AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರನ್ನು ‘ತುಳಸಿ ಭಾಯಿ’ ಎಂದು ಕರೆದು ಸ್ವಾಗತಿಸಿದ ಮೋದಿ, ನನಗೆ ಆ ಹೆಸರು ಇಷ್ಟ ಎಂದ ಘೆಬ್ರೆಯೆಸಸ್

ಗಾಂಧಿನಗರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿದ ಘೆಬ್ರೆಯೆಸಸ್, ತುಳಸಿ ಭಾಯಿ ಎಂಬ ಹೆಸರು ನನಗೆ ಇಷ್ಟವಾಗಿದೆ ಏಕೆಂದರೆ 'ತುಳಸಿ' ಒಂದು ಔಷಧೀಯ ಸಸ್ಯ. ನಾನು ಇಲ್ಲಿ ವೆಲ್​​ನೆಸ್ ಸೆಂಟರ್​​ನಲ್ಲಿ  ತುಳಸಿ ನೆಟ್ಟಿದ್ದೇನೆ. ಇದನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರನ್ನು 'ತುಳಸಿ ಭಾಯಿ' ಎಂದು ಕರೆದು ಸ್ವಾಗತಿಸಿದ ಮೋದಿ, ನನಗೆ ಆ ಹೆಸರು ಇಷ್ಟ ಎಂದ ಘೆಬ್ರೆಯೆಸಸ್
ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ರಶ್ಮಿ ಕಲ್ಲಕಟ್ಟ
|

Updated on: Aug 16, 2023 | 7:58 PM

Share

ದೆಹಲಿ ಆಗಸ್ಟ್ 16: ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಅವರು ಆರೋಗ್ಯ ಮತ್ತು ಔಷಧದ ಕುರಿತು ಹಲವಾರು ಸಮಾವೇಶಗಳಲ್ಲಿ ಭಾಗವಹಿಸಲು ಬುಧವಾರ ಗುಜರಾತ್‌ಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಘೆಬ್ರೆಯೆಸಸ್ ಅವರನ್ನು ಸ್ವಾಗತಿಸಿ, ತುಳಸಿ ಬಾಯಿ ಎಂಬ ಹೊಸ ಹೆಸರಿನಿಂದ ಕರೆದಿದ್ದಾರೆ. ತಮ್ಮ ಹೊಸ ಹೆಸರಿನ ಬಗ್ಗೆ ಪ್ರತಿಕ್ರಿಯಿಸಿದ WHO ಮುಖ್ಯಸ್ಥರು ಪಕ್ಕಾ ಗುಜರಾತಿ ಹೆಸರು ನನಗಿಷ್ಟವಾಯಿತು ಎಂದಿದ್ದಾರೆ.

ಗಾಂಧಿನಗರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿದ ಘೆಬ್ರೆಯೆಸಸ್, ತುಳಸಿ ಭಾಯಿ ಎಂಬ ಹೆಸರು ನನಗೆ ಇಷ್ಟವಾಗಿದೆ ಏಕೆಂದರೆ ‘ತುಳಸಿ’ ಒಂದು ಔಷಧೀಯ ಸಸ್ಯ. ನಾನು ಇಲ್ಲಿ ವೆಲ್​​ನೆಸ್ ಸೆಂಟರ್​​ನಲ್ಲಿ  ತುಳಸಿ ನೆಟ್ಟಿದ್ದೇನೆ. ಇದನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಕೇಂದ್ರ ಆಯುಷ್ ಸಚಿವಾಲಯದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ WHO ಮುಖ್ಯಸ್ಥರು ಸ್ಥಳದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಿರುವುದು ಕಾಣಬಹುದು. ನನ್ನ ಒಳ್ಳೆಯ ಸ್ನೇಹಿತೆ ತುಳಸಿ ಭಾಯೀ ನವರಾತ್ರಿಗೆ ಸಿದ್ಧರಾಗಿದ್ದಾರೆ. ಭಾರತಕ್ಕೆ ಸುಸ್ವಾಗತ, @DrTedros!” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಈ ಹೆಸರನ್ನು ಅವರಿಗೆ ಮೊದಲು ನೀಡಲಾಯಿತು, ಅಲ್ಲಿ ಅವರು ‘ಪಕ್ಕ ಗುಜರಾತಿ’ ಹೆಸರು ನೀಡುವಂತೆ ಘೆಬ್ರೆಯೆಸಸ್ ಕೇಳಿದ್ದರು. ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ನನಗೆ ಭಾರತೀಯ ಶಿಕ್ಷಕರು ಕಲಿಸಿದರು ಮತ್ತು ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಇಂದು ಅವರು ನನ್ನಲ್ಲಿ  ‘ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಹೆಸರನ್ನು ನಿರ್ಧರಿಸಿದ್ದೀರಾ?’ ಎಂದು ಕೇಳಿದರು. ಹಾಗಾಗಿ ನಾನು ಅವರನ್ನು ಗುಜರಾತಿ ಹೆಸರು ತುಳಸಿ ಭಾಯಿ ಎಂದು ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಕಳೆದ ವರ್ಷ ಹೇಳಿದ್ದರು.

WHO ಮುಖ್ಯಸ್ಥರು ಕ್ಷಯರೋಗ ತೊಡೆದುಹಾಕುವ ಉದ್ದೇಶದ ಸಚಿವರ ಸಭೆ, ಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ ಮತ್ತು G20 ಆರೋಗ್ಯ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಂಶೋಧನೆ, ಸಾಕ್ಷ್ಯ ಮತ್ತು ಕಲಿಕೆ, ನೀತಿ, ಡೇಟಾ ಮತ್ತು ನಿಯಂತ್ರಣ, ನಾವೀನ್ಯತೆ ಮತ್ತು ಡಿಜಿಟಲ್ ಆರೋಗ್ಯ, ಜೀವವೈವಿಧ್ಯ, ಇಕ್ವಿಟಿ ಮತ್ತು ಸಾಂಪ್ರದಾಯಿಕ ಆರೋಗ್ಯ ರಕ್ಷಣೆ ಜ್ಞಾನದ ಬಗ್ಗೆ ಇಲ್ಲಿ ಗೋಷ್ಠಿ ನಡೆಯಲಿದೆ.

ಇದನ್ನೂ ಓದಿ: ಇತಿಹಾಸ ರಚಿಸಲು ಪ್ರಧಾನಿ ಮೋದಿ ಸಮರ್ಥರಲ್ಲ: ಮ್ಯೂಸಿಯಂ ಹೆಸರು ಬದಲಾಯಿಸಿದ್ದಕ್ಕೆ ಪ್ರತಿಪಕ್ಷಗಳ ಟೀಕೆ

ಸಚಿವಾಲಯವು ಕನ್ವೆನ್ಷನ್ ಸೆಂಟರ್‌ನಲ್ಲಿ ಯೋಗ ಮತ್ತು ಧ್ಯಾನದ ಬಗ್ಗೆ ಗೋಷ್ಠಿಗಳನ್ನು ಆಯೋಜಿಸುತ್ತದೆ. ಹೋಟೆಲ್ ಸ್ಥಳಗಳಲ್ಲಿ ಯೋಗ ಮತ್ತು ಧ್ಯಾನ ಸೆಷನ್‌ಗಳ ನಡುವೆ ಮಹಾತ್ಮಾ ಮಂದಿರ ಕನ್ವೆನ್ಷನ್ ಸೆಂಟರ್‌ನಲ್ಲಿ ಸಣ್ಣ ಯೋಗ ವಿರಾಮಗಳು ಸಹ ಇರುತ್ತವೆ ಎಂದು ಎಎನ್‌ಐ ವರದಿ ಮಾಡಿದೆ. ಘೆಬ್ರೆಯೆಸಸ್ ಅವರು ಕೇಂದ್ರದ ಪ್ರಾಥಮಿಕ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಅನ್ನು ಶ್ಲಾಘಿಸಿದರು. ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಉಪಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಸರಿಯಾದ ಹೂಡಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್