IND vs AUS: 25 ಎಸೆತ, 0 ರನ್, 5 ವಿಕೆಟ್: ಕಾಂಗರೂಗಳು ಪಂದ್ಯ ಸೋತಿದ್ದು ಇಲ್ಲೇ

IND vs AUS: ಶಮಿ ಮತ್ತು ಸಿರಾಜ್ ಸತತ 25 ಎಸೆತಗಳಲ್ಲಿ ಯಾವುದೇ ರನ್ ನೀಡದೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಕೇವಲ 188 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು.

|

Updated on: Mar 18, 2023 | 11:28 AM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬಯಸಿದ ರೀತಿಯ ಆರಂಭವನ್ನು ಪಡೆದುಕೊಂಡಿದೆ. ಕೆಎಲ್ ರಾಹುಲ್ ಅವರ ಹೋರಾಟದ ಇನ್ನಿಂಗ್ಸ್ ಮತ್ತು ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನವು ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತಕ್ಕೆ ಐದು ವಿಕೆಟ್‌ಗಳ ಜಯವನ್ನು ನೀಡಿತು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬಯಸಿದ ರೀತಿಯ ಆರಂಭವನ್ನು ಪಡೆದುಕೊಂಡಿದೆ. ಕೆಎಲ್ ರಾಹುಲ್ ಅವರ ಹೋರಾಟದ ಇನ್ನಿಂಗ್ಸ್ ಮತ್ತು ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನವು ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತಕ್ಕೆ ಐದು ವಿಕೆಟ್‌ಗಳ ಜಯವನ್ನು ನೀಡಿತು.

1 / 6
ಆದರೆ ಭಾರತದ ಗೆಲುವಿನಲ್ಲಿ ಈ ಇಬ್ಬರ ಆಟ ಎಷ್ಟು ಪ್ರಮುಖವಾಗಿತ್ತೋ, ಹಾಗೆಯೇ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಎಸೆದ ಆ 25 ಎಸೆತಗಳು ಕೂಡ ಪ್ರಮುಖ ಪಾತ್ರವಹಿಸಿದವು.

ಆದರೆ ಭಾರತದ ಗೆಲುವಿನಲ್ಲಿ ಈ ಇಬ್ಬರ ಆಟ ಎಷ್ಟು ಪ್ರಮುಖವಾಗಿತ್ತೋ, ಹಾಗೆಯೇ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಎಸೆದ ಆ 25 ಎಸೆತಗಳು ಕೂಡ ಪ್ರಮುಖ ಪಾತ್ರವಹಿಸಿದವು.

2 / 6
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಾಂಡ್ಯ ಸೇರಿದಂತೆ 4 ವೇಗಿಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿತ್ತು. ಭಾರತದ ವೇಗಿಗಳು ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಆಸ್ಟ್ರೇಲಿಯಾವನ್ನು 188 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಇದರಲ್ಲಿ ಪಾಂಡ್ಯ, ಶಮಿ ಮತ್ತು ಸಿರಾಜ್ ಒಟ್ಟಾಗಿ 10 ವಿಕೆಟ್‌ಗಳಲ್ಲಿ 7 ವಿಕೆಟ್ ಪಡೆದರು.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಾಂಡ್ಯ ಸೇರಿದಂತೆ 4 ವೇಗಿಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿತ್ತು. ಭಾರತದ ವೇಗಿಗಳು ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಆಸ್ಟ್ರೇಲಿಯಾವನ್ನು 188 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಇದರಲ್ಲಿ ಪಾಂಡ್ಯ, ಶಮಿ ಮತ್ತು ಸಿರಾಜ್ ಒಟ್ಟಾಗಿ 10 ವಿಕೆಟ್‌ಗಳಲ್ಲಿ 7 ವಿಕೆಟ್ ಪಡೆದರು.

3 / 6
ಆಸ್ಟ್ರೇಲಿಯ ಇನಿಂಗ್ಸ್‌ನ ಆರಂಭದಿಂದ ಅಂತ್ಯದವರೆಗೂ ಭಾರತದ ವೇಗಿಗಳು ತಮ್ಮ ಅಬ್ಬರ ತೋರಿದರು. ಅದರಲ್ಲೂ ಶಮಿ ಮತ್ತು ಸಿರಾಜ್ ಆಸ್ಟ್ರೇಲಿಯಾಕ್ಕೆ ಮಾರಕವಾಗಿ ಪರಿಣಮಿಸಿದರು. 28ನೇ ಓವರ್‌ನ ಐದನೇ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಶಮಿ, ತಮ್ಮ ಮುಂದಿನ ಓವರ್‌ನಲ್ಲಿ ಯಾವುದೇ ರನ್ ನೀಡದೆ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದರು. ಅಂತಿಮವಾಗಿ ಸ್ಟೋಯ್ನಿಸ್​ರನ್ನು ಔಟ್ ಮಾಡಿದ ಶಮಿ, ಇದರೊಂದಿಗೆ (3/17) ಸತತ 15 ಎಸೆತಗಳಲ್ಲಿ ಯಾವುದೇ ರನ್ ನೀಡದೆ 3 ವಿಕೆಟ್ ಪಡೆದರು.

ಆಸ್ಟ್ರೇಲಿಯ ಇನಿಂಗ್ಸ್‌ನ ಆರಂಭದಿಂದ ಅಂತ್ಯದವರೆಗೂ ಭಾರತದ ವೇಗಿಗಳು ತಮ್ಮ ಅಬ್ಬರ ತೋರಿದರು. ಅದರಲ್ಲೂ ಶಮಿ ಮತ್ತು ಸಿರಾಜ್ ಆಸ್ಟ್ರೇಲಿಯಾಕ್ಕೆ ಮಾರಕವಾಗಿ ಪರಿಣಮಿಸಿದರು. 28ನೇ ಓವರ್‌ನ ಐದನೇ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಶಮಿ, ತಮ್ಮ ಮುಂದಿನ ಓವರ್‌ನಲ್ಲಿ ಯಾವುದೇ ರನ್ ನೀಡದೆ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದರು. ಅಂತಿಮವಾಗಿ ಸ್ಟೋಯ್ನಿಸ್​ರನ್ನು ಔಟ್ ಮಾಡಿದ ಶಮಿ, ಇದರೊಂದಿಗೆ (3/17) ಸತತ 15 ಎಸೆತಗಳಲ್ಲಿ ಯಾವುದೇ ರನ್ ನೀಡದೆ 3 ವಿಕೆಟ್ ಪಡೆದರು.

4 / 6
ಸಿರಾಜ್ (3/29) ಕೂಡ ಇದೇ ರೀತಿಯ ಪ್ರದರ್ಶನ ನೀಡಿ, ಇನಿಂಗ್ಸ್​ನ ಎರಡನೇ ಓವರ್​ನಲ್ಲಿಯೇ ಮೊದಲ ವಿಕೆಟ್ ಪಡೆದರು. ಬಳಿಕ 34ನೇ ಓವರ್ ಬೌಲ್ ಮಾಡಿದ ಸಿರಾಜ್ ನಾಲ್ಕನೇ ಎಸೆತದಲ್ಲಿ ಸೀನ್ ಅಬಾಟ್​ರನ್ನು ಬಲಿ ಪಡೆದರೆ, 36ನೇ ಓವರ್​ನಲ್ಲಿ ಕೊನೆಯ ವಿಕೆಟ್ ಉರುಳಿಸಿದರು.

ಸಿರಾಜ್ (3/29) ಕೂಡ ಇದೇ ರೀತಿಯ ಪ್ರದರ್ಶನ ನೀಡಿ, ಇನಿಂಗ್ಸ್​ನ ಎರಡನೇ ಓವರ್​ನಲ್ಲಿಯೇ ಮೊದಲ ವಿಕೆಟ್ ಪಡೆದರು. ಬಳಿಕ 34ನೇ ಓವರ್ ಬೌಲ್ ಮಾಡಿದ ಸಿರಾಜ್ ನಾಲ್ಕನೇ ಎಸೆತದಲ್ಲಿ ಸೀನ್ ಅಬಾಟ್​ರನ್ನು ಬಲಿ ಪಡೆದರೆ, 36ನೇ ಓವರ್​ನಲ್ಲಿ ಕೊನೆಯ ವಿಕೆಟ್ ಉರುಳಿಸಿದರು.

5 / 6
ಅದೇನೆಂದರೆ, ಶಮಿ ಮತ್ತು ಸಿರಾಜ್ ಸತತ 25 ಎಸೆತಗಳಲ್ಲಿ ಯಾವುದೇ ರನ್ ನೀಡದೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಕೇವಲ 188 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು.

ಅದೇನೆಂದರೆ, ಶಮಿ ಮತ್ತು ಸಿರಾಜ್ ಸತತ 25 ಎಸೆತಗಳಲ್ಲಿ ಯಾವುದೇ ರನ್ ನೀಡದೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಕೇವಲ 188 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು.

6 / 6
Follow us
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ