NO ಬ್ಯಾಂಕ್ ಆದ Yes Bank: ಫೋನ್ ಪೇ ಗ್ರಾಹಕರು ಕಂಗಾಲು!

ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್​ ಬ್ಯಾಂಕ್ ಸೇವೆಗಳಿಗೆ ಆರ್​ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್​ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್​ಬಿಐ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್​ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ […]

NO ಬ್ಯಾಂಕ್ ಆದ Yes Bank: ಫೋನ್ ಪೇ ಗ್ರಾಹಕರು ಕಂಗಾಲು!
ಸಾಧು ಶ್ರೀನಾಥ್​

Updated on: Mar 06, 2020 | 1:07 PM

ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್​ ಬ್ಯಾಂಕ್ ಸೇವೆಗಳಿಗೆ ಆರ್​ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್​ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್​ಬಿಐ ಜಾರಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್​ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ ವ್ಯವಹಾರಗಳೇ ಸ್ಥಗಿತಗೊಂಡು ಬಿಟ್ಟಿವೆ. ಇದರಿಂದ ಅನಾಯಾಸವಾಗಿ ಹಣಕಾಸು ಟ್ರಾನ್ಸಾಕ್ಷನ್ ಮಾಡುತ್ತಿದ್ದ ಫೋನ್ ಪೇ ಗ್ರಾಹಕರು ಕಂಗಾಲಾಗಿದ್ದಾರೆ.

ಯಸ್ ಬ್ಯಾಂಕ್ ವ್ಯವಹಾರಗಳಿಗೆ RBI ನಿರ್ಬಂಧ:
ಏನಾಗಿದೆಯೆಂದರೆ ಯಸ್ ಬ್ಯಾಂಕ್ ವ್ಯವಹಾರಗಳಿಗೆ ಆರ್​ಬಿಐ ನಿರ್ಬಂಧ ಹೇರಿದೆ. ಏಕೆಂದರೆ ಯಸ್ ಬ್ಯಾಂಕ್ ಮಾರುಕಟ್ಟೆ ಮೌಲ್ಯ ಸುಮಾರು 9ಸಾವಿರ ಕೋಟಿ ರೂ. ಇದ್ದು, ಅದರ NPA ಅಂದ್ರೆ ಸಾಲದ ಮೊತ್ತವೇ 10 ಸಾವಿರ ಕೋಟಿಗಿಂತ ಅಧಿಕವಾಗಿದೆ. ಇದನ್ನು ಮನಗಂಡ ಆರ್​ಬಿಐ ತಕ್ಷಣವೇ ಎಚ್ಚೆತ್ತು ಯಸ್ ಬ್ಯಾಂಕ್ ವ್ಯವಹಾರಗಳಿಗೆ ಬೀಗ ಜಡಿದಿದೆ. ಈ ಮಧ್ಯೆ, ಯಸ್ ಬ್ಯಾಂಕ್‌ ಷೇರುಗಳು ಸಹ ಶೇ.59ರಷ್ಟು ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕೊಂದು ಈ ಪ್ರಮಾಣದಲ್ಲಿ ಪಲ್ಟಿ ಹೊಡೆದಿರುವುದು ಇದೇ ಮೊದಲು.

Published On - 11:40 am, Fri, 6 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us