AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಯಾವಾಗ ನಿಲ್ಲುತ್ತದೆ?’: ಮಣಿಪುರ ಹಿಂಸಾಚಾರದ ಬಗ್ಗೆ ಮಿಜೋರಾಂ ಸಿಎಂ ಝೋರಂತಂಗ ಟ್ವೀಟ್

ಅದು ಯಾವಾಗ ನಿಲ್ಲುತ್ತದೆ? ಎಂದು ಟ್ವಿಟರ್‌ನಲ್ಲಿ ಮುಖ್ಯಮಂತ್ರಿಯ ಚಿತ್ರವಿರುವ ಪೋಸ್ಟರ್ ಪೋಸ್ಟ್ ಮಾಡಿದ್ದು, ನನ್ನ ಮಣಿಪುರಿ ಝೋ ಜನಾಂಗೀಯ ಸಹೋದರರಿಗೆ ಎಂದು ಹೇಳಿದ್ದಾರೆ. ಕುಕಿ-ಝೋಮಿ ಬುಡಕಟ್ಟು ದೊಡ್ಡ "ಝೋ" ಜನಾಂಗಕ್ಕೆ ಸೇರಿದ್ದಾಗಿದೆ

'ಇದು ಯಾವಾಗ ನಿಲ್ಲುತ್ತದೆ?': ಮಣಿಪುರ ಹಿಂಸಾಚಾರದ ಬಗ್ಗೆ ಮಿಜೋರಾಂ ಸಿಎಂ ಝೋರಂತಂಗ ಟ್ವೀಟ್
ಝೋರಂತಂಗ
ರಶ್ಮಿ ಕಲ್ಲಕಟ್ಟ
|

Updated on: Jul 04, 2023 | 7:58 PM

Share

ನೆರೆಯ ಮಣಿಪುರದಲ್ಲಿ (Manipur violence) ಹಿಂಸಾಚಾರ ನಿಲ್ಲಿಸಿ ಎಂದು ಮಿಜೋರಾಂ (Mizoram) ಮುಖ್ಯಮಂತ್ರಿ ಝೋರಂತಂಗ (Zoramthanga) ಮಂಗಳವಾರ ಮನವಿ ಮಾಡಿದ್ದಾರೆ. ಜವಾಬ್ದಾರಿಯುತ ಮತ್ತು ಕಾನೂನು ಪಾಲಿಸುವ ನಾಗರಿಕರು ಶಾಂತಿ ಮರುಸ್ಥಾಪಿಸಲು ತಕ್ಷಣದ ಮಾರ್ಗಗಳನ್ನು ಹುಡುಕಬೇಕು ಎಂದು ಅವರು ಹೇಳಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ ಒಂದು ಕ್ರೂರ, ಅಹಿತಕರ ಘಟನೆಗೆ ಸಾಕ್ಷಿಯಾಯಿತು. ಈ ಕ್ಷಣದಲ್ಲಿ, ಬೆಳಗ್ಗೆ 3:30, ಜುಲೈ 4, 2023ರವರೆಗೆ ಏನೂ ಬದಲಾಗಿಲ್ಲ ಎಂದು ತೋರುತ್ತದೆ. ಎಣಿಸಿ ನೋಡಿದರೆ ಇಂದು 62ನೇ ದಿನ ಎಂದು ಝೋರಂತಂಗ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮೇ 3 ರಿಂದ ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು ಇದರಲ್ಲಿ ಕನಿಷ್ಠ 120 ಜನರು ಸಾವನ್ನಪ್ಪಿದ್ದಾರೆ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 40,000 ಜನರು ಸ್ಥಳಾಂತರಗೊಂಡಿದ್ದಾರೆ.

ಅದು ಯಾವಾಗ ನಿಲ್ಲುತ್ತದೆ? ಎಂದು ಟ್ವಿಟರ್‌ನಲ್ಲಿ ಮುಖ್ಯಮಂತ್ರಿಯ ಚಿತ್ರವಿರುವ ಪೋಸ್ಟರ್ ಪೋಸ್ಟ್ ಮಾಡಿದ್ದು, ನನ್ನ ಮಣಿಪುರಿ ಝೋ ಜನಾಂಗೀಯ ಸಹೋದರರಿಗೆ ಎಂದು ಹೇಳಿದ್ದಾರೆ. ಕುಕಿ-ಝೋಮಿ ಬುಡಕಟ್ಟು ದೊಡ್ಡ “ಝೋ” ಜನಾಂಗಕ್ಕೆ ಸೇರಿದ್ದಾಗಿದೆ. ಲಿಂಗ ಮತ್ತು ವಯಸ್ಸಿನ ಹೊರತಾಗಿಯೂ ಚರ್ಚ್‌ಗಳನ್ನು ಸುಡುವುದು, ಕ್ರೂರ ಹತ್ಯೆಗಳು ಮತ್ತು ಎಲ್ಲಾ ಪ್ರಕೃತಿಯ ಹಿಂಸಾಚಾರದ ಯಾವುದೇ ಚಿತ್ರಗಳು ಮತ್ತು ವಿಡಿಯೊ ತುಣುಕುಗಳನ್ನು ನೋಡಬಾರದು ಎಂದು ನಾನು ಬಯಸುತ್ತೇನೆ. ಶಾಂತಿ ನೆಲೆಸಲು ಒಂದೇ ಒಂದು ಮಾರ್ಗವಿದ್ದರೆ, ನಾವು ಅದನ್ನು ಆರಿಸಿಕೊಳ್ಳೋಣವೇ? ಅನೇಕ ಜೀವಗಳು ಕಳೆದುಹೋಗಿವೆ, ರಕ್ತಪಾತಗಳು, ದೈಹಿಕ ಚಿತ್ರಹಿಂಸೆ ನಡೆದಿದೆ. ಸಂತ್ರಸ್ತರು ಸಾಧ್ಯವಿರುವಲ್ಲೆಲ್ಲಾ ಆಶ್ರಯವನ್ನು ಹುಡುಕುತ್ತಿದ್ದಾರೆ. ಯಾವುದೇ ಸಂದೇಹವಿಲ್ಲದೆ, ಆ ಸಂತ್ರಸ್ತರು ನನ್ನ ಸಂಬಂಧಿಕರು. ನನ್ನ ಸ್ವಂತ ರಕ್ತ ಹಂಚಿಕೊಂಡವರು. ನಾವು ಮೌನವಾಗಿರುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಬೇಕೇ? ನಾನು ಹಾಗೆ ಯೋಚಿಸುವುದಿಲ್ಲ.  ಶಾಂತಿ ಮತ್ತು ಸಹಜತೆಯನ್ನು ತಕ್ಷಣ ಮರುಸ್ಥಾಪಿಸಲು ನಾನು ಕರೆ ನೀಡಲು ಬಯಸುತ್ತೇನೆ. ಶಾಂತಿ ಮರುಸ್ಥಾಪನೆಗಾಗಿ ತಕ್ಷಣದ ಮಾರ್ಗಗಳನ್ನು ಹುಡುಕುವುದು ಭಾರತದ ಜವಾಬ್ದಾರಿಯುತ ಮತ್ತು ಕಾನೂನು-ಪಾಲಿಸುವ ನಾಗರಿಕರು ಅಥವಾ ಘಟಕಗಳ ಕರ್ತವ್ಯ ಮತ್ತು ಕಡ್ಡಾಯವಾಗಿದೆ. ಮಾನವ ಸ್ಪರ್ಶದೊಂದಿಗೆ ಅಭಿವೃದ್ಧಿ ಮತ್ತು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಣಿಪುರದಲ್ಲಿರುವ ನನ್ನ ಝೋ ಜನಾಂಗೀಯ ಬುಡಕಟ್ಟುಗಳಿಗೂ ಅನ್ವಯಿಸುತ್ತದೆ ಎಂದು ಮಿಜೋರಾಂ ಸಿಎಂ ಹೇಳಿದ್ದಾರೆ.

ತಾನು ನಿರೀಕ್ಷಿಸಿದಂತೆ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಹೇಳಿದ್ದಾರೆ. ಮಣಿಪುರದ ಕ್ರೂರ ಹಿಂಸಾಚಾರವು ಮಿಜೋರಾಂನಲ್ಲಿ 12,000 ಕ್ಕೂ ಹೆಚ್ಚು ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ (IDP- Internally Displaced People) ಕಾರಣವಾಗಿದೆ. ಮಣಿಪುರ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ನಿರಾಶ್ರಿತರು 50,000 ಕ್ಕಿಂತ ಹೆಚ್ಚಿದ್ದಾರೆ. ಮಾನವೀಯ ನೆಲೆಯಲ್ಲಿ ಕೇಂದ್ರ ಸರ್ಕಾರವು ನಮಗೆ ತಕ್ಷಣದ ಸಹಾಯ ಹಸ್ತವನ್ನು ನೀಡಬೇಕೆಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಝೋರಂತಂಗ.

ಇದನ್ನೂ ಓದಿ: ಜುಲೈ 7-8 ರಂದು ಛತ್ತೀಸ್‌ಗಢ, ಯುಪಿ, ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ

ಮೇ 27 ರಂದು ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಣಿಪುರದಿಂದ ಸ್ಥಳಾಂತರಗೊಂಡವರನ್ನು ಬೆಂಬಲಿಸಲು ₹ 10 ಕೋಟಿ ಕೇಳಿದರು. ಮಿಜೋರಾಂ ಪ್ರಸ್ತುತ 11 ಜಿಲ್ಲೆಗಳಲ್ಲಿ ಮಣಿಪುರದಿಂದ 12,301 ಐಡಿಪಿಗಳನ್ನು ಹೊಂದಿದೆ, ಐಜ್ವಾಲ್ ಜಿಲ್ಲೆಯಲ್ಲಿ 13 ಪರಿಹಾರ ಶಿಬಿರಗಳು ಮತ್ತು ಕೊಲಾಸಿಬ್ ಜಿಲ್ಲೆಯಲ್ಲಿ 14 ಪರಿಹಾರ ಶಿಬಿರಗಳಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ