AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾ ಕ್ರಿಕೆಟ್ ಆಡ್ತಿದ್ದೆ… ಅದಕ್ಕೆ ಫಿಟ್​ನೆಸ್ ಕಡೆ ಗಮನ ಕೊಡೋಕೆ ಆಗಿಲ್ಲ..!

Azam Khan: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಫಿಟ್​ನೆಸ್ ಬಗ್ಗೆ ನೀಡಿರುವ ಕುಂಟು ನೆಪ. ಇದೀಗ ಆಝಂ ಖಾನ್ ಅವರ ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. 

ಝಾಹಿರ್ ಯೂಸುಫ್
|

Updated on: Sep 01, 2025 | 8:54 AM

Share
ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಆಝಂ ಖಾನ್ (Azam Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಅವರು ಸುದ್ದಿಯಲ್ಲಿರುವುದು ಫಿಟ್​ನೆಸ್ ಕಾರಣದಿಂದಾಗಿ. ಅಂದರೆ ದಢೂತಿ ದೇಹದ ಆಝಂ ಖಾನ್ ಅವರ ಆಯ್ಕೆ ಬಗ್ಗೆ ಹಲವು ಬಾರಿ ಪ್ರಶ್ನೆಗಳೆದ್ದಿದ್ದವು.

ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಆಝಂ ಖಾನ್ (Azam Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಅವರು ಸುದ್ದಿಯಲ್ಲಿರುವುದು ಫಿಟ್​ನೆಸ್ ಕಾರಣದಿಂದಾಗಿ. ಅಂದರೆ ದಢೂತಿ ದೇಹದ ಆಝಂ ಖಾನ್ ಅವರ ಆಯ್ಕೆ ಬಗ್ಗೆ ಹಲವು ಬಾರಿ ಪ್ರಶ್ನೆಗಳೆದ್ದಿದ್ದವು.

1 / 6
ಈ ಪಶ್ನೆಗಳ ನಡುವೆಯೇ ಆಝಂ ಖಾನ್ ಹಲವು ಬಾರಿ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಪ್ರದರ್ಶನ ಅಷ್ಟಕಷ್ಟೇ ಆಗಿರುತ್ತಿತ್ತು. ಅಷ್ಟೇ ಅಲ್ಲದೆ ಫಿಟ್​ನೆಸ್ ಕಾರಣ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸುತ್ತಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಈ ಟೀಕೆಗಳ ಕಾರಣ ಕಳೆದೊಂದು ವರ್ಷದಿಂದ ಆಝಂ ಖಾನ್ ಪಾಕ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಈ ಪಶ್ನೆಗಳ ನಡುವೆಯೇ ಆಝಂ ಖಾನ್ ಹಲವು ಬಾರಿ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಪ್ರದರ್ಶನ ಅಷ್ಟಕಷ್ಟೇ ಆಗಿರುತ್ತಿತ್ತು. ಅಷ್ಟೇ ಅಲ್ಲದೆ ಫಿಟ್​ನೆಸ್ ಕಾರಣ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸುತ್ತಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಈ ಟೀಕೆಗಳ ಕಾರಣ ಕಳೆದೊಂದು ವರ್ಷದಿಂದ ಆಝಂ ಖಾನ್ ಪಾಕ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

2 / 6
ಇದೀಗ ಸಂದರ್ಶನವೊಂದರಲ್ಲಿ ತನ್ನ ಫಿಟ್​ನೆಸ್ ಬಗ್ಗೆ ಆಝಂ ಖಾನ್ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ, ಅವರು ಫಿಟ್​ನೆಸ್ ಕಳಪೆಯಾಗಿರಲು ಮುಖ್ಯ ಕಾರಣ ಕ್ರಿಕೆಟ್ ಆಡುತ್ತಿರುವುದಂತೆ. ಅಂದರೆ ಕಳೆದ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್​ ಆಡುತ್ತಿರುವ ಕಾರಣ ಫಿಟ್​ನೆಸ್ ಕಡೆ ಗಮನಹರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ತನ್ನ ಫಿಟ್​ನೆಸ್ ಬಗ್ಗೆ ಆಝಂ ಖಾನ್ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ, ಅವರು ಫಿಟ್​ನೆಸ್ ಕಳಪೆಯಾಗಿರಲು ಮುಖ್ಯ ಕಾರಣ ಕ್ರಿಕೆಟ್ ಆಡುತ್ತಿರುವುದಂತೆ. ಅಂದರೆ ಕಳೆದ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್​ ಆಡುತ್ತಿರುವ ಕಾರಣ ಫಿಟ್​ನೆಸ್ ಕಡೆ ಗಮನಹರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

3 / 6
ನನಗೆ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಸಿಗದಿದ್ದಾಗ,  ಹಲವು ಲೀಗ್‌ಗಳಲ್ಲಿ ಕಣಕ್ಕಿಳಿಯುತ್ತೇನೆ. ಇದರಿಂದಾಗಿ ನನಗೆ ನನ್ನ ದೇಹದತ್ತ ಗಮನ ಕೊಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ನಾನು ಫಿಟ್ ಆಗಿಲ್ಲ ಅಷ್ಟೇ ಎಂದು ಆಝಂ ಖಾನ್ ಹೇಳಿದ್ದಾರೆ.

ನನಗೆ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಸಿಗದಿದ್ದಾಗ,  ಹಲವು ಲೀಗ್‌ಗಳಲ್ಲಿ ಕಣಕ್ಕಿಳಿಯುತ್ತೇನೆ. ಇದರಿಂದಾಗಿ ನನಗೆ ನನ್ನ ದೇಹದತ್ತ ಗಮನ ಕೊಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ನಾನು ಫಿಟ್ ಆಗಿಲ್ಲ ಅಷ್ಟೇ ಎಂದು ಆಝಂ ಖಾನ್ ಹೇಳಿದ್ದಾರೆ.

4 / 6
ಇದೀಗ ಆಝಂ ಖಾನ್ ನೀಡಿರುವ ಹೇಳಿಕೆಯು ಭಾರೀ ವೈರಲ್ ಆಗಿದೆ.  ಸಾಮಾನ್ಯವಾಗಿ ಕ್ರಿಕೆಟಿಗರು ಫಿಟ್​ನೆಸ್​ ಸಾಧಿಸಿ ಅಂಗಳಕ್ಕಿಳಿಯುತ್ತಾರೆ. ಆದರೆ ಆಝಂ ಖಾನ್ ಕ್ರಿಕೆಟ್ ಆಡುತ್ತಿರುವ ಕಾರಣ ಫಿಟ್​ನೆಸ್​ನತ್ತ ಗಮನ ಕೊಡಲು ಸಮಯ ಸಿಗುತ್ತಿಲ್ಲ ಎಂದೇಳಿ ನಗೆಪಾಟಲಿಗೀಡಾಗಿದ್ದಾರೆ.

ಇದೀಗ ಆಝಂ ಖಾನ್ ನೀಡಿರುವ ಹೇಳಿಕೆಯು ಭಾರೀ ವೈರಲ್ ಆಗಿದೆ.  ಸಾಮಾನ್ಯವಾಗಿ ಕ್ರಿಕೆಟಿಗರು ಫಿಟ್​ನೆಸ್​ ಸಾಧಿಸಿ ಅಂಗಳಕ್ಕಿಳಿಯುತ್ತಾರೆ. ಆದರೆ ಆಝಂ ಖಾನ್ ಕ್ರಿಕೆಟ್ ಆಡುತ್ತಿರುವ ಕಾರಣ ಫಿಟ್​ನೆಸ್​ನತ್ತ ಗಮನ ಕೊಡಲು ಸಮಯ ಸಿಗುತ್ತಿಲ್ಲ ಎಂದೇಳಿ ನಗೆಪಾಟಲಿಗೀಡಾಗಿದ್ದಾರೆ.

5 / 6
ಅಂದಹಾಗೆ ಈ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಮಗ. ಪಾಕಿಸ್ತಾನ್ ಪರ ಈವರೆಗೆ 14 ಟಿ20 ಪಂದ್ಯಗಳಲ್ಲಿ 13 ಇನಿಂಗ್ಸ್ ಆಡಿರುವ ಆಝಂ ಕಲೆಹಾಕಿರುವುದು 88 ರನ್​ಗಳು ಮಾತ್ರ. ಅಂದರೆ ಪ್ರತಿ ಪಂದ್ಯದ ಅವರ ರನ್ ಸರಾಸರಿ 8.8, ಇದಾಗ್ಯೂ ಅವರು ಕಳೆದ ವರ್ಷದವರೆಗೆ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು ಎಂಬುದೇ ಅಚ್ಚರಿ.

ಅಂದಹಾಗೆ ಈ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಮಗ. ಪಾಕಿಸ್ತಾನ್ ಪರ ಈವರೆಗೆ 14 ಟಿ20 ಪಂದ್ಯಗಳಲ್ಲಿ 13 ಇನಿಂಗ್ಸ್ ಆಡಿರುವ ಆಝಂ ಕಲೆಹಾಕಿರುವುದು 88 ರನ್​ಗಳು ಮಾತ್ರ. ಅಂದರೆ ಪ್ರತಿ ಪಂದ್ಯದ ಅವರ ರನ್ ಸರಾಸರಿ 8.8, ಇದಾಗ್ಯೂ ಅವರು ಕಳೆದ ವರ್ಷದವರೆಗೆ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು ಎಂಬುದೇ ಅಚ್ಚರಿ.

6 / 6
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!