AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕ್ಯಾಚ್​ ಕೈ ಚೆಲ್ಲಿ ಮ್ಯಾಚ್ ಸೋತ RCB

IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಬೌಲಿಂಗ್ ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ.

TV9 Web
| Edited By: |

Updated on: Apr 26, 2023 | 11:17 PM

Share
IPL 2023 RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವಿಕೆಟ್​ಗಳ ಹುಡುಕಾಟದಲ್ಲಿದ್ದಾಗ ಬೌಲರ್​ಗಳೇ ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಅಚ್ಚರಿ.

IPL 2023 RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವಿಕೆಟ್​ಗಳ ಹುಡುಕಾಟದಲ್ಲಿದ್ದಾಗ ಬೌಲರ್​ಗಳೇ ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಅಚ್ಚರಿ.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಬೌಲಿಂಗ್ ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಪವರ್​ಪ್ಲೇನಲ್ಲೇ ಅಬ್ಬರಿಸಿದ ಜೇಸನ್ ರಾಯ್-ಜಗದೀಸನ್ 6 ಓವರ್​ಗಳಲ್ಲಿ 66 ರನ್​ ಚಚ್ಚಿದ್ದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಬೌಲಿಂಗ್ ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಪವರ್​ಪ್ಲೇನಲ್ಲೇ ಅಬ್ಬರಿಸಿದ ಜೇಸನ್ ರಾಯ್-ಜಗದೀಸನ್ 6 ಓವರ್​ಗಳಲ್ಲಿ 66 ರನ್​ ಚಚ್ಚಿದ್ದರು.

2 / 7
ಇದಾದ ಬಳಿಕ ಕನ್ನಡಿಗ ವೈಶಾಕ್ ವಿಜಯಕುಮಾರ್ ಒಂದೇ ಓವರ್​ನಲ್ಲಿ ಜಗದೀಸನ್ (27) ಹಾಗೂ ಜೇಸನ್ ರಾಯ್ (56) ವಿಕೆಟ್ ಉರುಳಿಸಿ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆದರೆ ಆ ಬಳಿಕ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿದರು.

ಇದಾದ ಬಳಿಕ ಕನ್ನಡಿಗ ವೈಶಾಕ್ ವಿಜಯಕುಮಾರ್ ಒಂದೇ ಓವರ್​ನಲ್ಲಿ ಜಗದೀಸನ್ (27) ಹಾಗೂ ಜೇಸನ್ ರಾಯ್ (56) ವಿಕೆಟ್ ಉರುಳಿಸಿ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆದರೆ ಆ ಬಳಿಕ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿದರು.

3 / 7
ಆರ್​ಸಿಬಿ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಈ ಜೋಡಿಯು ಮೂರನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದ್ದರು. ಅಂದರೆ 13ನೇ ಓವರ್​ನಲ್ಲಿ 5 ರನ್​ಗಳಿಸಿದ್ದ ನಿತೀಶ್ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದರು.

ಆರ್​ಸಿಬಿ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಈ ಜೋಡಿಯು ಮೂರನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದ್ದರು. ಅಂದರೆ 13ನೇ ಓವರ್​ನಲ್ಲಿ 5 ರನ್​ಗಳಿಸಿದ್ದ ನಿತೀಶ್ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದರು.

4 / 7
ಇದಾದ ಬಳಿಕ 20 ರನ್​ಗಳಿಸಿದ್ದ ನಿತೀಶ್ ರಾಣಾ ಹರ್ಷಲ್ ಪಟೇಲ್ ಮತ್ತೊಂದು ಜೀವದಾನ ನೀಡಿದರು. ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಹರ್ಷಲ್ ಪಟೇಲ್ ಕೈಚೆಲ್ಲಿದರು.

ಇದಾದ ಬಳಿಕ 20 ರನ್​ಗಳಿಸಿದ್ದ ನಿತೀಶ್ ರಾಣಾ ಹರ್ಷಲ್ ಪಟೇಲ್ ಮತ್ತೊಂದು ಜೀವದಾನ ನೀಡಿದರು. ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಹರ್ಷಲ್ ಪಟೇಲ್ ಕೈಚೆಲ್ಲಿದರು.

5 / 7
ಈ ಎರಡು ಜೀವದಾನಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ನಿತೀಶ್ ರಾಣಾ 21 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 48 ರನ್​ ಚಚ್ಚಿದರು. ಅಲ್ಲದೆ ವೆಂಕಟೇಶ್ ಅಯ್ಯರ್ (31) ಜೊತೆಗೂಡಿ 80 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ಕೆಕೆಆರ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು.

ಈ ಎರಡು ಜೀವದಾನಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ನಿತೀಶ್ ರಾಣಾ 21 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 48 ರನ್​ ಚಚ್ಚಿದರು. ಅಲ್ಲದೆ ವೆಂಕಟೇಶ್ ಅಯ್ಯರ್ (31) ಜೊತೆಗೂಡಿ 80 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ಕೆಕೆಆರ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು.

6 / 7
201 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ತಂಡವು 8 ವಿಕೆಟ್ ನಷ್ಟಕ್ಕೆ 179 ರನ್​​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೆಕೆಆರ್ 21 ರನ್​ಗಳ ಜಯ ಸಾಧಿಸಿತು. ಒಂದು ವೇಳೆ ನಿತೀಶ್ ರಾಣಾ ಅವರ ವಿಕೆಟ್ ಬೇಗನೆ ಸಿಗುತ್ತಿದ್ದರೆ ಕೆಕೆಆರ್ ತಂಡವು ಒತ್ತಡಕ್ಕೆ ಒಳಗಾಗುತ್ತಿತ್ತು. ಅಲ್ಲದೆ ಮೂರನೇ ವಿಕೆಟ್​ಗೆ 80 ರನ್​ಗಳ ಭರ್ಜರಿ ಜೊತೆಯಾಟ ಕೂಡ ಮೂಡಿಬರುತ್ತಿರಲಿಲ್ಲ. ಇದರಿಂದ ಕೆಕೆಆರ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಕಡಿಮೆ ಗುರಿ ಪಡೆದು ಆರ್​ಸಿಬಿಗೆ ಗೆಲ್ಲುವ ಅವಕಾಶ ಇರುತ್ತಿತ್ತು. ಆದರೆ ಆರ್​ಸಿಬಿ ಕ್ಯಾಚ್ ಕೈಚೆಲ್ಲಿ ಮ್ಯಾಚ್ ಅನ್ನು ಕೂಡ ಕೈಚೆಲ್ಲಿದೆ ಎನ್ನಬಹುದು.

201 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ತಂಡವು 8 ವಿಕೆಟ್ ನಷ್ಟಕ್ಕೆ 179 ರನ್​​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೆಕೆಆರ್ 21 ರನ್​ಗಳ ಜಯ ಸಾಧಿಸಿತು. ಒಂದು ವೇಳೆ ನಿತೀಶ್ ರಾಣಾ ಅವರ ವಿಕೆಟ್ ಬೇಗನೆ ಸಿಗುತ್ತಿದ್ದರೆ ಕೆಕೆಆರ್ ತಂಡವು ಒತ್ತಡಕ್ಕೆ ಒಳಗಾಗುತ್ತಿತ್ತು. ಅಲ್ಲದೆ ಮೂರನೇ ವಿಕೆಟ್​ಗೆ 80 ರನ್​ಗಳ ಭರ್ಜರಿ ಜೊತೆಯಾಟ ಕೂಡ ಮೂಡಿಬರುತ್ತಿರಲಿಲ್ಲ. ಇದರಿಂದ ಕೆಕೆಆರ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಕಡಿಮೆ ಗುರಿ ಪಡೆದು ಆರ್​ಸಿಬಿಗೆ ಗೆಲ್ಲುವ ಅವಕಾಶ ಇರುತ್ತಿತ್ತು. ಆದರೆ ಆರ್​ಸಿಬಿ ಕ್ಯಾಚ್ ಕೈಚೆಲ್ಲಿ ಮ್ಯಾಚ್ ಅನ್ನು ಕೂಡ ಕೈಚೆಲ್ಲಿದೆ ಎನ್ನಬಹುದು.

7 / 7
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ