Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ; ಗೂಗಲ್ ಸರ್ಚ್ ಮಾಡಿ ಜನ ಕೇಳಿದ ಪ್ರಶ್ನೆ ಅಲ್ಲಿಗೆ ಹೋಗುವುದು ಹೇಗೆ?

ಲಕ್ಷದ್ವೀಪಕ್ಕೆ ದೇಶೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದು ಕೂಡಾ ಕಮ್ಮಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ನಾರ್ಕ್ಲಿಂಗ್, ಬಿಳಿ ಮರಳಿನ ಮೇಲೆ ನಡೆಯುವುದು ಅಥವಾ ವಿಶಾಲವಾದ ನೀಲಿ ಸಾಗರದ ಮುಂದೆ ವರ್ಜಿನ್ ಬೀಚ್‌ನಲ್ಲಿ ವಿಶ್ರಮಿಸುವ ಫೋಟೋಗಳು ಭಾರತದಲ್ಲಿ ವೈರಲ್ ಆಗಿದ್ದು, ಜನರು ಗೂಗಲ್​​ನಲ್ಲಿ ಲಕ್ಷದ್ವೀಪದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ; ಗೂಗಲ್ ಸರ್ಚ್ ಮಾಡಿ ಜನ ಕೇಳಿದ ಪ್ರಶ್ನೆ ಅಲ್ಲಿಗೆ ಹೋಗುವುದು ಹೇಗೆ?
ಲಕ್ಷದ್ವೀಪದಲ್ಲಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 05, 2024 | 4:46 PM

ದೆಹಲಿ ಜನವರಿ 05: 2021ರಲ್ಲಿ ಕೋವಿಡ್ -19 (Covid 19) ಸಾಂಕ್ರಾಮಿಕದ ಭಾರತದ ಪ್ರವಾಸೋದ್ಯಮ ವ್ಯವಹಾರ ಮೇಲೆ ಭಾರೀ ಪರಿಣಾಮ ಬೀರಿತ್ತು. ಆಗ ಜಮ್ಮು ಮತ್ತು ಕಾಶ್ಮೀರದ (Jammu and kashmir) ಜಬರ್ವಾನ್ ಶ್ರೇಣಿಯ ತಪ್ಪಲಿನಲ್ಲಿರುವ ಟುಲಿಪ್ ಗಾರ್ಡನ್‌ಗೆ ಎಲ್ಲರೂ ಭೇಟಿ ನೀಡಿ, ಕೇಂದ್ರಾಡಳಿತ ಪ್ರದೇಶದ ಜನರ ಆತ್ಮೀಯ ಆತಿಥ್ಯವನ್ನು ಆನಂದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದರು, ಕಾಶ್ಮೀರ ಟುಲಿಪ್‌ಗಳ ಮೇಲಿನ ಒಂದು ಟ್ವೀಟ್ ಪ್ರವಾಸಿಗರನ್ನು ಅಲ್ಲಿಗೆ ಕರೆತಂದಿತ್ತು. ಇದೀಗ 2024 ರ ಆರಂಭದಲ್ಲಿ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ್ದು, ಇಲ್ಲಿಯೂ ಪ್ರವಾಸಿಗರು ಹೆಚ್ಚಳವಾಗುವ ಸಾಧ್ಯತೆ ಇದೆ.

ಲಕ್ಷದ್ವೀಪದ ಪ್ರಕೃತಿ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಪ್ರಶಾಂತವಾದ ಕಡಲತೀರಗಳು, ನೀಲಿ ನೀರು, ಬಿಳಿ ಮರಳುಗಳು, ಸ್ನೇಹಪರ ಜನರನ್ನು ಹೊಂದಿರುವ ಈ ಜಾಗ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.

ಭೇಟಿಗಳ ಮೇಲಿನ ನಿರ್ಬಂಧಗಳು, ತೊಡಕಿನ ಪ್ರಕ್ರಿಯೆಗಳು ಮತ್ತು ಕಡಿಮೆ ಜ್ಞಾನವು ಪ್ರವಾಸಿಗರನ್ನು ದೂರವಿಟ್ಟಿತ್ತು. 2022 ರಲ್ಲಿ ಲಕ್ಷದ್ವೀಪವು 1,00,000 ವಿದೇಶಿ ಪ್ರಯಾಣಿಕರನ್ನು ಸ್ವೀಕರಿಸಿದೆ ಎಂದು ಡೇಟಾ ಸೂಚಿಸುತ್ತದೆ. ಈ ದಾಖಲೆಯು 2021 ರಲ್ಲಿ ಕೇವಲ 4,000 ರ ಹಿಂದಿನ ಸಂಖ್ಯೆಯಿಂದ ಹೆಚ್ಚಳವಾಗಿದೆ. ಲಕ್ಷದ್ವೀಪಕ್ಕೆ ದೇಶೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದು ಕೂಡಾ ಕಮ್ಮಿ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ನಾರ್ಕ್ಲಿಂಗ್, ಬಿಳಿ ಮರಳಿನ ಮೇಲೆ ನಡೆಯುವುದು ಅಥವಾ ವಿಶಾಲವಾದ ನೀಲಿ ಸಾಗರದ ಮುಂದೆ ವರ್ಜಿನ್ ಬೀಚ್‌ನಲ್ಲಿ ವಿಶ್ರಮಿಸುವ ಫೋಟೋಗಳು ಭಾರತದಲ್ಲಿ ವೈರಲ್ ಆಗಿದ್ದು, ಜನರು ಗೂಗಲ್​​ನಲ್ಲಿ ಲಕ್ಷದ್ವೀಪದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.

ಲಕ್ಷದ್ವೀಪದ ಬಗ್ಗೆ ಗೂಗಲಿಸಿದ ನೆಟ್ಟಿಗರು

ಬುಧವಾರ ಪ್ರಧಾನಿ ಮೋದಿ ದ್ವೀಪದಲ್ಲಿದ್ದಾಗ, ಭಾರತದ ಜನರು ಹೊಸ ಪ್ರಯಾಣದ ತಾಣವನ್ನು ಗೂಗಲ್ ಮಾಡುತ್ತಿದ್ದರು. ಬುಧವಾರ, ‘ಲಕ್ಷದ್ವೀಪ’ ಭಾರತದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪದಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿದೆ. ಆ ದಿನ 50,000 ಕ್ಕೂ ಹೆಚ್ಚು ಹುಡುಕಾಟಗಳು ನಡೆದಿವೆ.

ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಉದ್ಘಾಟಿಸಲು ಜನವರಿ 2 ಮತ್ತು 3 ರಂದು ಮೋದಿ ಲಕ್ಷದ್ವೀಪಕ್ಕೆ ಬಂದಿದ್ದು ಅನೇಕ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ದ್ವೀಪದ ಸೌಂದರ್ಯವನ್ನು ಆಸ್ವಾದಿಸಿದ್ದು, ಅದನ್ನು ಸವಿಯುವಂತೆ ಪ್ರಯಾಣಿಕರನ್ನು ಒತ್ತಾಯಿಸಿದರು. ಸಾಹಸ ಕ್ರೀಡೆ ಬಯಸುವವರಿಗೆ ಲಕ್ಷದ್ವೀಪ ನಿಮ್ಮ ಪಟ್ಟಿಯಲ್ಲಿರಲೇಬೇಕು ಎಂದರು. ಲಕ್ಷದ್ವೀಪ್ ಕೇವಲ ದ್ವೀಪಗಳ ಸಮೂಹವಲ್ಲ; ಇದು ಸಂಪ್ರದಾಯಗಳ ಕಾಲಾತೀತ ಪರಂಪರೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ: ಅದ್ಭುತ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇಲ್ಲಿದೆ ಫೋಟೋ

ಬಂಡೆಗಳು ಮತ್ತು ಸಮುದ್ರ ಜೀವಿಗಳನ್ನು ಅನ್ವೇಷಿಸಲು ಪ್ರಧಾನಿ ನೀರಿನ ಅಡಿಯಲ್ಲಿ ಹೋದರು ಮತ್ತು ಸ್ನಾರ್ಕೆಲಿಂಗ್ ಗೇರ್ ಧರಿಸಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದರು. ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿರುವಾಗ ಭಾರತವು ಹೆಚ್ಚು ಹುಡುಕಿದ ಪದಗಳೆಂದರೆ ‘Lakshadweep island’, ‘Andaman’, ‘Lakshadweep flight, ‘Lakshadweep airport’ ಮತ್ತು ‘Kochi to Lakshadweep’.

ಗೂಗಲ್ ಟ್ರೆಂಡ್ ನೋಡಿದರೆ ಜನವರಿ 4ರಂದು ಅತೀ ಹೆಚ್ಚು ಜನರು ಗೂಗಲ್ ನಲ್ಲಿ ಲಕ್ಷದ್ವೀಪ ಬಗ್ಗೆ ಹುಡುಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್