ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಏಪ್ರಿಲ್ 6ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಇವರನ್ನು ಸ್ವಾಗತಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಬಿಜೆಪಿ ನಾಯಕರು ಸಿದ್ದತೆಗಳನ್ನು ನಡೆಸಿದ್ದಾರೆ.
1 / 8
ಹೇಳಿ ಕೇಳಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ. ರಾಜ್ಯ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ನಾಳೆ ಲಗ್ಗೆ ಇಡುತ್ತಿರುವ ಮೋದಿ, ಕ್ಷೇತ್ರದಲ್ಲಿ ಘರ್ಜಿಸಲಿದ್ದಾರೆ. (File Photo)
2 / 8
ಇನ್ನು, ಜಿಲ್ಲೆಗೆ ಆಗಮಿಸುತ್ತಿರುವ ಮೋದಿಗೆ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಿಂಹವಾಹಿನಿಯಾಗಿರುವ (ಸಿಂಹದ ಮೇಲೆ ಕೂತಿರುವ) ಬನಶಂಕರಿ ದೇವಿಯ ಮೂರ್ತಿಯನ್ನು ಸಿದ್ದಪಡಿಸಿದ್ದಾರೆ.
3 / 8
ವೇದಿಕೆಯಲ್ಲಿ ಬಿಜೆಪಿ ಮುಖಂಡರ ಮೂಲಕ ಬನಶಂಕರಿ ದೇವಿಯ ಬೆಳ್ಳಿ ವಿಗ್ರಹವನ್ನು ಮೋದಿಗೆ ನೀಡಲಾಗುತ್ತದೆ.
4 / 8
ಒಂದು ಕೆಜಿ 900 ಗ್ರಾಮ್ ತೂಕದ ಬೆಳ್ಳಿ ವಿಗ್ರಹ ಇದಾಗಿದ್ದು, ಎಂಟುವರೆ ಇಂಚು ಎತ್ತರ, ಐದೂರವರೆ ಇಂಚು ಅಗಲ ಇದೆ.
5 / 8
ಪ್ರಧಾನಿ ಮೋದಿಗೆ ನೀಡುತ್ತಿರುವ ವಿಗ್ರಹವು ಶುದ್ದ ಬೆಳ್ಳಿಯಿಂದ ಕೂಡಿದೆ.
6 / 8
ಅಷ್ಟಕ್ಕೂ, ಮೋದಿಗೆ ಇಂತಹದ್ದೊಂದು ಕಾಣಿಕೆಯನ್ನು ಬನಶಂಕರಿ ದೇವಸ್ಥಾನದವರು ಕೊಡುತ್ತಿದ್ದಾರೆ. ಬಾಗಲಕೋಟೆ ಶೀಲವಂತ ಆ್ಯಂಡ್ ಸನ್ಸ್ ಜುವೆಲ್ಸ್, ಬೆಳ್ಳಿಯ ವಿಗ್ರಹವನ್ನು ಪಾಲಿಶ್ ಮಾಡುವ ಜವಾಬ್ದಾರಿ ಪಡೆದುಕೊಂಡಿದೆ.
7 / 8
ವಿಗ್ರಹವನ್ನು ಪಾಲಿಶ್ ಮಾಡಿ ಹಸ್ತಾಂತರ ಮಾಡುವ ಜವಾಬ್ದಾರಿ ನಮಗೆ ಸಿಕ್ಕಿದ್ದು ಬಹಳ ಖುಷಿ ತಂದಿದೆ ಎಂದು ಬೆಳ್ಳಿ ಶಾಪ್ ಮಾಲೀಕ ಮಲ್ಲಿಕಾರ್ಜುನ ಶೀಲವಂತ ಹೇಳಿದ್ದಾರೆ.