AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​

ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಜರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಗುಂಪನ್ನು ನೋಡಿ ಅಲ್ಲಿಗೆ ಬಂದ ನೌಚಂಡಿ ಪೊಲೀಸರು ಪತಿ-ಪತ್ನಿ ಹೊಡೆದಾಟವನ್ನು ನಿಲ್ಲಿಸಿದ್ದಾರೆ.

ಪ್ರಿಯತಮೆಗೆ ಬಟ್ಟೆ ಕೊಡಿಸುತ್ತಿದ್ದ ಪತಿಗೆ ಎಲ್ಲರೆದುರೂ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಗಲಾಟೆ ಮಧ್ಯೆ ಲವರ್​ ಸೈಲೆಂಟ್ ಎಸ್ಕೇಪ್​
ಸಾರ್ವಜನಿಕ ಸ್ಥಳದಲ್ಲಿ ಪತಿಗೆ ಹೊಡೆದ ಪತ್ನಿ
Lakshmi Hegde
|

Updated on: Mar 16, 2021 | 6:11 PM

Share

ಮೀರತ್​: ಪ್ರಿಯತಮೆಗೆ ಬಟ್ಟೆ ಖರೀದಿ ಮಾಡಲು ಬಂದಿದ್ದವನನ್ನು ಆತನ ಪತ್ನಿ ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಆತ ಸಿಕ್ಕಿಬಿದ್ದ ಸ್ಥಳದಲ್ಲಿ ದೊಡ್ಡ ನಾಟಕ, ಗಲಾಟೆಯೇ ನಡೆದುಹೋಗಿದೆ. ಸಾರ್ವಜನಿಕರ ಸ್ಥಳದಲ್ಲಿ, ಎಲ್ಲರೂ ನೋಡುತ್ತಿದ್ದಂತೆ ಪತ್ನಿ, ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೆರೆದಿದ್ದವರೆಲ್ಲ ಮೌನವಾಗಿ ನೋಡುತ್ತ ನಿಂತಿದ್ದರೆ, ಆ ಗಲಾಟೆ ಮಧ್ಯೆ ಪ್ರಿಯತಮೆ ಸೈಲೆಂಟ್​ ಆಗಿ ಎಸ್ಕೇಪ್​ ಆಗಿದ್ದಾಳೆ.

ಮೀರತ್​ನ ಶಾಸ್ತ್ರಿನಗರದ, ಸೆಂಟ್ರಲ್​ ಮಾರುಕಟ್ಟೆಯ ಬಳಿ ಈ ಹೈಡ್ರಾಮಾ ನಡೆದಿದೆ. ಅದ್ನಾನ್​ ಮತ್ತು ಆಯೇಷಾ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಅದ್ನಾನ್​ ತನ್ನ ಪತ್ನಿಗೆ ಹಿಂಸೆ ನೀಡಲು, ಹೊಡೆಯಲು ಶುರು ಮಾಡಿದ್ದಾನೆ. ಇದರಿಂದ ಆಯೇಷಾಗೆ ಪತಿಯ ಮೇಲೆ ಅನುಮಾನ ಬಂದು, ಸೋಮವಾರ (ಮಾ.15) ಬೆಳಗ್ಗೆ ಅವನನ್ನು ಹಿಂಬಾಲಿಸಿದ್ದಾರೆ. ಆತ ಇನ್ನೊಬ್ಬಳೊಂದಿಗೆ ಬಟ್ಟೆ ಅಂಗಡಿಗೆ ಹೋಗುವುದನ್ನು ನೋಡಿದ ಆಯೇಷಾ, ಅಂಗಡಿಯ ಹೊರಗೇ ಕಾಯುತ್ತಿದ್ದರು. ಪ್ರಿಯತಮೆಯೊಂದಿಗೆ ಅದ್ನಾನ್​ ಹೊರಬರುತ್ತಿದ್ದಂತೆ ಅವನನ್ನು ಹಿಡಿದುಕೊಂಡ ಆಯೆಷಾ ಸಿಕ್ಕಾಪಟೆ ಬೈದಿದ್ದಾರೆ. ಒಂದೇ ಸಮ ಹೊಡೆಯಲು ಪ್ರಾರಂಭಿಸಿದ್ದಾರೆ.

ಘಟನೆ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಜರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಗುಂಪನ್ನು ನೋಡಿ ಅಲ್ಲಿಗೆ ಬಂದ ನೌಚಂಡಿ ಪೊಲೀಸರು ಪತಿ-ಪತ್ನಿ ಹೊಡೆದಾಟವನ್ನು ನಿಲ್ಲಿಸಿದ್ದಾರೆ. ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾನು ಆಯೇಷಾಗೆ ಈಗಾಗಲೇ ಡಿವೋರ್ಸ್​ ನೀಡಿದ್ದಾಗಿ ಅದ್ನಾನ್​ ಹೇಳಿಕೊಂಡಿದ್ದಾನೆ. ಆದರೆ ಅದಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಯನ್ನೂ ಆತ ನೀಡಿಲ್ಲ. ಆಯೇಷಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಳೆ ಎಂದೂ ದೂರು ನೀಡಿದ್ದಾನೆ. ಅದ್ನಾನ್​ ಆರೋಪವನ್ನು ತಳ್ಳಿಹಾಕಿದ ಆಯೇಷಾ, ಆತನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದಾರೆ.

ಇದನ್ನೂ ಓದಿ: ‘ಬಿಜೆಪಿಯವ್ರು ಹೆಣ್ಣುಮಕ್ಕಳಿಗೆ ಕಾಟ ಕೊಡ್ತಾರೆ.. ಅವರ ಕಾಟ ತಡೆಯೋಕಾಗದೆ ಹೆಣ್ಣುಮಕ್ಕಳು ಪಕ್ಷದಲ್ಲಿ ಇರಲ್ಲ’

‘ಆ ಮುಸ್ಲಿಂ ಹುಡುಗ ದೇಗುಲಕ್ಕೆ ಬಂದಿದ್ದು ನೀರಿಗಾಗಿ ಅಲ್ಲ..’-ದಾಸ್ನಾದಲ್ಲಿ ಹಿಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಿದ ಪ್ರಧಾನ ಅರ್ಚಕ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು