ಗನ್ ಕೆಳಗಿಟ್ಟು, ಬಿಳಿ ಬಟ್ಟೆ ತೋರಿಸಿ ತನ್ನ ಸೈನಿಕರ ಶವ ತೆಗೆದುಕೊಂಡ ಹೋದ ಪಾಕ್​

ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದ ಇಬ್ಬರು ಪಾಕ್ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಹಾಜಿಪುರ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಯೋಧರ ಘರ್ಜನೆಗೆ ಪಾಕ್ ಸೈನಿಕರು ಮಟಾಷ್​ ಆಗಿದ್ದಾರೆ. ತನ್ನ ಸೈನಿಕರ ಶವಗಳನ್ನು ತೆಗೆದುಕೊಂಡು ಹೋಗಲು ಬಂದ ಪಾಕಿಸ್ತಾನ ದಾಳಿ ನಡೆಸದಂತೆ ಭಾರತೀಯ ಸೈನಿಕರ ಕಡೆ ಬಿಳಿಯ ಬಟ್ಟೆಯನ್ನು ಪ್ರದರ್ಶಿಸಿದೆ. ತನ್ನ ಕೈನಲ್ಲಿರುವ ಬಂದೂಕುಗಳನ್ನು ಕೆಳಗಿಟ್ಟು, ಬಿಳಿಯ ತೋರಿಸಿ ಮೃತದೇಹಗಳನ್ನು ತೆಗೆದುಕೊಂಡು ಹೋಗಿದೆ. ಈ ರೀತಿ ಬಿಳಿಯ ಬಟ್ಟೆಯನ್ನು […]

ಗನ್ ಕೆಳಗಿಟ್ಟು, ಬಿಳಿ ಬಟ್ಟೆ ತೋರಿಸಿ ತನ್ನ ಸೈನಿಕರ ಶವ ತೆಗೆದುಕೊಂಡ ಹೋದ ಪಾಕ್​
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Sep 14, 2019 | 12:14 PM

ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದ ಇಬ್ಬರು ಪಾಕ್ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಹಾಜಿಪುರ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಯೋಧರ ಘರ್ಜನೆಗೆ ಪಾಕ್ ಸೈನಿಕರು ಮಟಾಷ್​ ಆಗಿದ್ದಾರೆ.

ತನ್ನ ಸೈನಿಕರ ಶವಗಳನ್ನು ತೆಗೆದುಕೊಂಡು ಹೋಗಲು ಬಂದ ಪಾಕಿಸ್ತಾನ ದಾಳಿ ನಡೆಸದಂತೆ ಭಾರತೀಯ ಸೈನಿಕರ ಕಡೆ ಬಿಳಿಯ ಬಟ್ಟೆಯನ್ನು ಪ್ರದರ್ಶಿಸಿದೆ. ತನ್ನ ಕೈನಲ್ಲಿರುವ ಬಂದೂಕುಗಳನ್ನು ಕೆಳಗಿಟ್ಟು, ಬಿಳಿಯ ತೋರಿಸಿ ಮೃತದೇಹಗಳನ್ನು ತೆಗೆದುಕೊಂಡು ಹೋಗಿದೆ. ಈ ರೀತಿ ಬಿಳಿಯ ಬಟ್ಟೆಯನ್ನು ತೋರಿಸುವುದು ನಾವು ಶರಣಾಗಿದ್ದೇವೆ ಅಥವಾ ದಾಳಿಯನ್ನು ನಿಲ್ಲಿಸೋಣ ಎಂಬ ಅರ್ಥವನ್ನು ನೀಡುತ್ತದೆ.

 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us