ಕಾಳಹಸ್ತಿಯಲ್ಲಿ‌ ಕೊರೊನಾ ಮಹಿಳಾ ವಾರಿಯರ್​ ಮನೆಗೆ ಬೀಗ ಹಾಕಿದ ಮಾಲೀಕ!

ಹೈದರಾಬಾದ್: ಕೊರೊನಾ‌ ಸೋಂಕು ವಿರುದ್ಧದ ಸಮರ ಕಾಲದಲ್ಲಿ ತುರ್ತು ಕಾರ್ಯಗಳಲ್ಲಿ‌ ತೊಡಗಿಸಿಕೊಂಡಿರೋ ಕಂದಾಯ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಲ್ಲಿದ್ದರು. ಆದ್ರೆ ಆ ಮನೆಯ ಮಾಲೀಕ ತಾನು ಬಾಡಿಗೆಗೆ ನೀಡಿದ್ದ ಮನೆಗೆ ಬೀಗ ಹಾಕಿಕೊಂಡು ಹೋಗಿರೋ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಜರುಗಿದೆ. ಚಿತ್ತೂರು ಜಿಲ್ಲಾ ಕಾಳಹಸ್ತಿಯಲ್ಲಿ‌ ಈ ಘಟನೆ ನಡೆದಿದ್ದು, ಮನೆಯ‌ ಮಾಲೀಕನ ಈ ಕೃತ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ತುರ್ತು ಕಾರ್ಯಗಳಿಂದಾಗಿ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಿದ್ದರು. ಇದರಿಂದಾಗಿ ಮಹಿಳೆಗೆ ಕೊರೊನಾ ಸೋಂಕು […]

ಕಾಳಹಸ್ತಿಯಲ್ಲಿ‌ ಕೊರೊನಾ ಮಹಿಳಾ ವಾರಿಯರ್​ ಮನೆಗೆ ಬೀಗ ಹಾಕಿದ ಮಾಲೀಕ!
ಸಾಧು ಶ್ರೀನಾಥ್​

Updated on: May 06, 2020 | 4:17 PM

ಹೈದರಾಬಾದ್: ಕೊರೊನಾ‌ ಸೋಂಕು ವಿರುದ್ಧದ ಸಮರ ಕಾಲದಲ್ಲಿ ತುರ್ತು ಕಾರ್ಯಗಳಲ್ಲಿ‌ ತೊಡಗಿಸಿಕೊಂಡಿರೋ ಕಂದಾಯ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಲ್ಲಿದ್ದರು. ಆದ್ರೆ ಆ ಮನೆಯ ಮಾಲೀಕ ತಾನು ಬಾಡಿಗೆಗೆ ನೀಡಿದ್ದ ಮನೆಗೆ ಬೀಗ ಹಾಕಿಕೊಂಡು ಹೋಗಿರೋ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಜರುಗಿದೆ.

ಚಿತ್ತೂರು ಜಿಲ್ಲಾ ಕಾಳಹಸ್ತಿಯಲ್ಲಿ‌ ಈ ಘಟನೆ ನಡೆದಿದ್ದು, ಮನೆಯ‌ ಮಾಲೀಕನ ಈ ಕೃತ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ತುರ್ತು ಕಾರ್ಯಗಳಿಂದಾಗಿ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಿದ್ದರು. ಇದರಿಂದಾಗಿ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು. ನಂತರ ಐಸೋಲೇಷನ್ ವಾರ್ಡನಲ್ಲಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಐಸೋಲೇಷನ್ ಅವಧಿ ಮುಗಿದ ನಂತರ ಮನೆಗೆ ಹೋದಾಗ ಮನೆಯ ಮಾಲೀಕ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಈ ಬಗ್ಗೆ ಕೇಳಿದಾಗ ಮನೆಯ ಮಾಲೀಕ ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾನೆ. ಮನೆಯೊಳಕ್ಕೆ‌ ಕಾಲಿಡದಂತೆ ಎಚ್ಚರಿಸಿದ್ದಾನೆ. ಮನೆಗೆ ಹೋಗದಂತೆ ತಡೆದಿದ್ದಾನೆ.

ಮನೆ ಮಾಲೀಕನ‌ ಈ ವರ್ತನೆಯಿಂದ‌ ತಹಶೀಲ್ದಾರ್ ಕಚೇರಿ ಉದ್ಯೋಗಿಯಾದ ಸದರಿ ಮಹಿಳೆ ಕಣ್ಣೀರು ಹಾಕಿದ್ದಾರೆ. ತಮ್ಮ ಉದ್ಯೋಗಿಗೆ ಪರಿಸ್ಥಿತಿ ಗಮನಿಸಿದ ಶ್ರೀಕಾಕುಳಂ ತಹಶೀಲ್ದಾರ್ ಅವರಿಗೆ ಸದ್ಯಕ್ಕೆ ಬೇರೆ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದ್ರೆ, ಕೊರೊನಾ ನಿವಾರಣೆಗಾಗಿ ಜನರ ಸೇವೆ ಮಾಡುತ್ತಿರುವವರಿಗೆ ಕೆಲವರು ಈ ರೀತಿಯಾಗಿ ವರ್ತಿಸಿರೋದು ಎಷ್ಟು ಸರಿ ಅನ್ನೋದನ್ನ ಯೋಚಿಸಬೇಕಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us