AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳಾಟದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ ಈ ಮೂವರು ಪಾಕ್ ಕ್ರಿಕೆಟಿಗರ ಜೀವನ ಈಗ ಹೇಗಿದೆ ಗೊತ್ತಾ?

Spot Fixing: ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

TV9 Web
| Edited By: |

Updated on: Nov 03, 2022 | 1:27 PM

Share
ಪಾಕ್ ಕ್ರಿಕೆಟಿಗರು ನಡೆಸಿದ್ದ ಆ ಕಳ್ಳಾಟಕ್ಕೆ ಇಂದಿಗೆ ಭರ್ತಿ 12 ವರ್ಷಗಳಾಗಿವೆ. 2010 ರಲ್ಲಿ, ಇಂಗ್ಲೆಂಡ್​ನ ಲಾರ್ಡ್ಸ್  ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಳ್ಳಾಟ ಆಡಿದ್ದ ಪಾಕಿಸ್ತಾನ ತಂಡದ ಮೊಹಮ್ಮದ್ ಅಮೀರ್, ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೈಲುಪಾಲಾಗಿದ್ದರು. ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

ಪಾಕ್ ಕ್ರಿಕೆಟಿಗರು ನಡೆಸಿದ್ದ ಆ ಕಳ್ಳಾಟಕ್ಕೆ ಇಂದಿಗೆ ಭರ್ತಿ 12 ವರ್ಷಗಳಾಗಿವೆ. 2010 ರಲ್ಲಿ, ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಳ್ಳಾಟ ಆಡಿದ್ದ ಪಾಕಿಸ್ತಾನ ತಂಡದ ಮೊಹಮ್ಮದ್ ಅಮೀರ್, ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೈಲುಪಾಲಾಗಿದ್ದರು. ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

1 / 5
ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಮೂವರು ಪಾಕಿಸ್ತಾನಿ ಕ್ರಿಕೆಟಿಗರ ಪೈಕಿ ಮಾಜಿ ನಾಯಕ ಸಲ್ಮಾನ್ ಬಟ್‌ಗೆ ಗರಿಷ್ಠ ಎರಡೂವರೆ ವರ್ಷ ಶಿಕ್ಷೆಯಾಗಿತ್ತು. ಇವರಲ್ಲದೆ ಮೊಹಮ್ಮದ್ ಆಸಿಫ್​ಗೆ ಒಂದು ವರ್ಷ ಹಾಗೂ ಮೊಹಮ್ಮದ್ ಅಮೀರ್​ಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಮೂವರು ಪಾಕಿಸ್ತಾನಿ ಕ್ರಿಕೆಟಿಗರ ಪೈಕಿ ಮಾಜಿ ನಾಯಕ ಸಲ್ಮಾನ್ ಬಟ್‌ಗೆ ಗರಿಷ್ಠ ಎರಡೂವರೆ ವರ್ಷ ಶಿಕ್ಷೆಯಾಗಿತ್ತು. ಇವರಲ್ಲದೆ ಮೊಹಮ್ಮದ್ ಆಸಿಫ್​ಗೆ ಒಂದು ವರ್ಷ ಹಾಗೂ ಮೊಹಮ್ಮದ್ ಅಮೀರ್​ಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

2 / 5
ಆದರೆ, ಇದೀಗ ಮೂವರೂ ಕ್ರಿಕೆಟಿಗರು ಶಿಕ್ಷೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಜೈಲಿನಿಂದ ಹೊರಬಂದು ವರ್ಷಗಳೇ ಕಳೆದಿವೆ. ಅಲ್ಲದೆ ಈ ಮೂವರು ಕ್ರಿಕೆಟಿಗರ ಮೇಲೆ ಹೇರಿದ್ದ ನಿಷೇಧವನ್ನು 2015ರಲ್ಲೇ ತೆರವುಗೊಳಿಸಲಾಗಿದೆ. ಆ ಬಳಿಕ ಈ ಕ್ರಿಕೆಟಿಗರ ಬದುಕು ಹೇಗಿದೆ ಎಂಬುದರ ಒಂದಿಷ್ಟು ಮಾಹಿತಿ ಹೀಗಿದೆ.

ಆದರೆ, ಇದೀಗ ಮೂವರೂ ಕ್ರಿಕೆಟಿಗರು ಶಿಕ್ಷೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಜೈಲಿನಿಂದ ಹೊರಬಂದು ವರ್ಷಗಳೇ ಕಳೆದಿವೆ. ಅಲ್ಲದೆ ಈ ಮೂವರು ಕ್ರಿಕೆಟಿಗರ ಮೇಲೆ ಹೇರಿದ್ದ ನಿಷೇಧವನ್ನು 2015ರಲ್ಲೇ ತೆರವುಗೊಳಿಸಲಾಗಿದೆ. ಆ ಬಳಿಕ ಈ ಕ್ರಿಕೆಟಿಗರ ಬದುಕು ಹೇಗಿದೆ ಎಂಬುದರ ಒಂದಿಷ್ಟು ಮಾಹಿತಿ ಹೀಗಿದೆ.

3 / 5
ಈ ಮೂರರ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಮೊಹಮ್ಮದ್ ಅಮೀರ್ ಮಾತ್ರ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಯಿತು. ಸದ್ಯ ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಅಮೀರ್, ಹೆಚ್ಚಾಗಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಟಿ20 ಲೀಗ್ CPL ನಲ್ಲಿ ಮತ್ತು ಇಂಗ್ಲೆಂಡ್‌ನ ಕೌಂಟಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೂರರ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಮೊಹಮ್ಮದ್ ಅಮೀರ್ ಮಾತ್ರ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಯಿತು. ಸದ್ಯ ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಅಮೀರ್, ಹೆಚ್ಚಾಗಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಟಿ20 ಲೀಗ್ CPL ನಲ್ಲಿ ಮತ್ತು ಇಂಗ್ಲೆಂಡ್‌ನ ಕೌಂಟಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4 / 5
ಮೊಹಮ್ಮದ್ ಅಮೀರ್ ಅವರಂತೆ, ಮೊಹಮ್ಮದ್ ಆಸಿಫ್ ಕೂಡ ಈಗ ಹೆಚ್ಚಾಗಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ನಿಷೇಧದ ನಂತರ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರಾದರೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಇವರಲ್ಲದೆ, ಸಲ್ಮಾನ್ ಬಟ್ ಕೂಡ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಪ್ರಸ್ತುತ, ಅವರು ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿ ತಾವೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

ಮೊಹಮ್ಮದ್ ಅಮೀರ್ ಅವರಂತೆ, ಮೊಹಮ್ಮದ್ ಆಸಿಫ್ ಕೂಡ ಈಗ ಹೆಚ್ಚಾಗಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ನಿಷೇಧದ ನಂತರ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರಾದರೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಇವರಲ್ಲದೆ, ಸಲ್ಮಾನ್ ಬಟ್ ಕೂಡ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಪ್ರಸ್ತುತ, ಅವರು ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿ ತಾವೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

5 / 5
TV9 Web
TV9 Web

TV9 Kannada

Read More
Follow Us
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ