Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf Duplessis: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ

RCB vs LSG, IPL 2023: 200+ ರನ್ ಸಿಡಿಸಿದರೂ ಲಖನೌ ವಿರುದ್ಧ ಆರ್​ಸಿಬಿ ಸೋಲು ಕಂಡಿದ್ದು ಮಾತ್ರ ದುರಾದೃಷ್ಟಕರ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ನೋಡಿ.

Vinay Bhat
|

Updated on:Apr 11, 2023 | 8:26 AM

ಐಪಿಎಲ್ 2023 ರಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಮ್ಯಾಚ್ ಕೊನೆಯ ಎಸೆತದ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಐಪಿಎಲ್ 2023 ರಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಮ್ಯಾಚ್ ಕೊನೆಯ ಎಸೆತದ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

1 / 7
ಎಲ್​ಎಸ್​ಜಿಗೆ ಗೆಲ್ಲಲು ಕೊನೆಯ 1 ಎಸೆತದಲ್ಲಿ 1 ರನ್ ಬೇಕಿದ್ದಾಗ ಬೈಸ್ ಮೂಲಕ ರನ್ ಗಳಿಸಿ ರಾಹುಲ್ ಪಡೆ 1 ವಿಕೆಟ್​ನ ರೋಚಕ ಜಯ ಸಾಧಿಸಿತು. 200+ ರನ್ ಸಿಡಿಸಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿದ್ದು ಮಾತ್ರ ದುರಾದೃಷ್ಟಕರ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ನೋಡಿ.

ಎಲ್​ಎಸ್​ಜಿಗೆ ಗೆಲ್ಲಲು ಕೊನೆಯ 1 ಎಸೆತದಲ್ಲಿ 1 ರನ್ ಬೇಕಿದ್ದಾಗ ಬೈಸ್ ಮೂಲಕ ರನ್ ಗಳಿಸಿ ರಾಹುಲ್ ಪಡೆ 1 ವಿಕೆಟ್​ನ ರೋಚಕ ಜಯ ಸಾಧಿಸಿತು. 200+ ರನ್ ಸಿಡಿಸಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿದ್ದು ಮಾತ್ರ ದುರಾದೃಷ್ಟಕರ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ನೋಡಿ.

2 / 7
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್, ನಿಜಕ್ಕೂ ತುಂಬಾ ಬೇಸರವಾಗಿದೆ. ಮಧ್ಯಮ ಓವರ್​ನಲ್ಲಿ ಲಖನೌ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿತು.  ವಿಕೆಟ್ ಅನ್ನು ನೋಡಿದಾಗ 7-14 ಓವರ್ ನಿಧಾನವಾಗಿತ್ತು. ಕೊನೆಯ ಐದು ಓವರ್​ಗಳಲ್ಲಿ ಎಲ್ಲವು ಬದಲಾಯಿತು ಎಂದು ಹೇಳಿದ್ದಾರೆ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್, ನಿಜಕ್ಕೂ ತುಂಬಾ ಬೇಸರವಾಗಿದೆ. ಮಧ್ಯಮ ಓವರ್​ನಲ್ಲಿ ಲಖನೌ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ವಿಕೆಟ್ ಅನ್ನು ನೋಡಿದಾಗ 7-14 ಓವರ್ ನಿಧಾನವಾಗಿತ್ತು. ಕೊನೆಯ ಐದು ಓವರ್​ಗಳಲ್ಲಿ ಎಲ್ಲವು ಬದಲಾಯಿತು ಎಂದು ಹೇಳಿದ್ದಾರೆ.

3 / 7
ಕೆಲವು ಹೊಡೆತಗಳು ಅದ್ಭುತವಾಗಿದ್ದವು. ಇವು ಒಳ್ಳೆಯದೆ. ಮಾರ್ಕಸ್ ಸ್ಟಾಯಿನಿಸ್ ಮತ್ತು ನಿಕೋಲಸ್ ಪೂರನ್ ಮಧ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ನಮ್ಮ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರ ಎರಡು ಓವರ್​ಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡರು - ಫಾಫ್ ಡುಪ್ಲೆಸಿಸ್.

ಕೆಲವು ಹೊಡೆತಗಳು ಅದ್ಭುತವಾಗಿದ್ದವು. ಇವು ಒಳ್ಳೆಯದೆ. ಮಾರ್ಕಸ್ ಸ್ಟಾಯಿನಿಸ್ ಮತ್ತು ನಿಕೋಲಸ್ ಪೂರನ್ ಮಧ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ನಮ್ಮ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರ ಎರಡು ಓವರ್​ಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡರು - ಫಾಫ್ ಡುಪ್ಲೆಸಿಸ್.

4 / 7
ಡೆತ್ ಓವರ್​ನಲ್ಲಿ ಬೌಲಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಪಂದ್ಯದ ಮೇಲೆ ನೀವು ಹಿಡಿತ ಸಾಧಿಸಿದ್ದರೆ ಕಷ್ಟ ಆಗುವುದಿಲ್ಲ. ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚುಹೊತ್ತು ಕಷ್ಟ ಪಟ್ಟೆ. ಆದರೆ, ಕೊಹ್ಲಿಗೆ ಸ್ಟ್ರೈಕ್ ನೀಡಿದ್ದು ಖುಷಿ ತಂದಿದೆ. ಮಿಡಲ್​ನಲ್ಲಿ ನಾನು ಕೆಲವು ಹೊಡೆತಗಳನ್ನು ಹೊಡೆಯಲು ಪ್ರಾರಂಭಿಸಿದಾಗ ಲಯಕಂಡುಕೊಂಡೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಡೆತ್ ಓವರ್​ನಲ್ಲಿ ಬೌಲಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಪಂದ್ಯದ ಮೇಲೆ ನೀವು ಹಿಡಿತ ಸಾಧಿಸಿದ್ದರೆ ಕಷ್ಟ ಆಗುವುದಿಲ್ಲ. ನಾನು ಬ್ಯಾಟಿಂಗ್ ಮಾಡುವಾಗ ಹೆಚ್ಚುಹೊತ್ತು ಕಷ್ಟ ಪಟ್ಟೆ. ಆದರೆ, ಕೊಹ್ಲಿಗೆ ಸ್ಟ್ರೈಕ್ ನೀಡಿದ್ದು ಖುಷಿ ತಂದಿದೆ. ಮಿಡಲ್​ನಲ್ಲಿ ನಾನು ಕೆಲವು ಹೊಡೆತಗಳನ್ನು ಹೊಡೆಯಲು ಪ್ರಾರಂಭಿಸಿದಾಗ ಲಯಕಂಡುಕೊಂಡೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.

5 / 7
ಗೆದ್ದ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, ನಂಬಲಾಗುತ್ತಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣ, ಕೊನೆಯ ಬಾಲ್​ನಲ್ಲಿ ಪಂದ್ಯವನ್ನು ಫಿನಿಶ್‌ ಮಾಡಲು ಸಾಧ್ಯವಾಗುವ ಏಕೈಕ ಸ್ಥಳ. ನಾವು ಆರಂಭದಲ್ಲಿ ಇದ್ದ ಸ್ಥಿತಿಯಿಂದ ಕೊನೆಯ ವರೆಗೆ ಬಂದು ಪಂದ್ಯವನ್ನು ಗೆದ್ದಿರಿವುದು ಅದ್ಭುತ ಎಂದು ಹೇಳಿದ್ದಾರೆ.

ಗೆದ್ದ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, ನಂಬಲಾಗುತ್ತಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣ, ಕೊನೆಯ ಬಾಲ್​ನಲ್ಲಿ ಪಂದ್ಯವನ್ನು ಫಿನಿಶ್‌ ಮಾಡಲು ಸಾಧ್ಯವಾಗುವ ಏಕೈಕ ಸ್ಥಳ. ನಾವು ಆರಂಭದಲ್ಲಿ ಇದ್ದ ಸ್ಥಿತಿಯಿಂದ ಕೊನೆಯ ವರೆಗೆ ಬಂದು ಪಂದ್ಯವನ್ನು ಗೆದ್ದಿರಿವುದು ಅದ್ಭುತ ಎಂದು ಹೇಳಿದ್ದಾರೆ.

6 / 7
ನಾವು ಗೆದ್ದು ಎರಡು ಅಂಕ ಪಡೆದೆವು ಎಂದರೆ ಅದಕ್ಕೆ ಲೋವರ್ ಆರ್ಡರ್ ಬ್ಯಾಟರ್​ಗಳು ಕಾರಣ. ಮಾರ್ಕಸ್ ಮತ್ತು ಪೂರನ್ ಶಕ್ತಿ ಏನು ಎಂಬುದು ನಮಗೆ ತಿಳಿದಿದೆ. ಆಯುಷ್ ಬದೋನಿ ಕೂಡ ಉತ್ತಮ ಬ್ಯಾಟರ್. ಕಳೆದ ಸೀಸನ್​ನಲ್ಲಿ 2-3 ಉತ್ತಮ ಇನ್ನಿಂಗ್ಸ್ ಆಡಿದ್ದಾರೆ - ಕೆಎಲ್ ರಾಹುಲ್.

ನಾವು ಗೆದ್ದು ಎರಡು ಅಂಕ ಪಡೆದೆವು ಎಂದರೆ ಅದಕ್ಕೆ ಲೋವರ್ ಆರ್ಡರ್ ಬ್ಯಾಟರ್​ಗಳು ಕಾರಣ. ಮಾರ್ಕಸ್ ಮತ್ತು ಪೂರನ್ ಶಕ್ತಿ ಏನು ಎಂಬುದು ನಮಗೆ ತಿಳಿದಿದೆ. ಆಯುಷ್ ಬದೋನಿ ಕೂಡ ಉತ್ತಮ ಬ್ಯಾಟರ್. ಕಳೆದ ಸೀಸನ್​ನಲ್ಲಿ 2-3 ಉತ್ತಮ ಇನ್ನಿಂಗ್ಸ್ ಆಡಿದ್ದಾರೆ - ಕೆಎಲ್ ರಾಹುಲ್.

7 / 7

Published On - 8:26 am, Tue, 11 April 23

Follow us
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?