AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಆಫ್ರಿಕಾದ ದೇಶಗಳಿಗೆ ನೆರವು ನೀಡಲು ಸಿದ್ಧವೆಂದ ಭಾರತ; ಪ್ರಧಾನಿ ಮೋದಿಗೆ ಕೈ ಮುಗಿದ ಮಾಜಿ ಕ್ರಿಕೆಟರ್​ ಕೆವಿನ್​​ ಪೀಟರ್ಸನ್​

ಭಾರತ ಈ ಮಹತ್ವದ ಘೋಷಣೆ ಮಾಡುತ್ತಿದ್ದಂತೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್​ ಕೆವಿನ್​ ಪೀಟರ್ಸನ್​ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಆಫ್ರಿಕಾದ ದೇಶಗಳಿಗೆ ನೆರವು ನೀಡಲು ಸಿದ್ಧವೆಂದ ಭಾರತ; ಪ್ರಧಾನಿ ಮೋದಿಗೆ ಕೈ ಮುಗಿದ ಮಾಜಿ ಕ್ರಿಕೆಟರ್​ ಕೆವಿನ್​​ ಪೀಟರ್ಸನ್​
ಸಾಂಕೇತಿಕ ಚಿತ್ರ
TV9 Web
| Edited By: |

Updated on:Nov 30, 2021 | 8:18 AM

Share

ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಭಾರತ ವಿಶ್ವದ ಹಲವು ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಅಮೆರಿಕಕ್ಕೂ ಕೂಡ ಔಷಧದ ನೆರವು ನೀಡಿತ್ತು. ಈಗ ಕೊವಿಡ್​ 19ನ ಹೊಸ ತಳಿ ಒಮಿಕ್ರಾನ್​ ಆತಂಕ ಶುರುವಾದ ಬೆನ್ನಲ್ಲೇ  ಕೇಂದ್ರ ಸರ್ಕಾರ ನಿನ್ನೆ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ. ಆಫ್ರಿಕಾದಲ್ಲಿ ಒಮಿಕ್ರಾನ್​ (Omicron) ಸೋಂಕಿನಿಂದ ಬಾಧಿತವಾಗಿರುವ ದೇಶಗಳು, ಅದರ ವಿರುದ್ಧ ಹೋರಾಡಲು ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಕೊವಿಡ್ 19 ಲಸಿಕೆಗಳನ್ನು ಪೂರೈಸುವ ಜತೆ ಇನ್ಯಾವುದೇ ರೀತಿಯ ಸಹಾಯವನ್ನೂ ಮಾಡುತ್ತೇವೆ. ಜಾಗತಿಕ ವೇದಿಕೆ ಕೊವ್ಯಾಕ್ಸ್​ ಮೂಲಕ ಆಫ್ರಿಕಾದ ದೇಶಗಳಿಗೆ ಕೊರೊನಾ ಲಸಿಕೆ ಸರಬರಾಜು ಮಾಡಲಾಗುವುದು ಎಂದು ನಿನ್ನೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಭಾರತ ಈ ಮಹತ್ವದ ಘೋಷಣೆ ಮಾಡುತ್ತಿದ್ದಂತೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್​ ಕೆವಿನ್​ ಪೀಟರ್ಸನ್​ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಎಎನ್​ಐ ಸುದ್ದಿ ಮಾಧ್ಯಮದ ಟ್ವೀಟ್​​ನ್ನು ರೀಟ್ವೀಟ್​ ಮಾಡಿರುವ ಪೀಟರ್ಸನ್​, ಭಾರತವು ಮತ್ತೊಮ್ಮೆ ತನ್ನ ಕಾಳಜಿಯ ಮನೋಭಾವನ್ನು ತೋರಿಸಿದೆ !, ದಯಾಮಯ ಹೃದಯದ ಅನೇಕಾನೇಕ ಜನರು ಇರುವ ಅದ್ಭುತ ದೇಶ ಅದು. ಧನ್ಯವಾದಗಳು ಎಂದು ಬರೆದು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಟ್ಯಾಗ್​ ಮಾಡಿದ್ದಾರೆ. ಇನ್ನು ಪೀಟರ್ಸನ್​​ ಮತ್ತು ಭಾರತದ ಸಂಬಂಧ ಬಹಳ ಹಿಂದಿನದು. ಅವರು ಕ್ರಿಕೆಟ್​ ಟೀಂನಲ್ಲಿದ್ದಾಗ ಆಗಾಗ ಭಾರತಕ್ಕೆ ಬರುತ್ತಿದ್ದರು. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೂ ಕೂಡ ಅವರು ಕೆಲವು ವರ್ಷಗಳ ಕಾಲ ಆಟವಾಡಿದ್ದಾರೆ.

ದಕ್ಷೀನ ಆಫ್ರಿಕಾದಲ್ಲಿ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡ ಬಳಿಕ ಅದು ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಭಾರತವೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಗೆ ಹೊಸ ಮಾರ್ಗಸೂಚಿಯನ್ನು ಮೊನ್ನೆ ಬಿಡುಗಡೆ ಮಾಡಿದೆ. ಯುಕೆ ಸೇರಿ ಹೈ ರಿಸ್ಕ್​ ದೇಶಗಳ ಸಾಲಿಗೆ ಸೇರುವ ಒಟ್ಟು 11 ದೇಶಗಳಿಂದ ಬರುವ ಪ್ರಯಾಣಿಕರು ಭಾರತ ತಲುಪುತ್ತಿದ್ದಂತೆ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಒಂದೊಮ್ಮೆ ನೆಗೆಟಿವ್​ ಬಂದರೂ 7 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್​ ಆಗಬೇಕು. ಎಂಟನೇ ದಿನಕ್ಕೆ ಇನ್ನೊಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ. ಅದಾದ ನಂತರ ಭಾರತ ಆಫ್ರಿಕಾ ದೇಶಗಳಿಗೆ ನೆರವು ನೀಡುವ ಘೋಷಣೆ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ಇಲಾಖೆ, ಇದೀಗ ಕೊವಿಡ್​ 19 ಹೊಸ ತಳಿ ಒಮಿಕ್ರಾನ್​ ಕಳವಳ ಮೂಡಿಸಿದೆ. ಈ ರೂಪಾಂತರ ತಳಿ ಬಾಧಿತ ದೇಶಗಳಿಗೆ ಅದರಲ್ಲೂ ಆಫ್ರಿಕಾದ ದೇಶಗಳಿಗೆ ಅಗತ್ಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ. ಮೇಡ್​ ಇನ್​ ಇಂಡಿಯಾ ಲಸಿಕೆಗಳು, ಟೆಸ್ಟ್​ ಕಿಟ್​ಗಳು, ಪಿಪಿಇ ಕಿಟ್​ಗಳು, ಔಷಧಿಗಳು ಸೇರಿ ಏನೇನು ಅಗತ್ಯವಿದೆಯೋ ಅವುಗಳನ್ನು ಕಳಿಸಲು ಎಲ್ಲ ಸಿದ್ಧತೆಗಳೂ ನಡೆದಿವೆ ಎಂದು ಹೇಳಿದೆ.

ಕೊವಿಡ್​ 19 ಶುರುವಾದಾಗಿನಿಂದಲೂ ಭಾರತ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದೆ ಮತ್ತು ಅದಕ್ಕೆ ತಕ್ಕನಾಗಿ ನಡೆದುಕೊಂಡಿದೆ. ಕೊವಿಡ್​ 19 ವಿರುದ್ಧ ಲಸಿಕೆ ಉತ್ಪಾದನೆಯಾಗಿದ್ದು ಭಾರತದಲ್ಲೇ ಮೊದಲು. ಆದರೆ ಭಾರತ ಕೇವಲ ತಮ್ಮಲ್ಲಿನ ಪ್ರಜೆಗಳಿಗೆ ಮಾತ್ರ ನೀಡದೆ ಉಳಿದ ಹಲವು ದೇಶಗಳಿಗೆ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆಗಳನ್ನು ರಫ್ತು ಮಾಡಿದೆ. ಬಡ ರಾಷ್ಟ್ರಗಳ ಸಹಾಯಕ್ಕೆ ನಿಂತಿದೆ. ಆಫ್ರಿಕಾದ ಒಟ್ಟು 41 ರಾಷ್ಟ್ರಗಳಿಗೆ ಈಗಾಗಲೇ 25 ಮಿಲಿಯನ್​ ಡೋಸ್​ಗಳಷ್ಟು ಲಸಿಕೆಯನ್ನು ಭಾರತ ಪೂರೈಕೆ ಮಾಡಿದೆ. ಉಳಿದ 16 ದೇಶಗಳಿಗೆ 1 ಮಿಲಿಯನ್​ ಡೋಸ್​ ನೀಡಿದೆ. ಹಾಗೇ, ಕೊವ್ಯಾಕ್ಸ್​ ವ್ಯವಸ್ಥೆಯಡಿ 33 ದೇಶಗಳಿಗೆ 16 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ಪೂರೈಕೆ ಮಾಡಿದೆ.  ಈಗ ಹೊಸ ತಳಿಯ ವಿರುದ್ಧವೂ ಹೋರಾಟಕ್ಕೆ ಸಹಕಾರ ನೀಡುವುದಾಗಿ ಭಾರತ ಘೋಷಿಸಿದೆ.

ಇದನ್ನೂ ಓದಿ:  Gold Price Today: ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಳ್ಳಿ ಬೆಲೆ ಏರಿಕೆ

Published On - 8:04 am, Tue, 30 November 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?