
ಐಪಿಎಲ್ 2022 ರಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಬೌಲರ್ನ ಲೈನ್-ಲೆಂತ್ ತುಂಬಾ ಕೆಟ್ಟದಾಗಿತ್ತು. ಸಿರಾಜ್ 15 ಪಂದ್ಯಗಳನ್ನು ಆಡಿದ್ದರೂ ಅವರ ಖಾತೆಗೆ ಬಂದಿದ್ದು ಕೇವಲ 9 ವಿಕೆಟ್. ಅಷ್ಟೇ ಅಲ್ಲ, ಅವರ ಎಕಾನಮಿ ದರವೂ ಪ್ರತಿ ಓವರ್ಗೆ 10 ರನ್ಗಳಿಗಿಂತ ಹೆಚ್ಚಿತ್ತು. ಆದರೆ, ಇದೀಗ ಮೊಹಮ್ಮದ್ ಸಿರಾಜ್ ಬಲಿಷ್ಠ ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ.

ಮೊಹಮ್ಮದ್ ಸಿರಾಜ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ, ಆದರೆ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಭಾಗವಾಗಿರಬಹುದು. ಸದೃಢ ಪುನರಾಗಮನ ಬಯಸುವುದಾಗಿ ಸಿರಾಜ್ ಹೇಳಿದ್ದಾರೆ. ಇದರೊಂದಿಗೆ ಹೊಸ ನಾಯಕ ರೋಹಿತ್ ಶರ್ಮಾ ಬಗ್ಗೆಯೂ ಸಿರಾಜ್ ದೊಡ್ಡ ಮಾತು ಹೇಳಿದ್ದಾರೆ.



Published On - 3:35 pm, Fri, 3 June 22