AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Awards 2022: ಐಸಿಸಿ ಉದಯೋನ್ಮುಖ ಕ್ರಿಕೆಟಿಗ ನಾಮನಿರ್ದೇಶಿತ ಪಟ್ಟಿ ಪ್ರಕಟ: ಟೀಮ್ ಇಂಡಿಯಾ ಆಟಗಾರನಿಗೆ ಸ್ಥಾನ

ICC Awards 2022: ಐಸಿಸಿಯ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ 26 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರನ್ನು ಮಾತ್ರ ಪರಿಗಣಿಸಲಾಗುತ್ತದೆ.

TV9 Web
| Edited By: |

Updated on:Dec 28, 2022 | 7:34 PM

Share
ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ 2022ರ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು, ಅವರಲ್ಲಿ ಒಬ್ಬರು ಭಾರತೀಯ ಕ್ರಿಕೆಟಿಗ ಎಂಬುದು ವಿಶೇಷ. ಹಾಗಿದ್ರೆ ಐಸಿಸಿ ಯುವ ಆಟಗಾರನ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ 2022ರ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು, ಅವರಲ್ಲಿ ಒಬ್ಬರು ಭಾರತೀಯ ಕ್ರಿಕೆಟಿಗ ಎಂಬುದು ವಿಶೇಷ. ಹಾಗಿದ್ರೆ ಐಸಿಸಿ ಯುವ ಆಟಗಾರನ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

1 / 6
ಮಾರ್ಕೊ ಯಾನ್ಸನ್: ಸೌತ್ ಆಫ್ರಿಕಾದ ಯುವ ಎಡಗೈ ವೇಗಿ ಈ ವರ್ಷ 9 ಟೆಸ್ಟ್ ಪಂದ್ಯಗಳಿಂದ 41 ವಿಕೆಟ್, 3 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ 22 ವರ್ಷ ಮಾರ್ಕೊ ಯಾನ್ಸನ್​ಗೆ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

ಮಾರ್ಕೊ ಯಾನ್ಸನ್: ಸೌತ್ ಆಫ್ರಿಕಾದ ಯುವ ಎಡಗೈ ವೇಗಿ ಈ ವರ್ಷ 9 ಟೆಸ್ಟ್ ಪಂದ್ಯಗಳಿಂದ 41 ವಿಕೆಟ್, 3 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ 22 ವರ್ಷ ಮಾರ್ಕೊ ಯಾನ್ಸನ್​ಗೆ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

2 / 6
ಇಬ್ರಾಹಿಂ ಜದ್ರಾನ್: ಅಫ್ಘಾನಿಸ್ತಾನದ 21 ವರ್ಷದ ಬ್ಯಾಟ್ಸ್​ಮನ್ ಇಬ್ರಾಹಿಂ ಜದ್ರಾನ್ 4 ಟೆಸ್ಟ್ ಪಂದ್ಯಗಳಿಂದ 356 ರನ್​ ಹಾಗೂ 8 ಏಕದಿನ ಪಂದ್ಯಗಳಿಂದ 431 ರನ್​ ಕಲೆಹಾಕಿದ್ದಾರೆ. ಹಾಗೆಯೇ 16 ಟಿ20 ಪಂದ್ಯಗಳಿಂದ ಒಟ್ಟು 381 ರನ್ ಬಾರಿಸಿದ್ದಾರೆ. ಈ ಮೂಲಕ ಉದಯೋನ್ಮುಖ ಆಟಗಾರರ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ರಾಹಿಂ ಜದ್ರಾನ್: ಅಫ್ಘಾನಿಸ್ತಾನದ 21 ವರ್ಷದ ಬ್ಯಾಟ್ಸ್​ಮನ್ ಇಬ್ರಾಹಿಂ ಜದ್ರಾನ್ 4 ಟೆಸ್ಟ್ ಪಂದ್ಯಗಳಿಂದ 356 ರನ್​ ಹಾಗೂ 8 ಏಕದಿನ ಪಂದ್ಯಗಳಿಂದ 431 ರನ್​ ಕಲೆಹಾಕಿದ್ದಾರೆ. ಹಾಗೆಯೇ 16 ಟಿ20 ಪಂದ್ಯಗಳಿಂದ ಒಟ್ಟು 381 ರನ್ ಬಾರಿಸಿದ್ದಾರೆ. ಈ ಮೂಲಕ ಉದಯೋನ್ಮುಖ ಆಟಗಾರರ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

3 / 6
ಫಿನ್ ಅಲೆನ್: ನ್ಯೂಜಿಲೆಂಡ್​ನ 23 ವರ್ಷದ ಹೊಡಿಬಡಿ ದಾಂಡಿಗ ಫಿನ್ ಅಲೆನ್ ಈ ವರ್ಷ 11 ಏಕದಿನ ಪಂದ್ಯಗಳಿಂದ 387 ರನ್ ಹಾಗೂ ಒಟ್ಟು 25 ಟಿ20 ಪಂದ್ಯಗಳಿಂದ 567 ರನ್ ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

ಫಿನ್ ಅಲೆನ್: ನ್ಯೂಜಿಲೆಂಡ್​ನ 23 ವರ್ಷದ ಹೊಡಿಬಡಿ ದಾಂಡಿಗ ಫಿನ್ ಅಲೆನ್ ಈ ವರ್ಷ 11 ಏಕದಿನ ಪಂದ್ಯಗಳಿಂದ 387 ರನ್ ಹಾಗೂ ಒಟ್ಟು 25 ಟಿ20 ಪಂದ್ಯಗಳಿಂದ 567 ರನ್ ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

4 / 6
ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾ ಪರ ಈ ವರ್ಷ ಪದಾರ್ಪಣೆ ಮಾಡಿದ್ದ 23 ವರ್ಷದ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. 2022 ರಲ್ಲಿ ವೃತ್ತಿಜೀವನ ಆರಂಭಿಸಿದ್ದ ಅರ್ಷದೀಪ್ 21 ಟಿ20 ಪಂದ್ಯಗಳಿಂದ ಒಟ್ಟು 33 ವಿಕೆಟ್ ಕಬಳಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದಿಂದಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾ ಪರ ಈ ವರ್ಷ ಪದಾರ್ಪಣೆ ಮಾಡಿದ್ದ 23 ವರ್ಷದ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. 2022 ರಲ್ಲಿ ವೃತ್ತಿಜೀವನ ಆರಂಭಿಸಿದ್ದ ಅರ್ಷದೀಪ್ 21 ಟಿ20 ಪಂದ್ಯಗಳಿಂದ ಒಟ್ಟು 33 ವಿಕೆಟ್ ಕಬಳಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದಿಂದಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

5 / 6
ಐಸಿಸಿಯ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ 26 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಅದರಂತೆ ಈ ಬಾರಿ ಫಿನ್ ಅಲೆನ್, ಅರ್ಷದೀಪ್ ಸಿಂಗ್, ಇಬ್ರಾಹಿಂ ಜದ್ರಾನ್ ಹಾಗೂ ಮಾರ್ಕೊ ಯಾನ್ಸನ್ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಈ ಬಾರಿಯ ಯಾರು ಅತ್ಯುತ್ತಮ ಯುವ ಕ್ರಿಕೆಟಿಗರಾಗಿ ಹೊರಹೊಮ್ಮಲಿದ್ದಾರೆ ಕಾದು ನೋಡಬೇಕಿದೆ.

ಐಸಿಸಿಯ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ 26 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಅದರಂತೆ ಈ ಬಾರಿ ಫಿನ್ ಅಲೆನ್, ಅರ್ಷದೀಪ್ ಸಿಂಗ್, ಇಬ್ರಾಹಿಂ ಜದ್ರಾನ್ ಹಾಗೂ ಮಾರ್ಕೊ ಯಾನ್ಸನ್ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಈ ಬಾರಿಯ ಯಾರು ಅತ್ಯುತ್ತಮ ಯುವ ಕ್ರಿಕೆಟಿಗರಾಗಿ ಹೊರಹೊಮ್ಮಲಿದ್ದಾರೆ ಕಾದು ನೋಡಬೇಕಿದೆ.

6 / 6

Published On - 7:34 pm, Wed, 28 December 22

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ