AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು

viral video: ದೆಹಲಿಯಲ್ಲಿದ್ದ ಕಾರ್ಮಿಕ ಸುಸ್ತು, ಆಯಾಸ, ಬಳಲಿಕೆಯಿದೆ ಎಂದು ಸ್ವಗ್ರಾಮಕ್ಕೆ ವಾಪಸಾಗಿದ್ದ. ಆದರೆ ಆತನಿಗೆ ಚಿಕಿತ್ಸೆ ಕೊಡುವ ಮೊದಲೇ ಮೃತಪಟ್ಟ ಎಂದು ಕಾರ್ಮಿಕನ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಇದರಲ್ಲಿ ಕಾರ್ಮಿಕನ ಕುಟುಂಬಸ್ಥರೂ ತಪ್ಪಿತಸ್ಥರು ಎಂಬ ಮಾತುಗಳು ಕೇಳಿಬಂದಿದೆ.

ವೈರಲ್ ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು
ವಿಡಿಯೋ: ಕಾರ್ಮಿಕನ ಶವವನ್ನು ಕಸದ ಗಾಡಿಗೆ ಹಾಕಿ ಸಾಗಿಸಿದ ಅಧಿಕಾರಿಗಳು
ಸಾಧು ಶ್ರೀನಾಥ್​
| Updated By: Digi Tech Desk|

Updated on:May 31, 2021 | 12:31 PM

Share

ಲಖ್ನೋ: ಇತ್ತೀಚೆಗೆ ಗಂಗಾ ನದಿ ತಟದಲ್ಲಿ ಕೊರೊನಾ ಸೋಂಕಿತರ ಮೃತ ದೇಹಗಳನ್ನು ನದಿಗೆ ಎಸೆಯಲಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಅಲ್ಲಿಂದಲೇ ಮತ್ತೊಂದು ವಿಡಿಯೋ ವಾರ್ತೆ ಕೇಳಿಬಂದಿದೆ. ದೆಹಲಿಯಲ್ಲಿ ಇತ್ತೀಚೆಗೆ 50 ವರ್ಷದ ಕಾರ್ಮಿಕರೊಬ್ಬರು ಅಸುನೀಗಿದ್ದರು. ಅವರ ಶವವನ್ನು ಮಹೋಬಾ ಜಿಲ್ಲೆಯ ಗ್ರಾಮಕ್ಕೆ ತರಲಾಗಿತ್ತು. ಆ ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಮಿಕನ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಕಸದ ಗಾಡಿಗೆ ಎತ್ತೆಸೆದು ಸಾಗಿಸುವ ಶೋಚನೀಯ ದೃಶ್ಯ ಕಂಡುಬಂದಿದೆ.

ಲಖ್ನೋದಿಂದ 250 ಕಿ.ಮೀ. ದೂರದಲ್ಲಿರುವ ಮಹೋಬಾ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ತನಿಖೆಗೆ ಆಜ್ಞಾಪಿಸಲಾಗಿದೆ. 24 ಗಂಟೆಯಲ್ಲಿ ತನಿಖೆ ನಡೆಸಿ, ವರದಿ ಒಪ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿರುವುದಾಗಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿ ಆರ್​ಕೆ ಗೌತಂ ತಿಳಿಸಿದ್ದಾರೆ.

ಮಹೋಬಾ ಜಿಲ್ಲಾ ಆಸ್ಪತ್ರೆಯ ಶವಾಗಾರದ ಬಳಿ ಈ ಘಟನೆ ನಡೆದಿದ್ದು, ಇಬ್ಬರು ಪೊಲೀಸ್​ ಸಿಬ್ಬಂದಿ ಕಾರ್ಮಿಕನ ಶವವನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ, ಕಸ ಸಾಗಿಸುವ ಟ್ರಕ್​​ನೊಳಕ್ಕೆ ಹಾಕುವ ದೃಶ್ಯ ಮತ್ತು ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೂಚನೆ ನೀಡುವ ದೃಶ್ಯ ಮೊಬೈಲ್​ನಲ್ಲಿ ವಿಡಿಯೋ ಮಾಡಲಾಗಿದೆ. ​

ದೆಹಲಿಯಲ್ಲಿದ್ದ ಕಾರ್ಮಿಕ ಸುಸ್ತು, ಆಯಾಸ, ಬಳಲಿಕೆಯಿದೆ ಎಂದು ಸ್ವಗ್ರಾಮಕ್ಕೆ ವಾಪಸಾಗಿದ್ದ. ಆದರೆ ಆತನಿಗೆ ಚಿಕಿತ್ಸೆ ಕೊಡುವ ಮೊದಲೇ ಮೃತಪಟ್ಟ ಎಂದು ಕಾರ್ಮಿಕನ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಇದರಲ್ಲಿ ಕಾರ್ಮಿಕನ ಕುಟುಂಬಸ್ಥರೂ ತಪ್ಪಿತಸ್ಥರು ಎಂಬ ಮಾತುಗಳು ಕೇಳಿಬಂದಿದೆ.

ಮೃತ ಕಾರ್ಮಿಕನನ್ನು ಜಿಲ್ಲಾ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ ಹೇಳಿದ್ದಾರೆ. ಆದರೆ ಅವರು ಆಸ್ಪತ್ರೆಯತ್ತ ಸುಳಿದಿಲ್ಲ. ಕಾರ್ಮಿಕನ ಪುತ್ರ ಮಾತ್ರ ಆಸ್ಪತ್ರೆಗೆ ಬಂದು, ಶವಪರೀಕ್ಷೆಯ ಬಳಿಕ ತಂದೆಯ ಮೃತ ದೇಹ ಸಾಗಿಸಲು ಸ್ವತಃ ಆತನೇ ಕಸ ಸಾಗಿಸುವ ಟ್ರಕ್​ಗೆ ವ್ಯವಸ್ಥೆ ಮಾಡಿದ್ದ ಎಂಬ ಮಾತುಗಳು ಕೇಳಿಬಂದಿವೆ.

(viral video Uttar Pradesh police Caught Dumping Man Body Into Garbage Van in Mahoba district hospital) ಈ ಗಾಡಿಯಲ್ಲಿ ತುಂಬಾ ಹೆಣ ಸಾಗಿಸಿದ್ದೀನಿ, ಈಗ ಮಕ್ಕಳ ಶವವನ್ನೂ ಸಾಗಿಸಬೇಕಾ? ನಟ ಅರ್ಜುನ್​ ಗೌಡ ಆತಂಕ

Published On - 12:13 pm, Mon, 31 May 21