- Kannada News Photo gallery Cricket photos IPL 2024 karnataka players performance in 17th edition of ipl
IPL 2024: ಈ ಬಾರಿಯ ಐಪಿಎಲ್ನಲ್ಲಿ ಕನ್ನಡಿಗರ ಪ್ರದರ್ಶನ ಹೇಗಿತ್ತು?
IPL 2024: 17ನೇ ಆವೃತ್ತಿಯ ಐಪಿಎಲ್ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..
Updated on:May 29, 2024 | 4:51 PM
![17ನೇ ಆವೃತ್ತಿಯ ಐಪಿಎಲ್ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..](https://images.tv9kannada.com/wp-content/uploads/2024/05/ipl-2024-12.jpg?w=1280&enlarge=true)
17ನೇ ಆವೃತ್ತಿಯ ಐಪಿಎಲ್ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..
![ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ರಾಹುಲ್, ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಆದರೆ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯವಲ್ಲಿ ವಿಫಲರಾದರು.](https://images.tv9kannada.com/wp-content/uploads/2024/05/kl-rahul-4.jpg)
ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ರಾಹುಲ್, ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಆದರೆ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯವಲ್ಲಿ ವಿಫಲರಾದರು.
![ಈ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ಗೆ ಈ ಬಾರಿಯ ಐಪಿಎಲ್ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್ರನ್ನು ಕಣಕ್ಕಿಳಿಸಿತ್ತು.](https://images.tv9kannada.com/wp-content/uploads/2024/05/mayank-1.jpg)
ಈ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ಗೆ ಈ ಬಾರಿಯ ಐಪಿಎಲ್ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್ರನ್ನು ಕಣಕ್ಕಿಳಿಸಿತ್ತು.
![ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆ ಸಂಪಾದಿಸುವಲ್ಲಿ ಪಡಿಕಲ್ ಯಶಸ್ವಿಯಾಗಲಿಲ್ಲ.](https://images.tv9kannada.com/wp-content/uploads/2024/05/padikkal.jpg)
ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆ ಸಂಪಾದಿಸುವಲ್ಲಿ ಪಡಿಕಲ್ ಯಶಸ್ವಿಯಾಗಲಿಲ್ಲ.
![ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಉಳಿದಂತೆ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.](https://images.tv9kannada.com/wp-content/uploads/2024/05/manish-2.jpg)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಉಳಿದಂತೆ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.
![ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್ಗೆ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಫ್ರಾಂಚೈಸಿ ಕೈಬಿಟ್ಟಿತ್ತು.](https://images.tv9kannada.com/wp-content/uploads/2024/05/abhinav.jpg)
ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್ಗೆ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಫ್ರಾಂಚೈಸಿ ಕೈಬಿಟ್ಟಿತ್ತು.
![ಗುಜರಾತ್ ತಂಡದ ಪರ ಆಡಿದ್ದ ಮತ್ತೊಬ್ಬ ಕನ್ನಡಿಗ ಬಿ. ಆರ್ ಶರತ್ಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ 1 ರನ್ ಮಾತ್ರ ಕಲೆಹಾಕಿದ್ದರು.](https://images.tv9kannada.com/wp-content/uploads/2024/05/sharat.jpg)
ಗುಜರಾತ್ ತಂಡದ ಪರ ಆಡಿದ್ದ ಮತ್ತೊಬ್ಬ ಕನ್ನಡಿಗ ಬಿ. ಆರ್ ಶರತ್ಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ 1 ರನ್ ಮಾತ್ರ ಕಲೆಹಾಕಿದ್ದರು.
![ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.](https://images.tv9kannada.com/wp-content/uploads/2024/05/goutam.jpg)
ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.
![ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ಕಾವೇರಪ್ಪ ಆರ್ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.](https://images.tv9kannada.com/wp-content/uploads/2024/05/kaverappa-6.jpg)
ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ಕಾವೇರಪ್ಪ ಆರ್ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.
![ಆರ್ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್ಕುಮಾರ್ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ವಿಫಲರಾದರು. ಈ 4 ಪಂದ್ಯಗಳಲ್ಲಿ ಅವರು 4 ವಿಕೆಟ್ ಉರುಳಿಸಲಷ್ಟೇ ಶಕ್ತರಾದರು.](https://images.tv9kannada.com/wp-content/uploads/2024/05/vaishak.jpg)
ಆರ್ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್ಕುಮಾರ್ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ವಿಫಲರಾದರು. ಈ 4 ಪಂದ್ಯಗಳಲ್ಲಿ ಅವರು 4 ವಿಕೆಟ್ ಉರುಳಿಸಲಷ್ಟೇ ಶಕ್ತರಾದರು.
![ಉಳಿದಂತೆ ಆರ್ಸಿಬಿ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಮನೋಜ್ ಬಾಂಡಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇವರಿಬ್ಬರು ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.](https://images.tv9kannada.com/wp-content/uploads/2024/05/manoj.jpg)
ಉಳಿದಂತೆ ಆರ್ಸಿಬಿ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಮನೋಜ್ ಬಾಂಡಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇವರಿಬ್ಬರು ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.
Published On - 4:51 pm, Wed, 29 May 24
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ](https://images.tv9kannada.com/wp-content/uploads/2024/07/ind-vs-sl-5.jpg?w=280&ar=16:9)
![ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/07/smriti-mandhana-1.jpg?w=280&ar=16:9)
![ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು](https://images.tv9kannada.com/wp-content/uploads/2024/07/gold-items-7.jpg?w=280&ar=16:9)
![KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ? KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ?](https://images.tv9kannada.com/wp-content/uploads/2024/07/cabinet-approves-upgradation-of-krs-brindavan-do-you-know-what-features-it-will-have-1.jpg?w=280&ar=16:9)
![ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್](https://images.tv9kannada.com/wp-content/uploads/2024/07/charaideo.jpg?w=280&ar=16:9)
![‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ ‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ](https://images.tv9kannada.com/wp-content/uploads/2024/07/tamanna.jpg?w=280&ar=16:9)
![ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ](https://images.tv9kannada.com/wp-content/uploads/2024/07/krs-dam1.jpg?w=280&ar=16:9)
![ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ](https://images.tv9kannada.com/wp-content/uploads/2024/07/using-plastic-straw-is-harmful-to-health-know-straw-side-effects-in-kannada-2.jpg?w=280&ar=16:9)
![ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್ ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್](https://images.tv9kannada.com/wp-content/uploads/2024/07/vijayalkashmi-6.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)
![ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ](https://images.tv9kannada.com/wp-content/uploads/2024/07/in-surathkal-electric-pole-and-tree-uprooted-by-tornado-1.jpg?w=280&ar=16:9)
![ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು](https://images.tv9kannada.com/wp-content/uploads/2024/07/dinakar-chikkanna.jpg?w=280&ar=16:9)
![‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ ‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ](https://images.tv9kannada.com/wp-content/uploads/2024/07/ap-arjun-1.jpg?w=280&ar=16:9)
![ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್ ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್](https://images.tv9kannada.com/wp-content/uploads/2024/07/iqbal-hussain-3.jpg?w=280&ar=16:9)
![ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ](https://images.tv9kannada.com/wp-content/uploads/2024/07/hdk-75.jpg?w=280&ar=16:9)
![ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ! ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!](https://images.tv9kannada.com/wp-content/uploads/2024/07/ramanagara-2.jpg?w=280&ar=16:9)
![ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ! ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!](https://images.tv9kannada.com/wp-content/uploads/2024/07/in-a-trending-video-woman-catches-snake-behind-computers-in-a-office.jpg?w=280&ar=16:9)
![ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್ ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್](https://images.tv9kannada.com/wp-content/uploads/2024/07/nethravati-cow-save.jpg?w=280&ar=16:9)
![ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ](https://images.tv9kannada.com/wp-content/uploads/2024/07/suraj-3.jpg?w=280&ar=16:9)