Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ಅಭ್ಯಾಸ ಪಂದ್ಯದಲ್ಲೂ ರೋಹಿತ್ ವಿಫಲ; ತಂಡಕ್ಕೆ ತಲೆನೋವಾದ ನಾಯಕನ ಕಳಪೆ ಫಾರ್ಮ್

Rohit Sharma: ಉಪನಾಯಕ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್, ಮೊದಲ ನಾಲ್ಕು ಓವರ್​ಗಳಲ್ಲಿ ಖಾತೆಯನ್ನು ಸಹ ತೆರೆದಿರಲಿಲ್ಲ.

TV9 Web
| Updated By: ಪೃಥ್ವಿಶಂಕರ

Updated on: Oct 17, 2022 | 3:37 PM

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕುತ್ತರವಾಗಿ ಆಸೀಸ್ ತಂಡ 20 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್​ಗಳಿಗೆ ಆಲೌಟ್ ಆಯಿತು.

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕುತ್ತರವಾಗಿ ಆಸೀಸ್ ತಂಡ 20 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್​ಗಳಿಗೆ ಆಲೌಟ್ ಆಯಿತು.

1 / 5
ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ಸಿಡಿಸಿದರೆ, ಬೌಲಿಂಗ್​ನಲ್ಲಿ ಶಮಿ 3 ವಿಕೆಟ್ ಪಡೆದು ಮಿಂಚಿದರು. ಅಂತಿಮ ಹಂತದಲ್ಲಿ ಶಮಿಯ ಅದ್ಭುತ ಬೌಲಿಂಗ್ ಬಿಟ್ಟರೆ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಬೌಲರ್​ಗಳು ತೀರ ದುಬಾರಿಯಾದರು. ಇವರೊಂದಿಗೆ ಬ್ಯಾಟಿಂಗ್ ವಿಭಾಗದಲ್ಲೂ ನಾಯಕ ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿದರು.

ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ಸಿಡಿಸಿದರೆ, ಬೌಲಿಂಗ್​ನಲ್ಲಿ ಶಮಿ 3 ವಿಕೆಟ್ ಪಡೆದು ಮಿಂಚಿದರು. ಅಂತಿಮ ಹಂತದಲ್ಲಿ ಶಮಿಯ ಅದ್ಭುತ ಬೌಲಿಂಗ್ ಬಿಟ್ಟರೆ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಬೌಲರ್​ಗಳು ತೀರ ದುಬಾರಿಯಾದರು. ಇವರೊಂದಿಗೆ ಬ್ಯಾಟಿಂಗ್ ವಿಭಾಗದಲ್ಲೂ ನಾಯಕ ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿದರು.

2 / 5
ಉಪನಾಯಕ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್, ಮೊದಲ ನಾಲ್ಕು ಓವರ್​ಗಳಲ್ಲಿ ಖಾತೆಯನ್ನು ಸಹ ತೆರೆದಿರಲಿಲ್ಲ. 5ನೇ ಓವರ್​ನಲ್ಲಿ ಖಾತೆ ತೆರೆದ ರೋಹಿತ್, ಮ್ಯಾಕ್ಸ್​ವೆಲ್ ಓವರ್​ನಲ್ಲಿ ಒಂದು ಫೋರ್ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆ ಬಳಿಕ ಆಗರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಉಪನಾಯಕ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್, ಮೊದಲ ನಾಲ್ಕು ಓವರ್​ಗಳಲ್ಲಿ ಖಾತೆಯನ್ನು ಸಹ ತೆರೆದಿರಲಿಲ್ಲ. 5ನೇ ಓವರ್​ನಲ್ಲಿ ಖಾತೆ ತೆರೆದ ರೋಹಿತ್, ಮ್ಯಾಕ್ಸ್​ವೆಲ್ ಓವರ್​ನಲ್ಲಿ ಒಂದು ಫೋರ್ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆ ಬಳಿಕ ಆಗರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

3 / 5
ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್, ರಾಹುಲ್ ಅರ್ಧಶತಕ ಸಿಡಿಸಿದ್ದರೂ ಸಹ ಅವರ ಖಾತೆಯಲ್ಲಿ ಮಾತ್ರ ಕೇವಲ 1 ರನ್​ ಇತ್ತು. ಈ ಇಬ್ಬರು ಸೇರಿ ಒಟ್ಟು 78 ರನ್​ಗಳ ಜೊತೆಯಾಟ ನಡೆಸಿದರೆ, ಇದರಲ್ಲಿ ರಾಹುಲ್ ಒಬ್ಬರದ್ದೆ 57 ರನ್​​ಗಳಿದ್ದವು.

ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್, ರಾಹುಲ್ ಅರ್ಧಶತಕ ಸಿಡಿಸಿದ್ದರೂ ಸಹ ಅವರ ಖಾತೆಯಲ್ಲಿ ಮಾತ್ರ ಕೇವಲ 1 ರನ್​ ಇತ್ತು. ಈ ಇಬ್ಬರು ಸೇರಿ ಒಟ್ಟು 78 ರನ್​ಗಳ ಜೊತೆಯಾಟ ನಡೆಸಿದರೆ, ಇದರಲ್ಲಿ ರಾಹುಲ್ ಒಬ್ಬರದ್ದೆ 57 ರನ್​​ಗಳಿದ್ದವು.

4 / 5
ಕೊನೆಯ ಹತ್ತು ಇನ್ನಿಂಗ್ಸ್​ಗಳಿಂದ ರೋಹಿತ್ ಬ್ಯಾಟ್ ಸತತ ವಿಫಲವಾಗುತ್ತಿದೆ. ಇದು ಟೀಂ ಇಂಡಿಯಾದ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಇವರೊಂದಿಗೆ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.

ಕೊನೆಯ ಹತ್ತು ಇನ್ನಿಂಗ್ಸ್​ಗಳಿಂದ ರೋಹಿತ್ ಬ್ಯಾಟ್ ಸತತ ವಿಫಲವಾಗುತ್ತಿದೆ. ಇದು ಟೀಂ ಇಂಡಿಯಾದ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಇವರೊಂದಿಗೆ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.

5 / 5
Follow us
ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ ನೋಡಿ
ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್​ನಲ್ಲಿ ಕೊಟ್ಟಿದ್ದಾರೆ: ಸಾಧು ಕೋಕಿಲ
ಚಿತ್ರರಂಗ ಕೇಳಿದ್ದನ್ನೆಲ್ಲ ಬಜೆಟ್​ನಲ್ಲಿ ಕೊಟ್ಟಿದ್ದಾರೆ: ಸಾಧು ಕೋಕಿಲ
ಎತ್ತಿನಹೊಳೆ ಯೋಜನೆ ಚರ್ಚಿಸಲು 18ರಂದು ದೆಹಲಿ ಹೋಗುತ್ತೇನೆ: ಶಿವಕುಮಾರ್
ಎತ್ತಿನಹೊಳೆ ಯೋಜನೆ ಚರ್ಚಿಸಲು 18ರಂದು ದೆಹಲಿ ಹೋಗುತ್ತೇನೆ: ಶಿವಕುಮಾರ್
ಹಲಾಲ್ ಬಜೆಟ್ ಅಂದವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
ಹಲಾಲ್ ಬಜೆಟ್ ಅಂದವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
ಮಲ್ಟಿಪ್ಲೆಕ್ಸ್​ ಟಿಕೆಟ್ ದರದ ಮೇಲೆ ನಿಯಂತ್ರಣ, ಫಿಲ್ಮ್ ಚೇಂಬರ್ ಸಂತಸ
ಮಲ್ಟಿಪ್ಲೆಕ್ಸ್​ ಟಿಕೆಟ್ ದರದ ಮೇಲೆ ನಿಯಂತ್ರಣ, ಫಿಲ್ಮ್ ಚೇಂಬರ್ ಸಂತಸ
ಗ್ರೇಟರ್ ಬೆಂಗಳೂರು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ: ಶಿವಕುಮಾರ್
ಗ್ರೇಟರ್ ಬೆಂಗಳೂರು ಪ್ರತಿಯೊಬ್ಬ ಕನ್ನಡಿಗನ ಕನಸಾಗಿದೆ: ಶಿವಕುಮಾರ್
ರೈತರಿಗೆ ₹10,000 ಕೋಟಿ ಮೀಸಲಿಟ್ಟರೆ ಯಾವ ಮೂಲೆಗಾದೀತು? ಮೈಸೂರು ರೈತರು
ರೈತರಿಗೆ ₹10,000 ಕೋಟಿ ಮೀಸಲಿಟ್ಟರೆ ಯಾವ ಮೂಲೆಗಾದೀತು? ಮೈಸೂರು ರೈತರು
ಬಜೆಟ್​ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ
ಬಜೆಟ್​ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ, ಇಲ್ಲಿದೆ ನೇರ ಪ್ರಸಾರ
ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಕೋರ್ಟಲ್ಲಿ ಪ್ರಶ್ನಿಸುತ್ತೇವೆ: ಶಾಸಕ
ಮುಸಲ್ಮಾನರಿಗೆ ಮೀಸಲಾತಿ ನೀಡಿದ್ದನ್ನು ಕೋರ್ಟಲ್ಲಿ ಪ್ರಶ್ನಿಸುತ್ತೇವೆ: ಶಾಸಕ
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದು ಶ್ಲಾಘನೀಯ: ಹೆಬ್ಬಾರ್
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದು ಶ್ಲಾಘನೀಯ: ಹೆಬ್ಬಾರ್