Sign In

By signing in or creating an account, you agree with Associated Broadcasting Company's Terms & Conditions and Privacy Policy.

Andrew Symonds: ಆಂಡ್ರ್ಯೂ ಸೈಮಂಡ್ಸ್​​ ಬಗ್ಗೆ ಬಹುತೇಕರಿಗೆ ತಿಳಿದಿರದ ಅಚ್ಚರಿಯ ಸಂಗತಿಗಳಿವು

Andrew Symonds Death: ಆಂಡ್ರ್ಯೂ ಸೈಮಂಡ್ಸ್ ಶನಿವಾರ (ಮೇ.14) ರಾತ್ರಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಸೈಮಂಡ್ಸ್ ಅವರ ವೃತ್ತಿಜೀವನದಂತೆಯೇ ವೈಯಕ್ತಿಕ ಜೀವನವೂ ವರ್ಣರಂಜಿತವಾಗಿದೆ.

TV9 Web
| Updated By: shivaprasad.hs

Updated on: May 15, 2022 | 2:02 PM

ಆಂಡ್ರ್ಯೂ ಸೈಮಂಡ್ಸ್ ಶನಿವಾರ (ಮೇ.14) ರಾತ್ರಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಸೈಮಂಡ್ಸ್ ಅವರ ವೃತ್ತಿಜೀವನದಂತೆಯೇ ವೈಯಕ್ತಿಕ ಜೀವನವೂ ವರ್ಣರಂಜಿತವಾಗಿದೆ. ಬಾಲ್ಯದಿಂದ ತೊಡಗಿ ತಮ್ಮ ಜೀವನದ ಕೊನೆಯ ಕಾಲಘಟ್ಟದವರೆಗೂ ಕ್ರಿಕೆಟ್ ಹೊರತಾದ ವಿಚಾರಕ್ಕೂ ಸೈಮಂಡ್ಸ್​​ ಸಖತ್ ಸುದ್ದಿಯಾಗಿದ್ದವರು.

1 / 9
ಆಂಡ್ರ್ಯೂ ಸೈಮಂಡ್ಸ್ ಮೂಲತಃ ವೆಸ್ಟ್ ಇಂಡೀಸ್ ನವರು. ಅವರನ್ನು ಇಂಗ್ಲೆಂಡ್‌ನ ದಂಪತಿಗಳು ದತ್ತು ಪಡೆದರು. ಸೈಮಂಡ್ಸ್‌ಗೆ ಬ್ರಿಟಿಷ್ ಪೌರತ್ವವನ್ನು ನೀಡಲಾಯಿತು. ಆದರೆ ಯುವಕರಾಗಿದ್ದಾಗ ಸೈಮಂಡ್ಸ್​ ಆಸ್ಟ್ರೇಲಿಯಾಕ್ಕೆ ತೆರಳಿದರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ದೇಶಗಳ ಪಾಸ್‌ಪೋರ್ಟ್‌ಗಳನ್ನು ಅವರು ಹೊಂದಿದ್ದರು.

2 / 9
ಆಂಡ್ರ್ಯೂ ಸೈಮಂಡ್ಸ್ ಕ್ರಿಕೆಟ್ ಆಡಲು ಇಂಗ್ಲೆಂಡ್ ಬದಲಾಗಿ ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿದರು. 1995 ರಲ್ಲಿ ಇಂಗ್ಲೆಂಡ್‌ನ ಎ ತಂಡದಲ್ಲಿ ಸೈಮಂಡ್ಸ್ ಅವರಿಗೆ ಸ್ಥಾನ ನೀಡಲಾಗಿತ್ತು. ಅದಾಗ್ಯೂ ಅವರು ಆ ಅವಕಾಶವನ್ನು ನಿರಾಕರಿಸಿದರು.

ಆಂಡ್ರ್ಯೂ ಸೈಮಂಡ್ಸ್ ಕ್ರಿಕೆಟ್ ಆಡಲು ಇಂಗ್ಲೆಂಡ್ ಬದಲಾಗಿ ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿದರು. 1995 ರಲ್ಲಿ ಇಂಗ್ಲೆಂಡ್‌ನ ಎ ತಂಡದಲ್ಲಿ ಸೈಮಂಡ್ಸ್ ಅವರಿಗೆ ಸ್ಥಾನ ನೀಡಲಾಗಿತ್ತು. ಅದಾಗ್ಯೂ ಅವರು ಆ ಅವಕಾಶವನ್ನು ನಿರಾಕರಿಸಿದರು.

3 / 9
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ತಂಡಕ್ಕೆ ಸೈಮಂಡ್ಸ್ ಆಯ್ಕೆಯಾದರು. ಇಂಗ್ಲೆಂಡ್ ವಿರುದ್ಧ 108 ರನ್ ಗಳಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿತ್ತು.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ತಂಡಕ್ಕೆ ಸೈಮಂಡ್ಸ್ ಆಯ್ಕೆಯಾದರು. ಇಂಗ್ಲೆಂಡ್ ವಿರುದ್ಧ 108 ರನ್ ಗಳಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವಾಗಿತ್ತು.

4 / 9
ಸೈಮಂಡ್ಸ್ ತಮ್ಮ 23ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ ನಂತರದ ಐದು ವರ್ಷಗಳ ಕಾಲ ಅವರಿಂದ ಸ್ಥಿರ ಪ್ರದರ್ಶನ ಬರಲಿಲ್ಲ. ಹೀಗಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಸೈಮಂಡ್ಸ್ ಕ್ರಿಕೆಟ್ ತ್ಯಜಿಸಲೂ ಕೂಡ ಯೋಚಿಸಿದ್ದರು.

ಸೈಮಂಡ್ಸ್ ತಮ್ಮ 23ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ ನಂತರದ ಐದು ವರ್ಷಗಳ ಕಾಲ ಅವರಿಂದ ಸ್ಥಿರ ಪ್ರದರ್ಶನ ಬರಲಿಲ್ಲ. ಹೀಗಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಸೈಮಂಡ್ಸ್ ಕ್ರಿಕೆಟ್ ತ್ಯಜಿಸಲೂ ಕೂಡ ಯೋಚಿಸಿದ್ದರು.

5 / 9
2002ರಲ್ಲಿ ಅವರು ಕ್ರಿಕೆಟ್‌ನಿಂದ ರಗ್ಬಿ ಆಟದಲ್ಲಿ ತೊಡಗಿಸಿಕೊಂಡರು. ಬ್ರಿಸ್ಬೇನ್ ಬ್ರಾಂಕೋಸ್ ರಗ್ಬಿ ತಂಡದೊಂದಿಗೆ ತರಬೇತಿಯನ್ನೂ ಸೈಮಂಡ್ಸ್ ಪ್ರಾರಂಭಿಸಿದ್ದರು. ಆದರೆ 2003ರ ವಿಶ್ವಕಪ್​ನಲ್ಲಿ ಸೈಮಂಡ್ಸ್​​ ಅಚ್ಚರಿಯಾಗಿ ಆಯ್ಕೆಯಾಗಿ ಅದ್ಭುತ ಪ್ರದರ್ಶನ ತೋರಿದ್ದರು. ಅಲ್ಲಿಂದ ಅವರು ಆಸ್ಟ್ರೇಲಿಯಾ ತಂಡದಲ್ಲಿ ಸತತವಾಗಿ ಅವಕಾಶ ಪಡೆದರು.

2002ರಲ್ಲಿ ಅವರು ಕ್ರಿಕೆಟ್‌ನಿಂದ ರಗ್ಬಿ ಆಟದಲ್ಲಿ ತೊಡಗಿಸಿಕೊಂಡರು. ಬ್ರಿಸ್ಬೇನ್ ಬ್ರಾಂಕೋಸ್ ರಗ್ಬಿ ತಂಡದೊಂದಿಗೆ ತರಬೇತಿಯನ್ನೂ ಸೈಮಂಡ್ಸ್ ಪ್ರಾರಂಭಿಸಿದ್ದರು. ಆದರೆ 2003ರ ವಿಶ್ವಕಪ್​ನಲ್ಲಿ ಸೈಮಂಡ್ಸ್​​ ಅಚ್ಚರಿಯಾಗಿ ಆಯ್ಕೆಯಾಗಿ ಅದ್ಭುತ ಪ್ರದರ್ಶನ ತೋರಿದ್ದರು. ಅಲ್ಲಿಂದ ಅವರು ಆಸ್ಟ್ರೇಲಿಯಾ ತಂಡದಲ್ಲಿ ಸತತವಾಗಿ ಅವಕಾಶ ಪಡೆದರು.

6 / 9
ಆಂಡ್ರ್ಯೂ ಸೈಮಂಡ್ಸ್​ಗೆ ಮೀನುಗಾರಿಕೆಯೆಂದರೆ ಪ್ರಾಣ. ಮ್ಯಾಥ್ಯೂ ಹೇಡನ್ ಜತೆಗೂ ಮೀನು ಹಿಡಿಯಲು ಸೈಮಂಡ್ಸ್ ಒಮ್ಮೆ​ ತೆರಳಿದ್ದರು.

ಆಂಡ್ರ್ಯೂ ಸೈಮಂಡ್ಸ್​ಗೆ ಮೀನುಗಾರಿಕೆಯೆಂದರೆ ಪ್ರಾಣ. ಮ್ಯಾಥ್ಯೂ ಹೇಡನ್ ಜತೆಗೂ ಮೀನು ಹಿಡಿಯಲು ಸೈಮಂಡ್ಸ್ ಒಮ್ಮೆ​ ತೆರಳಿದ್ದರು.

7 / 9
ಆಸ್ಟ್ರೇಲಿಯಾ ಆಟಗಾರರು ಸೈಮಂಡ್ಸ್​​ರನ್ನು ಪ್ರೀತಿಯಿಂದ ರಾಯ್ ಎಂದು ಕರೆಯುತ್ತಿದ್ದರು.

ಆಸ್ಟ್ರೇಲಿಯಾ ಆಟಗಾರರು ಸೈಮಂಡ್ಸ್​​ರನ್ನು ಪ್ರೀತಿಯಿಂದ ರಾಯ್ ಎಂದು ಕರೆಯುತ್ತಿದ್ದರು.

8 / 9
ಆಂಡ್ರ್ಯೂ ಸೈಮಂಡ್ಸ್​​

ಆಂಡ್ರ್ಯೂ ಸೈಮಂಡ್ಸ್​​

9 / 9
Follow us
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ