AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಸಿಗ್ತಿಲ್ಲ; ಕೊರತೆ ನೀಗಲು ತಕ್ಷಣ ಅದರ ಉತ್ಪಾದನೆಗೆ ಅಸ್ತು ಎಂದ ಸಚಿವ ನಿತಿನ್ ಗಡ್ಕರಿ

black fungus: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದ ಫಲವಾಗಿ ಆಂಫೊಟೆರಿಸಿನ್ ಬಿ ಔಷಧ ಉತ್ಪಾದನೆಗೆ ಪರವಾನಗಿ (ಲೈಸೆನ್ಸ್‌) ಸಿಕ್ಕಿದೆ. ಮಹಾರಾಷ್ಟ್ರದ ವಾರ್ದಾದಲ್ಲಿರುವ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿ ಪ್ರತಿ‌ ನಿತ್ಯ 20 ಸಾವಿರ ವಯಲ್ಸ್ ಇಂಜೆಕ್ಷನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಮುಂದಿನ ಸೋಮವಾರದಿಂದಲೇ ಕಂಪನಿಯು 1,200 ರೂ.ಗೆ ಡ್ರಗ್ಸ್ ನೀಡಲಿದೆ.

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಸಿಗ್ತಿಲ್ಲ; ಕೊರತೆ ನೀಗಲು ತಕ್ಷಣ ಅದರ ಉತ್ಪಾದನೆಗೆ ಅಸ್ತು ಎಂದ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
ಸಾಧು ಶ್ರೀನಾಥ್​
|

Updated on:May 27, 2021 | 12:44 PM

Share

ನವದೆಹಲಿ: ಕೊರೊನಾ ಕಾಲದಲ್ಲಿ ಫಂಗಸ್​​ಗಳ ಹಾವಳಿ ಧುತ್ತನೆ ಎದುರಾಗಿ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಬಹುವಾಗಿ ಕಾಡತೊಡಗಿದೆ. ಅದಾಗಲೇ ಕೊರೊನಾ ಮಹಾಮಾರಿಯೇ ವಿಪರೀತ ಅನ್ನುವಷ್ಟು ಸಂಕಷ್ಟ ತಂದೊಡ್ಡಿರುವಾಗ ಅದಕ್ಕಿಂತಲೂ ಮಾರಕವಾದ ಈ ಫಂಗಸ್​​ಗಳು ನಾನಾ ಬಣ್ಣಗಳಲ್ಲಿ ಸ್ವರೂಪಗಳಲ್ಲಿ ಕೊರೊನಾ ಸೋಂಕಿತರನ್ನು ಬಾಧಿಸತೊಡಗಿದೆ. ಬ್ಲ್ಯಾಕ್ ಫಂಗಸ್ ಬಂದ ಮೇಲೆ ವೈಟ್ ಫಂಗಸ್ ಕಾಣಿಸಿಕೊಂಡಿದ್ದು, ಇದೀಗ ಯೆಲ್ಲೋ ಫಂಗಸ್ ಸಹ ಕಾಣಿಸಿಕೊಂಡಿದೆ.

ಈ ಮಧ್ಯೆ, ಕೇಂದ್ರ ಸರ್ಕಾರವೂ ಪರಿಸ್ಥಿತಿಗೆ ಅನುಗುಣವಾಗಿ ನೀತಿನಿಯಮಗಳಲ್ಲಿ ತಕ್ಷಣಕ್ಕೆ ಮಾರ್ಪಾಡುಗಳನ್ನು ತಂದುಕೊಂಡು ವೈದ್ಯಲೋಕಕ್ಕೆ ಯಾವುದೇ ಬಾಧಕವಾಗದಂತೆ ನೆರವಾಗತೊಡಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧ ಕೊರತೆ ಎದುರಾಗಿದೆ. ಹಾಗಾಗಿ ದೇಶದಲ್ಲಿ ಆಂಫೊಟೆರಿಸಿನ್ ಬಿ ಔಷಧದ ಕೊರತೆಯನ್ನು ಮನಗಂಡು ಅದರ ಉತ್ಪಾದನೆಗೆ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿಗೆ ಪರವಾನಗಿ ನೀಡಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದ ಫಲವಾಗಿ ಆಂಫೊಟೆರಿಸಿನ್ ಬಿ ಔಷಧ ಉತ್ಪಾದನೆಗೆ ಪರವಾನಗಿ (ಲೈಸೆನ್ಸ್‌) ಸಿಕ್ಕಿದೆ. ಮಹಾರಾಷ್ಟ್ರದ ವಾರ್ದಾದಲ್ಲಿರುವ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿ ಪ್ರತಿ‌ ನಿತ್ಯ 20 ಸಾವಿರ ವಯಲ್ಸ್ ಇಂಜೆಕ್ಷನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಆಂಫೊಟೆರಿಸಿನ್ ಬಿ ಡ್ರಗ್ಸ್ ಔಷಧಕ್ಕೆ ಮಾರುಕಟ್ಟೆಯಲ್ಲಿ 7 ಸಾವಿರ ರೂ. ಬೆಲೆಯಿದೆ. ಮುಂದಿನ ಸೋಮವಾರದಿಂದಲೇ ಕಂಪನಿಯು 1,200 ರೂ.ಗೆ ಡ್ರಗ್ಸ್ ನೀಡಲಿದೆ.

(Union minister nitin gadkari mediates to produce amphotericin b injection for black fungus with genetic lifesciences company in vardha)

ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್​ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ

Published On - 12:40 pm, Thu, 27 May 21

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು