AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ

Indian Railways Smart Coaches: ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದಿದ್ದಾರೆ.

Indian Railways: ರಾಜಧಾನಿ ಎಕ್ಸ್​ಪ್ರೆಸ್​ ರೈಲಲ್ಲಿ ತೇಜಸ್ ಮಾದರಿ ಸ್ಮಾರ್ಟ್​ ಸ್ಲೀಪರ್​ ಬೋಗಿಗಳು; ರೈಲ್ವೆ ಇಲಾಖೆಯ ಹೊಸ ಪ್ರಯೋಗ
ರಾಜಧಾನಿ ಎಕ್ಸ್​​ಪ್ರೆಸ್​ನಲ್ಲಿ ತೇಜಸ್ ಮಾದರಿ ಸ್ಲೀಪಿಂಗ್ ಕೋಚ್​ಗಳು
TV9 Web
| Updated By: Lakshmi Hegde|

Updated on:Jul 20, 2021 | 5:05 PM

Share

ರೈಲು ಪ್ರಯಾಣವನ್ನು ಇನ್ನಷ್ಟು ಆರಾಮದಾಯಕಗೊಳಿಸುವ ಪ್ರಯತ್ನವಾಗಿ ಪಶ್ಚಿಮ ವಲಯ ರೈಲ್ವೆ (Western Railway) ಹೊಸದಾಗಿ ನವೀಕರಿಸಿದ ತೇಜಸ್ ಮಾದರಿಯ ಸ್ಲೀಪರ್ ಕೋಚ್ ರೇಕ್ಸ್​ನ್ನು ಪರಿಚಯಿಸಿದೆ. ಈ ತೇಜಸ್​ ಮಾದರಿಯ ಸ್ಮಾರ್ಟ್​ ಸ್ಲೀಪರ್​ ಕೋಚ್​​​ನ್ನು ಸದ್ಯ ಮುಂಬೈ-ದೆಹಲಿ ರಾಜಧಾನಿ ಎಕ್ಸ್​ಪ್ರೆಸ್ ರೈಲಿನಲ್ಲಿ ಪರಿಚಯಿಸಲಾಗಿದ್ದು, ಸೋಮವಾರ (ಜು.19) ಇದು ತನ್ನ ಮೊದಲ ಸಂಚಾರ ಮಾಡಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಈ ಬಗ್ಗೆ ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಸುಮಿತ್​ ಠಾಕೂರ್​ ಮಾಹಿತಿ ನೀಡಿದ್ದು, ತೇಜಸ್​ ಸ್ಮಾರ್ಟ್ ಕೋಚ್​ಗಳ ಬಳಕೆಯ ಮೂಲಕ ಭಾರತೀಯ ರೈಲ್ವೆ, ತಡೆಗಟ್ಟುವಿಕೆ ನಿರ್ವಹಣೆ ಬದಲು ಮುನ್ಸೂಚಕ ನಿರ್ವಹಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಆಧುನಿಕ ತೇಜಸ್​ ಮಾದರಿ ಸ್ಲೀಪರ್​ ಕೋಚ್​ಗಳು ದೂರದ ಪ್ರಯಾಣಕ್ಕೆ ತುಂಬ ಅನುಕೂಲ ಆಗಲಿವೆ. ಪ್ರಯಾಣಿಕರು ಇನ್ನಷ್ಟು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಹಾಗೇ ಈ ತೇಜಸ್ ಮಾದರಿ ಸ್ಲೀಪರ್​ ಬೋಗಿಗಳನ್ನು ಆಧುನಿಕ ಕೋಚ್​ ಫ್ಯಾಕ್ಟರಿ (MCF)ಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಇನ್ನು ರಾಜಧಾನಿ ಎಕ್ಸ್​ಪ್ರೆಸ್​ನ ಎರಡು ರೇಕ್ಸ್​ಗಳಲ್ಲಿ ತೇಜಸ್​ ಮಾದರಿ ಸ್ಲೀಪರ್​ ಬೋಗಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಇಂಟಲಿಜೆಂಟ್​ ಸೆನ್ಸಾರ್​ ಆಧರಿತ, ವಿಶ್ವ ದರ್ಜೆಯ ವ್ಯವಸ್ಥೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆ, ಆರಾಮವನ್ನೂ ಗಮನದಲ್ಲಿಟ್ಟುಕೊಂಡು ತೇಜಸ್​ ಮಾದರಿ ಸ್ಲೀಪರ್ ಬೋಗಿಗಳನ್ನು ಪರಿಚಯಿಸಿದ್ದಾರೆ ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ದುಡ್ಡು ಕೊಟ್ಟರೆ ಎಸ್​ಎಸ್​ಎಲ್​ಸಿ ಪಾಸ್ ಮಾಡಲಾಗುತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

Published On - 5:03 pm, Tue, 20 July 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ