AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್‌ನಲ್ಲಿ ಉತ್ತರಾಯಣ ಪತಂಗ್ ಮಹೋತ್ಸವದಲ್ಲಿ ಗಾಳಿಪಟ ಹಾರಿಸಿದ ಅಮಿತ್ ಶಾ

ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುವ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಪೊಂಗಲ್, ಬಿಹು ಮತ್ತು ಮಾಘಿ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದೇಶದ ಹಲವಾರು ಭಾಗಗಳಲ್ಲಿ ಭಕ್ತರು ವಿವಿಧ ಘಾಟ್‌ಗಳಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಗುಜರಾತಿನಲ್ಲಿ, ಈ ಹಬ್ಬವನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ.

ಗುಜರಾತ್‌ನಲ್ಲಿ ಉತ್ತರಾಯಣ ಪತಂಗ್ ಮಹೋತ್ಸವದಲ್ಲಿ ಗಾಳಿಪಟ ಹಾರಿಸಿದ ಅಮಿತ್ ಶಾ
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on: Jan 14, 2024 | 7:27 PM

ಅಹಮದಾಬಾದ್ ಜನವರಿ 14: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾನುವಾರ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ಉತ್ತರಾಯಣ ಪತಂಗ್ ಮಹೋತ್ಸವದಲ್ಲಿ ಪಾಲ್ಗೊಂಡು ಉತ್ತರಾಯಣ ಆಚರಣೆಯ ಭಾಗವಾಗಿ ಬೆಂಬಲಿಗರೊಂದಿಗೆ ಗಾಳಿಪಟ (kite)ಹಾರಿಸಿದರು. ಭಾನುವಾರ ಬೆಳಗ್ಗೆ ಕೇಂದ್ರ ಗೃಹ ಸಚಿವರು ಅಹಮದಾಬಾದ್‌ನ ಜಗನ್ನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಭಾರತೀಯ ಕ್ಯಾಲೆಂಡರ್‌ನಲ್ಲಿ ಪ್ರಮುಖ ಹಬ್ಬವಾದ ಭಕ್ತರು ಮಕರ ಸಂಕ್ರಾಂತಿಯಂದು ಹಿಂದೂ ದೇವತೆಯಾದ ಸೂರ್ಯನಿಗೆ ಅರ್ಪಣೆಗಳನ್ನು ಮಾಡುತ್ತಾರೆ. ಈ ದಿನವು ಸೂರ್ಯನ ಮಕರಕ್ಕೆ ಸಾಗುವ ಮೊದಲ ದಿನವನ್ನು ಸೂಚಿಸುತ್ತದೆ, ಇದು ಚಳಿಗಾಲದ ಆಯನ ಸಂಕ್ರಾಂತಿಯ ಅಂತ್ಯ ಮತ್ತು ದೀರ್ಘ ದಿನಗಳ ಆರಂಭವನ್ನು ಸೂಚಿಸುತ್ತದೆ.

ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುವ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಪೊಂಗಲ್, ಬಿಹು ಮತ್ತು ಮಾಘಿ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದೇಶದ ಹಲವಾರು ಭಾಗಗಳಲ್ಲಿ ಭಕ್ತರು ವಿವಿಧ ಘಾಟ್‌ಗಳಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಗುಜರಾತಿನಲ್ಲಿ, ಈ ಹಬ್ಬವನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ. ಏಕೆಂದರೆ ಇದು ಮಕರದಲ್ಲಿ ಸೂರ್ಯನ ಸಂಕ್ರಮಣದ ಮೊದಲ ದಿನವನ್ನು ಸೂಚಿಸುತ್ತದೆ.

ರಾಜ್ಯವು ತನ್ನ ಅಂತರಾಷ್ಟ್ರೀಯ ಗಾಳಿಪಟ ಹಾರುವ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಬೆಳಗಿನ ಪ್ರಾರ್ಥನೆಯನ್ನು ಮುಗಿಸಿದ ನಂತರ, ಜನರು ತಮ್ಮ ಟೆರೇಸ್‌ಗಳಲ್ಲಿ ಬಣ್ಣಬಣ್ಣದ ಗಾಳಿಪಟ ಹಾರಿಸುತ್ತಾರೆ.

ಇದನ್ನೂ ಓದಿ: ಅಮಿತ್ ಶಾ, ಜೆಪಿ ನಡ್ಡಾಗೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ನೀಡಿದ VHP

ಗಾಳಿಪಟ ಹಾರಿಸುವ ಹಬ್ಬದಲ್ಲಿ ಸೋತ ತಂಡಕ್ಕೆ ಕೈ ಪೋ ಚೆ ಎಂದು ಕೂಗುವುದು ಸಾಮಾನ್ಯವಾಗಿ ಕೇಳಿಬರುತ್ತದೆ. ಅದು ಬಿಟ್ಟರೆ, ಎಳ್ಳು, ಕಡಲೆಕಾಳುಗಳಿಂದ ಮಾಡಿದ ಚಿಕ್ಕಿ, ಚಳಿಗಾಲದ ತರಕಾರಿಗಳಿಂದ ಮಾಡಿದ ಉಂಡಿಯು ಮುಂತಾದ ಖಾದ್ಯಗಳನ್ನು ಜನರು ತಿನ್ನುತ್ತಾರೆ. ಸ್ನೇಹದ ಬಂಧವನ್ನು ಗಟ್ಟಿಗೊಳಿಸುವುದಕ್ಕೂ ಹೆಸರುವಾಸಿಯಾದ ಈ ಹಬ್ಬದಂದು ಖಿಚಡಿ, ಗಾಳಿಪಟ ಹಾರಿಸುವುದು, ಎಳ್ಳು ಸಿಹಿತಿಂಡಿಗಳು ಮತ್ತು ತೆಂಗಿನಕಾಯಿ ಲಡ್ಡು ಮಾಡಿ ಸಂಭ್ರಮಿಸುತ್ತಾರೆ.

ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಸಚಿವ ಜಿತು ವಘಾನಿ ಅವರು ರಾಜ್‌ಕೋಟ್‌ನಲ್ಲಿ ಗಾಳಿಪಟ ಹಾರಿಸುವ ಮೂಲಕ ಕಾರ್ಮಿಕರೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಮೆಹ್ಸಾನಾದಲ್ಲಿ ರೈಲ್ವೇ ಖಾತೆಯ ರಾಜ್ಯ ಸಚಿವ ದರ್ಶನ ಜರ್ದೋಶ್ ಕೂಡ ಉತ್ತರಾಯಣವನ್ನು ಆಚರಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ