‘ಆರ್​ಸಿಬಿ ಹೊರಹಾಕಿದ ದುಬಾರಿ ವೇಗಿಯನ್ನು ಸಿಎಸ್​ಕೆ ಖರೀದಿಸಬೇಕು’; ಇರ್ಫಾನ್ ಪಠಾಣ್

Updated on: Dec 10, 2023 | 11:49 AM

IPL 2024 Auction: ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್, ಸಿಎಸ್​ಕೆ ಬಹಳಷ್ಟು ವೇಗದ ಬೌಲರ್‌ಗಳನ್ನು ಹೊಂದಿದೆ. ಆದರೆ ಅವರ ನಿಯಮಿತ ಇಜುರಿ ಸಮಸ್ಯೆಯನ್ನು ಪರಿಗಣಿಸಿ, ಫ್ರಾಂಚೈಸ್ ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.

1 / 7
ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜು ನಡೆಯಲ್ಲಿದೆ. ಈ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ಬೇಕಾದ ಆಟಗಾರರ ಮೇಲೆ ಹಣದ ಮಳೆ ಹರಿಸುವುದು ಖಚಿತ. ಅದರಲ್ಲೂ ತಂಡಕ್ಕೆ ಪ್ರಮುಖ ವೇಗಿಯನ್ನು ಹುಡುಕುತ್ತಿರುವ ಸಿಎಸ್‌ಕೆ ಫ್ರಾಂಚೈಸಿ ಆರ್​ಸಿಬಿ ಬಿಡುಗಡೆ ಮಾಡಿದ ಬೌಲರ್​ ಮೇಲೆ ಕಣ್ಣಿಟ್ಟಿದೆ ಎಂದ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜು ನಡೆಯಲ್ಲಿದೆ. ಈ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ಬೇಕಾದ ಆಟಗಾರರ ಮೇಲೆ ಹಣದ ಮಳೆ ಹರಿಸುವುದು ಖಚಿತ. ಅದರಲ್ಲೂ ತಂಡಕ್ಕೆ ಪ್ರಮುಖ ವೇಗಿಯನ್ನು ಹುಡುಕುತ್ತಿರುವ ಸಿಎಸ್‌ಕೆ ಫ್ರಾಂಚೈಸಿ ಆರ್​ಸಿಬಿ ಬಿಡುಗಡೆ ಮಾಡಿದ ಬೌಲರ್​ ಮೇಲೆ ಕಣ್ಣಿಟ್ಟಿದೆ ಎಂದ ಇರ್ಫಾನ್ ಪಠಾಣ್ ಹೇಳಿದ್ದಾರೆ.

2 / 7
ವರದಿಗಳ ಪ್ರಕಾರ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹಾರ್ ಮತ್ತು ಮಥಿಶಾ ಪತಿರಾನರ ಇಂಜುರಿ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ.

ವರದಿಗಳ ಪ್ರಕಾರ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹಾರ್ ಮತ್ತು ಮಥಿಶಾ ಪತಿರಾನರ ಇಂಜುರಿ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ.

3 / 7
ಹೀಗಾಗಿ  ಫ್ರಾಂಚೈಸ್ ತನ್ನ ಪಾಳೆಯಕ್ಕೆ ಹರ್ಷಲ್ ಪಟೇಲ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಫ್ರಾಂಚೈಸ್ ತನ್ನ ಪಾಳೆಯಕ್ಕೆ ಹರ್ಷಲ್ ಪಟೇಲ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

4 / 7
ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್, ಸಿಎಸ್​ಕೆ ಬಹಳಷ್ಟು ವೇಗದ ಬೌಲರ್‌ಗಳನ್ನು ಹೊಂದಿದೆ. ಆದರೆ ಅವರ ನಿಯಮಿತ ಇಜುರಿ ಸಮಸ್ಯೆಯನ್ನು ಪರಿಗಣಿಸಿ, ಫ್ರಾಂಚೈಸ್ ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್, ಸಿಎಸ್​ಕೆ ಬಹಳಷ್ಟು ವೇಗದ ಬೌಲರ್‌ಗಳನ್ನು ಹೊಂದಿದೆ. ಆದರೆ ಅವರ ನಿಯಮಿತ ಇಜುರಿ ಸಮಸ್ಯೆಯನ್ನು ಪರಿಗಣಿಸಿ, ಫ್ರಾಂಚೈಸ್ ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.

5 / 7
ತಂಡದಲ್ಲಿರುವ ದೀಪಕ್ ಚಾಹರ್ ಮತ್ತು ಮತಿಸಾ ಪತಿರಾನ, ಈ ಇಬ್ಬರೂ ಬೌಲರ್‌ಗಳು ಒಟ್ಟಿಗೆ ಗಾಯಗೊಂಡರೆ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಸಿಎಸ್‌ಕೆ ಹರ್ಷಲ್ ಪಟೇಲ್ ಅವರಂತಹ ಬೌಲರ್ ಅನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಪಠಾಣ್ ಹೇಳಿದರು.

ತಂಡದಲ್ಲಿರುವ ದೀಪಕ್ ಚಾಹರ್ ಮತ್ತು ಮತಿಸಾ ಪತಿರಾನ, ಈ ಇಬ್ಬರೂ ಬೌಲರ್‌ಗಳು ಒಟ್ಟಿಗೆ ಗಾಯಗೊಂಡರೆ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಸಿಎಸ್‌ಕೆ ಹರ್ಷಲ್ ಪಟೇಲ್ ಅವರಂತಹ ಬೌಲರ್ ಅನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಪಠಾಣ್ ಹೇಳಿದರು.

6 / 7
ವಾಸ್ತವವಾಗಿ ಮಿನಿ ಹರಾಜಿಗೂ ಮೊದಲು ಹರ್ಷಲ್ ಪಟೇಲ್ ಅವರನ್ನು ಆರ್​ಸಿಬಿ ತನ್ನ ತಂಡದಿಂದ ಬಿಡುಗಡೆ ಮಾಡಿದೆ. 2021 ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಸಿಎಸ್​ಕೆ ತಂಡ ಸೇರುವ ಸಾಧ್ಯತೆಗಳು ಹೆಚ್ಚಿವೆ.

ವಾಸ್ತವವಾಗಿ ಮಿನಿ ಹರಾಜಿಗೂ ಮೊದಲು ಹರ್ಷಲ್ ಪಟೇಲ್ ಅವರನ್ನು ಆರ್​ಸಿಬಿ ತನ್ನ ತಂಡದಿಂದ ಬಿಡುಗಡೆ ಮಾಡಿದೆ. 2021 ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಸಿಎಸ್​ಕೆ ತಂಡ ಸೇರುವ ಸಾಧ್ಯತೆಗಳು ಹೆಚ್ಚಿವೆ.

7 / 7
ಏಕೆಂದರೆ ಹರ್ಷಲ್ ಪಟೇಲ್ ಆರ್​ಸಿಬಿಯಲ್ಲಿದ್ದಾಗ, ಅವರು ಬೆಂಗಳೂರಿನ ಪರಿಸ್ಥಿತಿಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಚೆನ್ನೈ ಮತ್ತು ಬೆಂಗಳೂರಿನ ಪರಿಸ್ಥಿತಿಗಳು ಸಾಕಷ್ಟು ಹೋಲುತ್ತವೆ. ಆದ್ದರಿಂದ ಪಠಾಣ್, ಹರಾಜಿನಲ್ಲಿ  ಸಿಎಸ್​ಕೆ ಹರ್ಷಲ್‌ ಖರೀದಿಗೆ ಮುಂದಾಗಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ ಹರ್ಷಲ್ ಪಟೇಲ್ ಆರ್​ಸಿಬಿಯಲ್ಲಿದ್ದಾಗ, ಅವರು ಬೆಂಗಳೂರಿನ ಪರಿಸ್ಥಿತಿಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಚೆನ್ನೈ ಮತ್ತು ಬೆಂಗಳೂರಿನ ಪರಿಸ್ಥಿತಿಗಳು ಸಾಕಷ್ಟು ಹೋಲುತ್ತವೆ. ಆದ್ದರಿಂದ ಪಠಾಣ್, ಹರಾಜಿನಲ್ಲಿ ಸಿಎಸ್​ಕೆ ಹರ್ಷಲ್‌ ಖರೀದಿಗೆ ಮುಂದಾಗಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.

Published On - 11:48 am, Sun, 10 December 23

Loading...
Unable to load recommendations.
Follow Us