AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾವು ಧರಿಸಿದ್ದ ಮಾಸ್ಕ್​​ನ್ನೇ ತೆಗೆದು ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ; ‘ಇದೆಂತಾ ವರ್ತನೆ ಕೇಂದ್ರ ಸಚಿವರೇ’ ಎನ್ನುತ್ತಿದ್ದಾರೆ ಜನ !

Jyotiraditya Scindia: ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಸ್ವಚ್ಛತೆ ಕಾಪಾಡಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ಸಲಹೆ. ಕೇಂದ್ರ ಸರ್ಕಾರವೂ ಕೂಡ ಇದನ್ನೇ ಒತ್ತಿ ಹೇಳುತ್ತಿದೆ.

ತಾವು ಧರಿಸಿದ್ದ ಮಾಸ್ಕ್​​ನ್ನೇ ತೆಗೆದು ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ; ‘ಇದೆಂತಾ ವರ್ತನೆ ಕೇಂದ್ರ ಸಚಿವರೇ’ ಎನ್ನುತ್ತಿದ್ದಾರೆ ಜನ !
ಮಾಸ್ಕ್​ ತೆಗೆದು, ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ
TV9 Web
| Edited By: |

Updated on:Sep 23, 2021 | 4:46 PM

Share

ಗ್ವಾಲಿಯರ್​: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia )ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಾವು ಧರಿಸಿದ್ದ ಮಾಸ್ಕನ್ನೇ (Used Mask) ತೆಗೆದು ವ್ಯಕ್ತಿಯೊಬ್ಬರಿಗೆ ತೊಡಿಸಿದ ಸಿಂಧಿಯಾ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಹೀಗೆ ಒಬ್ಬರು ಧರಿಸಿದ ಮಾಸ್ಕ್​ನ್ನು ಇನ್ನೊಬ್ಬರಿಗೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಸಿಂಧಿಯಾ ತಾವು ತೊಟ್ಟ ಮಾಸ್ಕ್​ನ್ನು ತೊಡಿಸಿದ್ದು ಇನ್ಯಾರಿಗೂ ಅಲ್ಲ, ಗ್ವಾಲಿಯರ್ (Gwalior) ​​ನ ಮಾಜಿ ಸಂಸದ ಅನೂಪ್​​ ಮಿಶ್ರಾರಿಗೆ ಎಂದೂ ಟೈಮ್ಸ್​ ನೌ ವರದಿ ಮಾಡಿದೆ.  

ಜ್ಯೋತಿರಾದಿತ್ಯ ಸಿಂಧಿಯಾ ಗುರುವಾ ಮುಂಜಾನೆ ಗ್ವಾಲಿಯರ್​ನಲ್ಲಿರುವ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ್ದರು. ದೇಗುಲವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅನೂಪ್​ ಮಿಶ್ರಾ ಮಾಸ್ಕ್​ ಧರಿಸಿಲ್ಲ ಎಂಬುದನ್ನು ಗಮನಿಸಿದ ಕೇಂದ್ರ ಸಚಿವ, ತಾವು ಧರಿಸಿದ್ದ ಎರಡು ಮಾಸ್ಕ್​ಗಳಲ್ಲಿ ಒಂದನ್ನು ತೆಗೆದು ಅವರಿಗೆ ತೊಡಿಸಿದ್ದಾರೆ. ಅದಾದ ಬಳಿಕ ದೇವಿಯ ದರ್ಶನ ಪಡೆದಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಒಂದು ಎನ್​95 ಮಾಸ್ಕ್​ ಧರಿಸಿದ್ದರು. ಅದರ ಮೇಲಿಂದ ಸರ್ಜಿಕಲ್​ ಮಾಸ್ಕ್​ ಹಾಕಿಕೊಂಡಿದ್ದರು. ಅರುಣ್​ ಮಿಶ್ರಾ ಅವರಿಗೆ ತಾವು ಧರಿಸಿದ್ದ ಸರ್ಜಿಕಲ್​ ಮಾಸ್ಕ್​ ಕೊಟ್ಟಿದ್ದಾರೆ.  ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಖೇದಾಪತಿ ಹನುಮಾನ್​ ದೇಗುಲಕ್ಕೆ ತೆರಳಿ ಆಂಜನೇಯನ ಆಶೀರ್ವಾದ ಪಡೆದಿದ್ದಾರೆ.  ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಗ್ವಾಲಿಯರ್​ಗೆ ಭೇಟಿ ನೀಡಿರುವ ಅವರು ನಿನ್ನೆ (ಬುಧವಾರ) ರೋಡ್​ ಶೋ ಕೂಡ ನಡೆಸಿ, ಸಾರ್ವಜನಿಕರೊಂದಿಗೆ ಬೆರೆತಿದ್ದರು.

ಇದೆಂತಾ ಸ್ವಚ್ಛತೆ? ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಸ್ವಚ್ಛತೆ ಕಾಪಾಡಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ಸಲಹೆ. ಕೇಂದ್ರ ಸರ್ಕಾರವೂ ಕೂಡ ಇದನ್ನೇ ಒತ್ತಿ ಹೇಳುತ್ತಿದೆ. ಮಾಸ್ಕ್​ ಧರಿಸುವುದೇ ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂದು. ಅಂಥದ್ದರಲ್ಲಿ ಹೀಗೆ ಒಬ್ಬರು ಬಳಸಿದ ಮಾಸ್ಕ್​ನ್ನೇ ಇನ್ನೊಬ್ಬರು ಬಳಸುವುದು ಎಷ್ಟು ಸರಿ ಎಂದು ಈ ಘಟನೆಯ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯಿಂದ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ

ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ತನಿಖೆ ಆರಂಭಿಸಿದ ಸಿಬಿಐ

(Union minister Jyotiraditya Scindia gives his used mask to Former MP in Madhya Pradesh)

Published On - 4:36 pm, Thu, 23 September 21

Follow Us
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ