AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳಾಟದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ ಈ ಮೂವರು ಪಾಕ್ ಕ್ರಿಕೆಟಿಗರ ಜೀವನ ಈಗ ಹೇಗಿದೆ ಗೊತ್ತಾ?

Spot Fixing: ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

TV9 Web
| Updated By: ಪೃಥ್ವಿಶಂಕರ

Updated on: Nov 03, 2022 | 1:27 PM

ಪಾಕ್ ಕ್ರಿಕೆಟಿಗರು ನಡೆಸಿದ್ದ ಆ ಕಳ್ಳಾಟಕ್ಕೆ ಇಂದಿಗೆ ಭರ್ತಿ 12 ವರ್ಷಗಳಾಗಿವೆ. 2010 ರಲ್ಲಿ, ಇಂಗ್ಲೆಂಡ್​ನ ಲಾರ್ಡ್ಸ್  ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಳ್ಳಾಟ ಆಡಿದ್ದ ಪಾಕಿಸ್ತಾನ ತಂಡದ ಮೊಹಮ್ಮದ್ ಅಮೀರ್, ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೈಲುಪಾಲಾಗಿದ್ದರು. ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

ಪಾಕ್ ಕ್ರಿಕೆಟಿಗರು ನಡೆಸಿದ್ದ ಆ ಕಳ್ಳಾಟಕ್ಕೆ ಇಂದಿಗೆ ಭರ್ತಿ 12 ವರ್ಷಗಳಾಗಿವೆ. 2010 ರಲ್ಲಿ, ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಳ್ಳಾಟ ಆಡಿದ್ದ ಪಾಕಿಸ್ತಾನ ತಂಡದ ಮೊಹಮ್ಮದ್ ಅಮೀರ್, ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೈಲುಪಾಲಾಗಿದ್ದರು. ಆಗಸ್ಟ್ 2010 ರಲ್ಲಿ ಆಡಿದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಈ ಮೂವರು ಕ್ರಿಕೆಟಿಗರು, ಬುಕ್‌ಮೇಕರ್ ಮಝರ್ ಮಜೀದ್ ಜೊತೆಗೆ ಸ್ಪಾಟ್ ಫಿಕ್ಸಿಂಗ್‌ ಕೃತ್ಯವನ್ನು ನಡೆಸಿದ್ದರು ಎಂಬುದು ಸಾಭೀತಾಗಿತ್ತು.

1 / 5
ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಮೂವರು ಪಾಕಿಸ್ತಾನಿ ಕ್ರಿಕೆಟಿಗರ ಪೈಕಿ ಮಾಜಿ ನಾಯಕ ಸಲ್ಮಾನ್ ಬಟ್‌ಗೆ ಗರಿಷ್ಠ ಎರಡೂವರೆ ವರ್ಷ ಶಿಕ್ಷೆಯಾಗಿತ್ತು. ಇವರಲ್ಲದೆ ಮೊಹಮ್ಮದ್ ಆಸಿಫ್​ಗೆ ಒಂದು ವರ್ಷ ಹಾಗೂ ಮೊಹಮ್ಮದ್ ಅಮೀರ್​ಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಮೂವರು ಪಾಕಿಸ್ತಾನಿ ಕ್ರಿಕೆಟಿಗರ ಪೈಕಿ ಮಾಜಿ ನಾಯಕ ಸಲ್ಮಾನ್ ಬಟ್‌ಗೆ ಗರಿಷ್ಠ ಎರಡೂವರೆ ವರ್ಷ ಶಿಕ್ಷೆಯಾಗಿತ್ತು. ಇವರಲ್ಲದೆ ಮೊಹಮ್ಮದ್ ಆಸಿಫ್​ಗೆ ಒಂದು ವರ್ಷ ಹಾಗೂ ಮೊಹಮ್ಮದ್ ಅಮೀರ್​ಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

2 / 5
ಆದರೆ, ಇದೀಗ ಮೂವರೂ ಕ್ರಿಕೆಟಿಗರು ಶಿಕ್ಷೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಜೈಲಿನಿಂದ ಹೊರಬಂದು ವರ್ಷಗಳೇ ಕಳೆದಿವೆ. ಅಲ್ಲದೆ ಈ ಮೂವರು ಕ್ರಿಕೆಟಿಗರ ಮೇಲೆ ಹೇರಿದ್ದ ನಿಷೇಧವನ್ನು 2015ರಲ್ಲೇ ತೆರವುಗೊಳಿಸಲಾಗಿದೆ. ಆ ಬಳಿಕ ಈ ಕ್ರಿಕೆಟಿಗರ ಬದುಕು ಹೇಗಿದೆ ಎಂಬುದರ ಒಂದಿಷ್ಟು ಮಾಹಿತಿ ಹೀಗಿದೆ.

ಆದರೆ, ಇದೀಗ ಮೂವರೂ ಕ್ರಿಕೆಟಿಗರು ಶಿಕ್ಷೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಜೈಲಿನಿಂದ ಹೊರಬಂದು ವರ್ಷಗಳೇ ಕಳೆದಿವೆ. ಅಲ್ಲದೆ ಈ ಮೂವರು ಕ್ರಿಕೆಟಿಗರ ಮೇಲೆ ಹೇರಿದ್ದ ನಿಷೇಧವನ್ನು 2015ರಲ್ಲೇ ತೆರವುಗೊಳಿಸಲಾಗಿದೆ. ಆ ಬಳಿಕ ಈ ಕ್ರಿಕೆಟಿಗರ ಬದುಕು ಹೇಗಿದೆ ಎಂಬುದರ ಒಂದಿಷ್ಟು ಮಾಹಿತಿ ಹೀಗಿದೆ.

3 / 5
ಈ ಮೂರರ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಮೊಹಮ್ಮದ್ ಅಮೀರ್ ಮಾತ್ರ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಯಿತು. ಸದ್ಯ ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಅಮೀರ್, ಹೆಚ್ಚಾಗಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಟಿ20 ಲೀಗ್ CPL ನಲ್ಲಿ ಮತ್ತು ಇಂಗ್ಲೆಂಡ್‌ನ ಕೌಂಟಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೂರರ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಮೊಹಮ್ಮದ್ ಅಮೀರ್ ಮಾತ್ರ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಯಿತು. ಸದ್ಯ ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಅಮೀರ್, ಹೆಚ್ಚಾಗಿ ವೆಸ್ಟ್ ಇಂಡೀಸ್​ನಲ್ಲಿ ನಡೆಯುವ ಟಿ20 ಲೀಗ್ CPL ನಲ್ಲಿ ಮತ್ತು ಇಂಗ್ಲೆಂಡ್‌ನ ಕೌಂಟಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4 / 5
ಮೊಹಮ್ಮದ್ ಅಮೀರ್ ಅವರಂತೆ, ಮೊಹಮ್ಮದ್ ಆಸಿಫ್ ಕೂಡ ಈಗ ಹೆಚ್ಚಾಗಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ನಿಷೇಧದ ನಂತರ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರಾದರೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಇವರಲ್ಲದೆ, ಸಲ್ಮಾನ್ ಬಟ್ ಕೂಡ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಪ್ರಸ್ತುತ, ಅವರು ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿ ತಾವೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

ಮೊಹಮ್ಮದ್ ಅಮೀರ್ ಅವರಂತೆ, ಮೊಹಮ್ಮದ್ ಆಸಿಫ್ ಕೂಡ ಈಗ ಹೆಚ್ಚಾಗಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ನಿಷೇಧದ ನಂತರ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರಾದರೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಇವರಲ್ಲದೆ, ಸಲ್ಮಾನ್ ಬಟ್ ಕೂಡ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಪ್ರಸ್ತುತ, ಅವರು ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿ ತಾವೇ ಒಂದು ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

5 / 5
Follow us
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!