AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ

Philanthropist Jamsetji Tata - ಗುಜರಾತಿನ ಬಡ ಝೋರಾಸ್ಟ್ರಿಯನ್ ಪಾರ್ಸಿ ಕುಟುಂಬದಲ್ಲಿ ಜನಿಸಿದ ಜಮ್ಷೆಡ್ ಜೀ ಅವರು ತಮ್ಮ ಕುಟುಂಬದಲ್ಲಿ ಲೋಕೋಪಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಅವರ ಪುತ್ರರಾದ ದೊರಾಬ್ಜಿ ಟಾಟಾ ಮತ್ತು ರತನ್​​ ಜೀ ಟಾಟಾ ಅವರು ಈ ಪರಂಪರೆಯನ್ನು ಮುಂದುವರೆಸಿದರು, ಕೈಗಾರಿಕಾ ಪ್ರಗತಿಗೆ ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಯೋಜನೆಗಳಿಗೆ ಅಪಾರ ಕೊಡುಗೆ ನೀಡಿದರು. ಟಾಟಾ ಕುಟುಂಬವು ಉದಾರ/ಉದಾತ್ತ ದತ್ತಿ ಯೋಜನೆಗಳಿಗಾಗಿಯೇ ಮೀಸಲಾಗಿದೆ ಎಂಬಂತೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.

ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ
ಅತಿದೊಡ್ಡ ದಾನಿಯಾಗಿರುವ ಭಾರತೀಯ
ಸಾಧು ಶ್ರೀನಾಥ್​
|

Updated on:Oct 12, 2024 | 1:27 PM

Share

ಸಮಾಜ ಸೇವೆ, ಸಮಾಜ ಕಲ್ಯಾಣ, ಜನೋಪಯೋಗಿ, ಜನೋಪಕಾರಿ, ಲೋಕೋಪಕಾರಿ (philanthropy) ಕುರಿತು ಭಾರತದಲ್ಲಿ ಚರ್ಚಿಸುವಾಗ ಹೆಸರಾಂತ ಕೈಗಾರಿಕೋದ್ಯಮಿಗಳಾದ ಮೊನ್ನೆಯಷ್ಟೆ ಅಮರರಾದ ರತನ್ ಟಾಟಾ, ಅಜೀಂ ಪ್ರೇಮ್‌ಜಿ ಮತ್ತು ಮುಖೇಶ್ ಅಂಬಾನಿ ಅಂತಹವರು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ. ಆದಾಗ್ಯೂ, ದಾನಧರ್ಮದ ಕ್ಷೇತ್ರದಲ್ಲಿ (charitable) ಆಳವಾಗಿ ಅಧ್ಯಯನ ಮಾಡುವಾಗ ವಿಶ್ವದ ಅತ್ಯಂತ ಉದಾರ ದಾನಿ (donor) ಎಂಬ ಬಿರುದು ಟಾಟಾ ಗ್ರೂಪ್‌ನ ಸಂಸ್ಥಾಪಕ ಜಮ್ಷೆಡ್ ಜೀ ಟಾಟಾಗೆ (Jamsetji Nusserwanji Tata) ಸಲ್ಲುತ್ತದೆ. ತಮ್ಮ ಜೀವಿತಾವಧಿಯಲ್ಲಿ ಅವರು ₹8.29 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದವರು ಅವರು. ಪ್ರಚಲಿತದಲ್ಲಿ ಕಾಣಬರುವ ಬಿಲಿಯನೇರ್‌ಗಳ ಕೊಡುಗೆಗಳ ಸಮ್ಮುಖದಲ್ಲಿ ಇವರ ಉದಾರ ಉದಾತ್ತ ದಾನ ಗಮನಾರ್ಹವಾಗಿ ಎದ್ದುಕಾಣುತ್ತದೆ. ಶತಮಾನದ ಲೋಕೋಪಕಾರಿಗಳ ಕುರಿತಾದ ವರದಿಯ (2021 EdelGive Hurun Philanthropists of the Century report) ಪ್ರಕಾರ ಒಟ್ಟು ದೇಣಿಗೆ 102.4 ಶತಕೋಟಿ ಅಮೆರಿಕನ್ ಡಾಲರ್​​ (ಕಾಲಕಾಲಕ್ಕೆ ಹಣದುಬ್ಬರದ ಲೆಕ್ಕಕ್ಕೆ ಸರಿಹೊಂದಿಸಲಾಗಿದೆ) ತಲುಪುವ ಮೂಲಕ ಜಮ್ಷೆಡ್ ಜೀ ಟಾಟಾ ಅಗ್ರಗಣ್ಯರಾಗಿ ರಾರಾಜಿಸುತ್ತಾರೆ. ಬಿಲ್ ಗೇಟ್ಸ್​​ ಮತ್ತು ಮೆಲಿಂಡಾ ಗೇಟ್ಸ್ US $ 74.6 ಶತಕೋಟಿ ಮೊತ್ತದ ಕೊಡುಗೆಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸುತ್ತಾರೆ. ಅಗ್ರಗಣ್ಯ ಉದಾರಿ ಜಮ್ಷೆಡ್ ಜೀ ಭಾರತೀಯ ಕೈಗಾರಿಕೋದ್ಯಮದ ಪಿತಾಮಹ ಮಾರ್ಚ್ 3, 1839 ರಂದು ಜನಿಸಿದ ಜಮ್ಷೆಡ್ ಜೀ ಟಾಟಾ ಅವರು ತಮ್ಮ ಲೋಕೋಪಕಾರಿ ದೃಷ್ಟಿಯ ಮೂಲಕ ಅಸಂಖ್ಯಾತ ಜನ ಜೀವನದ ಮೇಲೆ ಇಂದಿಗೂ ನಿರಂತರ ಪ್ರಭಾವ ಬೀರಿದ್ದಾರೆ. ಅವರ ಗಮನಾರ್ಹ ಕೊಡುಗೆಗಳು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತದಾದ್ಯಂತ ಲಕ್ಷಾಂತರ ಜನರ...

Published On - 1:16 pm, Sat, 12 October 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ