ಗದಗ: ಗ್ರಾಹಕರನ್ನು ಆಕರ್ಷಿಸುತ್ತಿರುವ ಕೇಕ್ನಲ್ಲಿ ತಯಾರಿಸಿದ ಅಯೋಧ್ಯೆ ಶ್ರೀರಾಮ ಮಂದಿರ
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾಜ್ಯದಲ್ಲೂ ಇದರ ಸಂಭ್ರಮ ಮನೆ ಮಾಡಿದೆ. ರಾಮ ಭಕ್ತರು ಮಣ್ಣಿನಲ್ಲಿ ರಾಮನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಇದೀಗ, ಗದಗದಲ್ಲಿ ಬೇಕರಿ ಅಂಗಡಿಯೊಂದರಲ್ಲಿ ಕೇಕ್ ಮೂಲಕ ಸಿದ್ಧಪಡಿಸಿದ ಅಯೋಧ್ಯೆ ಶ್ರೀರಾಮ ಮಂದಿರ ಗ್ರಾಹಕರನ್ನು ಆಕರ್ಷಿಸುತ್ತಿದೆ.
Updated on: Jan 18, 2024 | 3:09 PM

ಗದಗದಲ್ಲಿ ಬೇಕರಿ ಅಂಗಡಿಯೊಂದರಲ್ಲಿ ಕೇಕ್ ಮೂಲಕ ಸಿದ್ಧಪಡಿಸಿದ ಅಯೋಧ್ಯೆ ಶ್ರೀರಾಮ ಮಂದಿರ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯದಲ್ಲೂ ಇದರ ಸಂಭ್ರಮ ಮನೆ ಮಾಡಿದೆ. ರಾಮ ಭಕ್ತರು ಮಣ್ಣಿನಲ್ಲಿ ರಾಮನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಗದಗ ನಗರದಲ್ಲೂ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂಭ್ರಮ ಜೋರಾಗಿಯೇ ಇದೆ. ಸಾಸನೂರ ಬೇಕರಿ ಅಂಗಡಿಯಲ್ಲಿ ಶ್ರೀರಾಮ ಮಂದಿರ ಕಣ್ಮನ ಸೆಳೆಯುತ್ತಿದೆ.

ಕೇಕ್ನಲ್ಲಿ ತಯಾರಾದ ಈ ಸುಂದರ ಅಯೋಧ್ಯೆ ಮಂದಿರವು ಲೈಟಿಂಗ್ಸ್ನಲ್ಲಿ ಝಗಮಗಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

ಕೇಕ್ನಲ್ಲಿ ಸಿದ್ಧಪಡಿಸಲಾದ ಈ ರಾಮ ಮಂದಿರ ನೋಡಲು ಜನರು ಅಂಗಡಿಗೆ ಆಗಮಿಸುತ್ತಿದ್ದಾರೆ. ಕೇಕ್ ರಾಮ ಮಂದಿರ ನೋಡಿ ಫಿದಾ ಆದ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

20-25 ಕೆಜಿ ಕೇಕ್ನಲ್ಲಿ ಅಯೋಧ್ಯೆ ರಾಮ ಮಂದಿರದ ಮಾದರಿಯನ್ನು ತಯಾರಿಸಲಾಗಿದೆ.

7-10 ಮಂದಿ ಕಾರ್ಮಿಕರ ಕೈಚಳಕದಿಂದ ಕೇಕ್ನಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ.

ಕೇಕ್ನಲ್ಲಿ ತಯಾರಿಸಲಾದ ರಾಮ ಮಂದಿರದ ಮಾದರಿಯನ್ನು ಜನವರಿ 22 ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತಿದೆ.



