AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ರವೀಂದ್ರ ಜಡೇಜಾ ನಾಯಕತ್ವ ತೊರೆಯಲು ಇದುವೇ ಕಾರಣ

IPL 2022: CSK ತಂಡದ ನಾಯಕತ್ವದಿಂದ ರವೀಂದ್ರ ಜಡೇಜಾ (Ravindra Jadeja) ಕೆಳಗಿಳಿದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಮತ್ತೆ ಸಿಎಸ್​ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ (MS Dhoni) ಮುನ್ನಡೆಸಲಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 30, 2022 | 8:53 PM

 ಐಪಿಎಲ್​ ಸೀಸನ್​ 15 ಆರಂಭಕ್ಕೂ ಮುನ್ನ ಸಿಎಸ್​ಕೆ ತಂಡವು ರವೀಂದ್ರ ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಐಪಿಎಲ್​ನ ಅರ್ಧದಲ್ಲೇ ನಾಯಕತ್ವ ತೊರೆಯುವ ಮೂಲಕ ಜಡೇಜಾ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಲ್ಲಿ ಆಟದ ಮೇಲೆ ಗಮನ ಕೇಂದ್ರೀಕರಿಸಲು ನಾಯಕತ್ವ ತೊರೆಯುವುದಾಗಿ ಜಡೇಜಾ ಹೇಳಿದ್ದಾರೆ. ಆದರೆ ದಿಢೀರಣೆ ಇಂತಹ ನಿರ್ಧಾರಕ್ಕೆ ಇನ್ನೂ ಹಲವು ಕಾರಣಗಳಿವೆ ಎಂಬುದೇ ವಿಶೇಷ. ಹಾಗಿದ್ರೆ ನಾಯಕತ್ವದಿಂದ ಕೆಳಗಿಳಿಯಲು ಮುಖ್ಯ ಕಾರಣಗಳೇನು ನೋಡೋಣ...

ಐಪಿಎಲ್​ ಸೀಸನ್​ 15 ಆರಂಭಕ್ಕೂ ಮುನ್ನ ಸಿಎಸ್​ಕೆ ತಂಡವು ರವೀಂದ್ರ ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಇದೀಗ ಐಪಿಎಲ್​ನ ಅರ್ಧದಲ್ಲೇ ನಾಯಕತ್ವ ತೊರೆಯುವ ಮೂಲಕ ಜಡೇಜಾ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇಲ್ಲಿ ಆಟದ ಮೇಲೆ ಗಮನ ಕೇಂದ್ರೀಕರಿಸಲು ನಾಯಕತ್ವ ತೊರೆಯುವುದಾಗಿ ಜಡೇಜಾ ಹೇಳಿದ್ದಾರೆ. ಆದರೆ ದಿಢೀರಣೆ ಇಂತಹ ನಿರ್ಧಾರಕ್ಕೆ ಇನ್ನೂ ಹಲವು ಕಾರಣಗಳಿವೆ ಎಂಬುದೇ ವಿಶೇಷ. ಹಾಗಿದ್ರೆ ನಾಯಕತ್ವದಿಂದ ಕೆಳಗಿಳಿಯಲು ಮುಖ್ಯ ಕಾರಣಗಳೇನು ನೋಡೋಣ...

1 / 5
 IPL 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕಳಪೆ ಆಟವೇ ಮೊದಲ ಮತ್ತು ದೊಡ್ಡ ಕಾರಣ ಎನ್ನಬಹುದು. ಏಕೆಂದರೆ ಆಡಿರುವ 8 ಪಂದ್ಯಗಳಲ್ಲಿ 2 ಜಯ ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು 6 ಪಂದ್ಯಗಳಿದ್ದು, ಈ ಪಂದ್ಯಗಳು ಸಿಎಸ್​ಕೆ ಪ್ಲೇಆಫ್ ರೇಸ್​ಗೆ ನಿರ್ಣಾಯಕ. ಹೀಗಾಗಿ ಜಡೇಜಾ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ ಎನ್ನಬಹುದು.

IPL 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕಳಪೆ ಆಟವೇ ಮೊದಲ ಮತ್ತು ದೊಡ್ಡ ಕಾರಣ ಎನ್ನಬಹುದು. ಏಕೆಂದರೆ ಆಡಿರುವ 8 ಪಂದ್ಯಗಳಲ್ಲಿ 2 ಜಯ ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು 6 ಪಂದ್ಯಗಳಿದ್ದು, ಈ ಪಂದ್ಯಗಳು ಸಿಎಸ್​ಕೆ ಪ್ಲೇಆಫ್ ರೇಸ್​ಗೆ ನಿರ್ಣಾಯಕ. ಹೀಗಾಗಿ ಜಡೇಜಾ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ ಎನ್ನಬಹುದು.

2 / 5
ಎರಡನೆಯ ಕಾರಣವೆಂದರೆ ಸ್ವತಃ ರವೀಂದ್ರ ಜಡೇಜಾ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬುದು. ಜಡೇಜಾ ಒಬ್ಬ ಶ್ರೇಷ್ಠ ಆಲ್‌ರೌಂಡರ್. ಸ್ವಂತ ಬಲದಿಂದ ಹಲವು ಬಾರಿ ಸಿಎಸ್‌ಕೆ ತಂಡವನ್ನು ಗೆಲ್ಲಿಸಿದ್ದಾರೆ. ಆದರೆ ಈ ಸಲ ಆಡಿರುವ 8 ಪಂದ್ಯಗಳಲ್ಲಿ ಜಡೇಜಾ ಕೇವಲ 112 ರನ್ ಮಾತ್ರ ಕಲೆಹಾಕಿದ್ದಾರೆ. ಇನ್ನು ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ. ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ರೆ ಮುಂದೆ ಟೀಮ್ ಇಂಡಿಯಾದಲ್ಲೂ ಚಾನ್ಸ್ ಸಿಗುವುದಿಲ್ಲ ಎಂಬ ಭಯ ಕೂಡ ಜಡೇಜಾಗೆ ಕಾಡಿರಬಹುದು.

ಎರಡನೆಯ ಕಾರಣವೆಂದರೆ ಸ್ವತಃ ರವೀಂದ್ರ ಜಡೇಜಾ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬುದು. ಜಡೇಜಾ ಒಬ್ಬ ಶ್ರೇಷ್ಠ ಆಲ್‌ರೌಂಡರ್. ಸ್ವಂತ ಬಲದಿಂದ ಹಲವು ಬಾರಿ ಸಿಎಸ್‌ಕೆ ತಂಡವನ್ನು ಗೆಲ್ಲಿಸಿದ್ದಾರೆ. ಆದರೆ ಈ ಸಲ ಆಡಿರುವ 8 ಪಂದ್ಯಗಳಲ್ಲಿ ಜಡೇಜಾ ಕೇವಲ 112 ರನ್ ಮಾತ್ರ ಕಲೆಹಾಕಿದ್ದಾರೆ. ಇನ್ನು ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ. ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ರೆ ಮುಂದೆ ಟೀಮ್ ಇಂಡಿಯಾದಲ್ಲೂ ಚಾನ್ಸ್ ಸಿಗುವುದಿಲ್ಲ ಎಂಬ ಭಯ ಕೂಡ ಜಡೇಜಾಗೆ ಕಾಡಿರಬಹುದು.

3 / 5
ಮೂರನೇ ಕಾರಣ ಎಂದರೆ ಪ್ಲೇಆಫ್​ಗೇರುವುದು. ಅಂದರೆ ಮುಂದಿನ 6 ಪಂದ್ಯಗಳಲ್ಲಿ ಸಿಎಸ್​ಕೆ ಗೆದ್ದರೆ 16 ಪಾಯಿಂಟ್​ಗಳೊಂದಿಗೆ ಪ್ಲೇಆಫ್ ಆಡುವ ಅವಕಾಶ ಸಿಎಸ್​ಕೆಗೆ ದೊರೆಯಲಿದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಧೋನಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಪ್ಲೇಆಫ್ ತಲುಪುವ ಭರವಸೆ ಉಳಿಸಿಕೊಳ್ಳಲು ಜಡೇಜಾ ಮುಂದಾಗಿದ್ದಾರೆ.

ಮೂರನೇ ಕಾರಣ ಎಂದರೆ ಪ್ಲೇಆಫ್​ಗೇರುವುದು. ಅಂದರೆ ಮುಂದಿನ 6 ಪಂದ್ಯಗಳಲ್ಲಿ ಸಿಎಸ್​ಕೆ ಗೆದ್ದರೆ 16 ಪಾಯಿಂಟ್​ಗಳೊಂದಿಗೆ ಪ್ಲೇಆಫ್ ಆಡುವ ಅವಕಾಶ ಸಿಎಸ್​ಕೆಗೆ ದೊರೆಯಲಿದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಧೋನಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಪ್ಲೇಆಫ್ ತಲುಪುವ ಭರವಸೆ ಉಳಿಸಿಕೊಳ್ಳಲು ಜಡೇಜಾ ಮುಂದಾಗಿದ್ದಾರೆ.

4 / 5
ಇನ್ನು ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್​ನಲ್ಲಿದ್ದು, ಇದೀಗ ಧೋನಿ ಮತ್ತೆ ನಾಯಕತ್ವ ವಹಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮತ್ತೊಂದೆಡೆ ಸಂಪೂರ್ಣ ಜವಾಬ್ದಾರಿಯಿಂದ ಕೆಳಗಿಳಿದರೆ ಜಡೇಜಾಗೆ ಮತ್ತೆ ಫಾರ್ಮ್​ಗೆ ಮರಳಬಹುದು. ಇದು ಸಿಎಸ್​ಕೆ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ರವೀಂದ್ರ ಜಡೇಜಾ ಯಶಸ್ವಿ ನಾಯಕನಿಗೆ ಮತ್ತೆ ಜವಾಬ್ದಾರಿವಹಿಸಿ ಆಲ್​ರೌಂಡರ್ ಪ್ರದರ್ಶನದತ್ತ ಗಮನಹರಿಸಲು ನಿರ್ಧರಿಸಿದ್ದಾರೆ.

ಇನ್ನು ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್​ನಲ್ಲಿದ್ದು, ಇದೀಗ ಧೋನಿ ಮತ್ತೆ ನಾಯಕತ್ವ ವಹಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮತ್ತೊಂದೆಡೆ ಸಂಪೂರ್ಣ ಜವಾಬ್ದಾರಿಯಿಂದ ಕೆಳಗಿಳಿದರೆ ಜಡೇಜಾಗೆ ಮತ್ತೆ ಫಾರ್ಮ್​ಗೆ ಮರಳಬಹುದು. ಇದು ಸಿಎಸ್​ಕೆ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ರವೀಂದ್ರ ಜಡೇಜಾ ಯಶಸ್ವಿ ನಾಯಕನಿಗೆ ಮತ್ತೆ ಜವಾಬ್ದಾರಿವಹಿಸಿ ಆಲ್​ರೌಂಡರ್ ಪ್ರದರ್ಶನದತ್ತ ಗಮನಹರಿಸಲು ನಿರ್ಧರಿಸಿದ್ದಾರೆ.

5 / 5
Follow us
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ