ಉತ್ತರ ಕನ್ನಡ: 35 ಮೀ. ಉದ್ದದ ನೀಲಿ ತಿಮಿಂಗಿಲದ ಮೃತದೇಹ ಪತ್ತೆ; ಇಲ್ಲಿದೆ ಫೋಟೋಸ್

Edited By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2023 | 3:58 PM

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿಮಿಂಗಿಲವು ಸುಮಾರು 35 ಮೀ. ಉದ್ದವಿದ್ದು ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

1 / 6
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

2 / 6
ತಿಮಿಂಗಿಲವು ಸುಮಾರು 35 ಮೀ. ಉದ್ದವಿದ್ದು ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ತಿಮಿಂಗಿಲವು ಸುಮಾರು 35 ಮೀ. ಉದ್ದವಿದ್ದು ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

3 / 6
ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹವಿದೆ. ಮೃತಪಟ್ಟು ಹಲವು ದಿನ ಕಳೆದಿರುವ ಸಾಧ್ಯತೆ ಇದ್ದು, ಅಲೆಗಳ ರಭಸಕ್ಕೆ ಈಗ ದಡಕ್ಕೆ ಬಂದು ಬಿದ್ದಿದೆ.

ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು, ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹವಿದೆ. ಮೃತಪಟ್ಟು ಹಲವು ದಿನ ಕಳೆದಿರುವ ಸಾಧ್ಯತೆ ಇದ್ದು, ಅಲೆಗಳ ರಭಸಕ್ಕೆ ಈಗ ದಡಕ್ಕೆ ಬಂದು ಬಿದ್ದಿದೆ.

4 / 6
ಇನ್ನು ಇದರ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ. ಜೊತೆಗೆ ಇದು ಶಾರ್ಕ್​ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆ ಕೂಡ ಇದೆ.

ಇನ್ನು ಇದರ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ. ಜೊತೆಗೆ ಇದು ಶಾರ್ಕ್​ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆ ಕೂಡ ಇದೆ.

5 / 6
ಇನ್ನು  ಈ ತಿಮಿಂಗಿಲಗಳು ಸಂತಾನೋತ್ಪತ್ತಿ ವೇಳೆ ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಬರುತ್ತದೆ.

ಇನ್ನು ಈ ತಿಮಿಂಗಿಲಗಳು ಸಂತಾನೋತ್ಪತ್ತಿ ವೇಳೆ ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಬರುತ್ತದೆ.

6 / 6
ಇಂತಹ ಬೃಹತ್​ ಗಾತ್ರದ ಮೀನುಗಳು ಹೆಚ್ಚಾಗಿ ನೇತ್ರಾಣೀ ದ್ವೀಪ, ಮುಗಳಿ ಕಡಲಧಾಮದ ಬಳಿ ವಲಸೆ ಬರುತ್ತದೆ ಎಂದು ಕಡಲ ಜೀವಶಾಸ್ತ್ರ ಸಂಶೋಧಕರೊಬ್ಬರು ತಿಳಿಸಿದ್ದಾರೆ.

ಇಂತಹ ಬೃಹತ್​ ಗಾತ್ರದ ಮೀನುಗಳು ಹೆಚ್ಚಾಗಿ ನೇತ್ರಾಣೀ ದ್ವೀಪ, ಮುಗಳಿ ಕಡಲಧಾಮದ ಬಳಿ ವಲಸೆ ಬರುತ್ತದೆ ಎಂದು ಕಡಲ ಜೀವಶಾಸ್ತ್ರ ಸಂಶೋಧಕರೊಬ್ಬರು ತಿಳಿಸಿದ್ದಾರೆ.

Vinayak Badiger
Follow Us