ಕೋಟ್ಯಂತರ ಹಿಂದೂಗಳ ಐದು ದಶಕಗಳ ಕನಸು ಈಡೇರಲು ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆ ರಾಮ ಮಂದಿರ ನಾಳೆ ಲೋಕಾರ್ಪಣೆಯಾಗಲಿದ್ದು, ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. (ಫೋಟೋ: Social Media/File Photo)
ಈ ನಡುವೆ ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಭು ಶ್ರೀರಾಮನ ಟ್ಯಾಟೂ ಟ್ರೆಂಡ್ ಶುರುವಾಗಿದೆ.
ಚಿತ್ರದುರ್ಗದಲ್ಲಿ ಯುವಕರು ಅಯೋಧ್ಯೆ ರಾಮ ಮಂದಿರ, ರಾಮ-ಹನುಮಂತನ ಟ್ಯಾಟೂ ಹಾಕಿಸುತ್ತಿದ್ದಾರೆ.
ಚಿತ್ರದುರ್ಗದ ಕಲಾವಿದ ಮಣಿ ಎಂಬವರು ಯುವಕರಿಗೆ ಟ್ಯಾಟೂ ಹಾಕುತ್ತಿದ್ದಾರೆ.
ಕೈ ಮತ್ತು ಎದೆ ಮೇಲೆ ಟ್ಯಾಟೂ ಹಾಕಿಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ 150ಕ್ಕೂ ಹೆಚ್ಚು ಮಂದಿ ಟ್ಯಾಟೂ ಹಾಕಿಸಿದ್ದಾರೆ.