AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ

Indian Railways Smart Coaches: ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದಿದ್ದಾರೆ.

Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ
ರಾಜಧಾನಿ ಎಕ್ಸ್​​ಪ್ರೆಸ್​ನಲ್ಲಿ ತೇಜಸ್ ಮಾದರಿ ಸ್ಲೀಪಿಂಗ್ ಕೋಚ್​ಗಳು
TV9 Web
| Updated By: Lakshmi Hegde|

Updated on:Jul 20, 2021 | 5:05 PM

Share

ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕಗೊಳಿಸುವ ಪ್ರಯತ್ನವಾಗಿ ಪಶ್ಚಿಮ ವಲಯ ರೈಲ್ವೆ (Western Railway) ಹೊಸದಾಗಿ ನವೀಕರಿಸಿದ ತೇಜಸ್ ಮಾದರಿಯ ಸ್ಲೀಪರ್ ಕೋಚ್ ರೇಕ್ಸ್​ನ್ನು ಪರಿಚಯಿಸಿದೆ. ಈ ತೇಜಸ್​ ಮಾದರಿಯ ಸ್ಮಾರ್ಟ್​ ಸ್ಲೀಪರ್​ ಕೋಚ್​​​ನ್ನು ಸದ್ಯ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್ ರೈಲಿನಲ್ಲಿ ಪರಿಚಯಿಸಲಾಗಿದ್ದು, ಸೋಮವಾರ (ಜು.19) ಇದು ತನ್ನ ಮೊದಲ ಸಂಚಾರ ಮಾಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಈ ಬಗ್ಗೆ ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಆಧುನಿಕ ತೇಜಸ್​ ಮಾದರಿ ಸ್ಲೀಪರ್​ ಕೋಚ್​ಗಳು ದೂರದ ಪ್ರಯಾಣಕ್ಕೆ ತುಂಬ ಅನುಕೂಲ ಆಗಲಿವೆ. ಪ್ರಯಾಣಿಕರು ಇನ್ನಷ್ಟು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಹಾಗೇ ಈ ತೇಜಸ್ ಮಾದರಿ ಸ್ಲೀಪರ್​ ಬೋಗಿಗಳನ್ನು ಆಧುನಿಕ ಕೋಚ್​ ಫ್ಯಾಕ್ಟರಿ (MCF)ಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಇನ್ನು ರಾಜಧಾನಿ ಎಕ್ಸ್​ಪ್ರೆಸ್​ನ ಎರಡು ರೇಕ್ಸ್​ಗಳಲ್ಲಿ ತೇಜಸ್​ ಮಾದರಿ ಸ್ಲೀಪರ್​ ಬೋಗಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಇಂಟಲಿಜೆಂಟ್​ ಸೆನ್ಸಾರ್​ ಆಧರಿತ, ವಿಶ್ವ ದರ್ಜೆಯ ವ್ಯವಸ್ಥೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆ, ಆರಾಮವನ್ನೂ ಗಮನದಲ್ಲಿಟ್ಟುಕೊಂಡು ತೇಜಸ್​ ಮಾದರಿ ಸ್ಲೀಪರ್ ಬೋಗಿಗಳನ್ನು ಪರಿಚಯಿಸಿದ್ದಾರೆ ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ದುಡ್ಡು ಕೊಟ್ಟರೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲಾಗುತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

Published On - 5:03 pm, Tue, 20 July 21

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ