4 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ₹ 30 ಕೋಟಿ ಮೌಲ್ಯದ ಅಘೋಷಿತ ಆದಾಯವನ್ನು ಹೊಂದಿರುವುದನ್ನು ಗುಂಪು ಒಪ್ಪಿಕೊಂಡಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ನವೆಂಬರ್ 16 ರಂದು ನಡೆಸಿದ ಶೋಧದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ವಿವಿಧ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಈ ಸಾಕ್ಷ್ಯಗಳ ವಿಶ್ಲೇಷಣೆಯು ಗುಂಪಿನಿಂದ ತೆರಿಗೆ ವಂಚನೆಯನ್ನು ಸೂಚಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ಲೆಕ್ಕಕ್ಕೆ ಸಿಗದ ವಸ್ತುಗಳ ಖರೀದಿ ಮಾರಾಟದ ಇನ್‌ವಾಯ್ಸ್ ಮತ್ತು ನಗದಿನಲ್ಲಿ ಲೆಕ್ಕಕ್ಕೆ ಸಿಗದ ವೆಚ್ಚದಂತಹ ದುಷ್ಕೃತ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಮಾಡಲಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಶೋಧ ಕ್ರಮವು ಇಲ್ಲಿಯವರೆಗೆ ₹ 100 ಕೋಟಿಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ಪತ್ತೆಹಚ್ಚಲು ಕಾರಣವಾಗಿದೆ. ಈ ಪೈಕಿ ₹ 30 ಕೋಟಿಗಿಂತ ಹೆಚ್ಚಿನ ಅಘೋಷಿತ ಆದಾಯವನ್ನು ಗುಂಪು ಒಪ್ಪಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ವಶಪಡಿಸಿಕೊಂಡ ವಸ್ತುಗಳ ವಿಶ್ಲೇಷಣೆಯು ಖಾತೆ ಪುಸ್ತಕಗಳಲ್ಲಿ ನಗದು ಮಾರಾಟವನ್ನು ದಾಖಲಿಸಲಾಗಿಲ್ಲ ಎಂದು ಬಹಿರಂಗಪಡಿಸಿದೆ. ಹುಡುಕಾಟ ತಂಡವು ಸ್ಥಿರ ಆಸ್ತಿಗಳಲ್ಲಿ ಬಹಿರಂಗಪಡಿಸದ ಹೂಡಿಕೆಯನ್ನು ಮಾಡಿದೆ ಎಂದು ಸೂಚಿಸುವ ಪುರಾವೆಗಳನ್ನು ಸಹ ಪತ್ತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.  ಸದ್ಯ ಆದಾಯ ತೆರಿಗೆ ಇಲಾಖೆಯು ಗುಂಪಿನ ಬ್ಯಾಂಕ್ ಲಾಕರ್‌ಗಳನ್ನು ಸೀಲ್ ಮಾಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ: ಟಿಎಂಸಿಗೆ ಬಿಜೆಪಿ ಒತ್ತಾಯ