ಉತ್ತರಾಖಂಡ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ

ಉತ್ತರಾಖಂಡದ ವಿಕಾಸನಗರದಲ್ಲಿ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ನಡೆದಿದೆ. ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 12ನೇ ತರಗತಿಯ ವಿದ್ಯಾರ್ಥಿನಿ ಮನೀಷಾ ತೋಮರ್ ಮೃತಳು. ಆಕೆಯ ಸೋದರಸಂಬಂಧಿ ಸುರೇಂದ್ರ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದು, ಆತನೇ ಶಂಕಿತನಾಗಿದ್ದು ನಾಪತ್ತೆಯಾಗಿದ್ದಾನೆ. ಪೊಲೀಸರು ಹತ್ಯೆಗೆ ಬಳಸಿದ ಆಯುಧ, ಬೈಕ್ ವಶಪಡಿಸಿಕೊಂಡಿದ್ದು, ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಉತ್ತರಾಖಂಡ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ
ಸಾಂದರ್ಭಿಕ ಚಿತ್ರ
Image Credit source: iStock

Updated on: Jan 30, 2026 | 8:27 AM

ವಿಕಾಸನಗರ, ಜನವರಿ 30: ಉತ್ತರಾಖಂಡ(Uttarakhand)ದ ವಿಕಾಸನಗರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದ್ದು, ಈ ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ವಿಕಾಸನಗರ ಕೊತ್ವಾಲಿ ಮಿತಿಯ ಧಾಲಿಪುರದ ಶಕ್ತಿ ಕಾಲುವೆಯ ಬಳಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ತುಂಬಾ ಹರಿತವಾದ ಆಯುಧದಿಂದ ಮಾಡಿದ ಹಲವು ಗಾಯಗಳಿದ್ದವು. ಬಾಲಕಿಯ ಬೆರಳುಗಳು ಮತ್ತು ಮೂಗನ್ನು ಕತ್ತರಿಸಲಾಗಿತ್ತು.

ಮತ್ತು ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಪೊಲೀಸರು ಸ್ಥಳದಿಂದ ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಹರಿತವಾದ ಕತ್ತಿ ತರಹದ ಆಯುಧ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದದ್ಆರೆ. ಮೃತದೇಹದ ಸುತ್ತಲಿನ ಪ್ರದೇಶವು ರಕ್ತದಿಂದ ಕೂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೃತಳನ್ನು 12 ನೇ ತರಗತಿ ವಿದ್ಯಾರ್ಥಿನಿ ಮತ್ತು ಧಲಿಪುರ ನಿವಾಸಿ ಮನೀಷಾ ತೋಮರ್ ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ಔಷಧಿ ಖರೀದಿಸಲು ತನ್ನ ಸೋದರಸಂಬಂಧಿ ಸುರೇಂದ್ರ ಜೊತೆ ಬೈಕ್​ನಲ್ಲಿ ಮನೆಯಿಂದ ಹೊರಟಿದ್ದಳು ಆದರೆ ಹಿಂತಿರುಗಲಿಲ್ಲ.

ತನಿಖೆಯ ಸಮಯದಲ್ಲಿ, ಪೊಲೀಸರು ಪೆಟ್ರೋಲ್ ಪಂಪ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮನಿಷಾ ಮತ್ತು ಸುರೇಂದ್ರ ಬೈಕ್​ನಲ್ಲಿ ಒಟ್ಟಿಗೆ ಇರುವುದು ಕಂಡುಬಂದಿದೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಹರಿತವಾದ ಆಯುಧವನ್ನು ಸುರೇಂದ್ರ ಇತ್ತೀಚೆಗೆ ಖರೀದಿಸಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

ಮತ್ತಷ್ಟು ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ಕೊಲೆಯ ನಂತರ, ಸುರೇಂದ್ರ ನಾಪತ್ತೆಯಾಗಿದ್ದ.ಅಪರಾಧ ಸ್ಥಳದಲ್ಲಿ ಬೈಕ್ ಮತ್ತು ಆಯುಧ ಪತ್ತೆಯಾದ ನಂತರ, ಪೊಲೀಸರು ಎಸ್‌ಡಿಆರ್‌ಎಫ್‌ಗೆ ಕರೆ ಮಾಡಿ ಶಕ್ತಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಕೊಲೆ ಮಾಡಿದ ನಂತರ ಸುರೇಂದ್ರ ಕಾಲುವೆಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ಇಲ್ಲಿಯವರೆಗೆ ಅವನ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಗ್ರಾಮೀಣ ಎಸ್ಪಿ ಪಂಕಜ್ ಗೈರೋಲಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ನಡೆಯುತ್ತಿರುವ ವಿಚಾರಣೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ