AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shikhar Dhawan- Aesha Mukerji: ಫೇಸ್‌ಬುಕ್‌ನಲ್ಲಿ ಪ್ರೇಮ, 8 ವರ್ಷಗಳ ನಂತರ ವಿಚ್ಛೇದನ; ಧವನ್ ವೈವಾಹಿಕ ಬದುಕು ಹೇಗಿತ್ತು?

Shikhar Dhawan- Aesha Mukerji: ತಮಗಿಂತಲೂ 10 ವರ್ಷ ದೊಡ್ಡವರಾದ ಹಾಗೂ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಆಯೇಷಾ ಮುಖರ್ಜಿ ಅವರನ್ನು ಧವನ್ ಭೇಟಿಯಾಗಿದ್ದು ಹೇಗೆ? ಈ ಇಬ್ಬರ ನಡುವೆ ಯಾವಾಗ ಪ್ರೇಮಾಂಕುರವಾಯಿತು? ಯಾವಾಗ ಮದುವೆಯಾದರು? ಎಂಬೆಲ್ಲ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: Aug 24, 2024 | 4:07 PM

Share
ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಧವನ್ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಧವನ್ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿದ್ದವು. ಅಂತಿಮವಾಗಿ ಧವನ್ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ.

ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಧವನ್ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಧವನ್ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿದ್ದವು. ಅಂತಿಮವಾಗಿ ಧವನ್ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ.

1 / 10
ತಮ್ಮ ವೃತ್ತಿಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಧವನ್ ಅವರ ವೈಯಕ್ತಿಕ ಬದುಕು ಕೂಡ ಸೂತ್ರ ಹರಿದ ಗಾಳಿಪಟದಂತ್ತಾಗಿತ್ತು. ಪ್ರೀತಿಸಿ ಮದುವೆಯಾದ ಮಡದಿ, ಬರೋಬ್ಬರಿ 8 ವರ್ಷಗಳ ಜೊತೆ ಪಯಣದ ನಂತರ ಧವನ್ ಅವರಿಂದ ದೂರವಾಗಲು ಬಯಸಿದರು. ಅಂತಿಮವಾಗಿ ಧವನ್ ತಮ್ಮ ಮಡದಿಯಿಂದ 2023 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು.

ತಮ್ಮ ವೃತ್ತಿಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಧವನ್ ಅವರ ವೈಯಕ್ತಿಕ ಬದುಕು ಕೂಡ ಸೂತ್ರ ಹರಿದ ಗಾಳಿಪಟದಂತ್ತಾಗಿತ್ತು. ಪ್ರೀತಿಸಿ ಮದುವೆಯಾದ ಮಡದಿ, ಬರೋಬ್ಬರಿ 8 ವರ್ಷಗಳ ಜೊತೆ ಪಯಣದ ನಂತರ ಧವನ್ ಅವರಿಂದ ದೂರವಾಗಲು ಬಯಸಿದರು. ಅಂತಿಮವಾಗಿ ಧವನ್ ತಮ್ಮ ಮಡದಿಯಿಂದ 2023 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು.

2 / 10
ತಮಗಿಂತಲೂ 10 ವರ್ಷ ದೊಡ್ಡವರಾದ ಹಾಗೂ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಆಯೇಷಾ ಮುಖರ್ಜಿ ಅವರನ್ನು ಧವನ್ ಭೇಟಿಯಾಗಿದ್ದು ಹೇಗೆ? ಈ ಇಬ್ಬರ ನಡುವೆ ಯಾವಾಗ ಪ್ರೇಮಾಂಕುರವಾಯಿತು? ಯಾವಾಗ ಮದುವೆಯಾದರು? ಎಂಬೆಲ್ಲ ವಿವರ ಇಲ್ಲಿದೆ.

ತಮಗಿಂತಲೂ 10 ವರ್ಷ ದೊಡ್ಡವರಾದ ಹಾಗೂ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಆಯೇಷಾ ಮುಖರ್ಜಿ ಅವರನ್ನು ಧವನ್ ಭೇಟಿಯಾಗಿದ್ದು ಹೇಗೆ? ಈ ಇಬ್ಬರ ನಡುವೆ ಯಾವಾಗ ಪ್ರೇಮಾಂಕುರವಾಯಿತು? ಯಾವಾಗ ಮದುವೆಯಾದರು? ಎಂಬೆಲ್ಲ ವಿವರ ಇಲ್ಲಿದೆ.

3 / 10
ವಾಸ್ತವವಾಗಿ ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಇವರ ತಂದೆ ಭಾರತೀಯರಾದರೆ ತಾಯಿ ಬ್ರಿಟಿಷ್ ಮೂಲದವರಾಗಿದ್ದಾರೆ. ಆಯೇಷಾ ಮೆಲ್ಬೋರ್ನ್​ ಕಿಕ್ ಬಾಕ್ಸರ್ ಕೂಡ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.

ವಾಸ್ತವವಾಗಿ ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಇವರ ತಂದೆ ಭಾರತೀಯರಾದರೆ ತಾಯಿ ಬ್ರಿಟಿಷ್ ಮೂಲದವರಾಗಿದ್ದಾರೆ. ಆಯೇಷಾ ಮೆಲ್ಬೋರ್ನ್​ ಕಿಕ್ ಬಾಕ್ಸರ್ ಕೂಡ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.

4 / 10
ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್​ನಲ್ಲಿ ಪರಿಚಿತರಾದರು. ಕ್ರಮೇಣ ಈ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಧವನ್​ಗೆ ಪರಿಚಯವಾಗುವ ಮೊದಲ ಆಯೇಷಾಗೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ ಆಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು.

ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್​ನಲ್ಲಿ ಪರಿಚಿತರಾದರು. ಕ್ರಮೇಣ ಈ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಧವನ್​ಗೆ ಪರಿಚಯವಾಗುವ ಮೊದಲ ಆಯೇಷಾಗೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ ಆಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು.

5 / 10
 ಇದೆಲ್ಲದರ ನಡುವೆಯೂ ಧವನ್ ಹಾಗೂ ಆಯೇಷಾ ನಡುವೆ ಪ್ರೀತಿ ಹುಟ್ಟಿತ್ತು. 2009 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಆದರೆ ಮದುವೆಯಾಗಿ 1 ವರ್ಷದೊಳಗೆಯೇ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಮದುವೆಯಾದ ಬಳಿಕ ಭಾರತದಲ್ಲೇ ನೆಲೆಸುವ ಭರವಸೆ ನೀಡಿದ್ದ ಆಯೇಷಾ, ಮದುವೆಯ ನಂತರ ಆಸ್ಟ್ರೇಲಿಯಾದಲ್ಲೇ ವಾಸಿಸಲು ಆರಂಭಿಸಿದರು.

ಇದೆಲ್ಲದರ ನಡುವೆಯೂ ಧವನ್ ಹಾಗೂ ಆಯೇಷಾ ನಡುವೆ ಪ್ರೀತಿ ಹುಟ್ಟಿತ್ತು. 2009 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಆದರೆ ಮದುವೆಯಾಗಿ 1 ವರ್ಷದೊಳಗೆಯೇ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಮದುವೆಯಾದ ಬಳಿಕ ಭಾರತದಲ್ಲೇ ನೆಲೆಸುವ ಭರವಸೆ ನೀಡಿದ್ದ ಆಯೇಷಾ, ಮದುವೆಯ ನಂತರ ಆಸ್ಟ್ರೇಲಿಯಾದಲ್ಲೇ ವಾಸಿಸಲು ಆರಂಭಿಸಿದರು.

6 / 10
ಮಗ ಜೋರಾವರ್ ಹುಟ್ಟುವುದಕ್ಕೂ ಮುನ್ನವೇ ಆಯೇಷಾ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಹೀಗಾಗಿ ಧವನ್​ಗೆ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಈ ನಡುವೆ ಈ ಇಬ್ಬರ ನಡುವಿನ ಸಂಬಂಧವೂ ಹಳಸಿತ್ತು. ಆಯೇಷಾ ಹೆಚ್ಚು ಸಮಯ ಆಸ್ಟ್ರೇಲಿಯಾದಲ್ಲೇ ಇರುತ್ತಿದ್ದ ಕಾರಣ ಧವನ್ ಆಸ್ಟ್ರೇಲಿಯಾದಲ್ಲಿ ಆಸ್ತಿ ಖರೀದಿಸಿದ್ದರು.

ಮಗ ಜೋರಾವರ್ ಹುಟ್ಟುವುದಕ್ಕೂ ಮುನ್ನವೇ ಆಯೇಷಾ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಹೀಗಾಗಿ ಧವನ್​ಗೆ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಈ ನಡುವೆ ಈ ಇಬ್ಬರ ನಡುವಿನ ಸಂಬಂಧವೂ ಹಳಸಿತ್ತು. ಆಯೇಷಾ ಹೆಚ್ಚು ಸಮಯ ಆಸ್ಟ್ರೇಲಿಯಾದಲ್ಲೇ ಇರುತ್ತಿದ್ದ ಕಾರಣ ಧವನ್ ಆಸ್ಟ್ರೇಲಿಯಾದಲ್ಲಿ ಆಸ್ತಿ ಖರೀದಿಸಿದ್ದರು.

7 / 10
ಆದರೆ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದ್ದ ಕಾರಣ ಧವನ್, ಈ ಆಸ್ತಿಯನ್ನು ಆಯೇಷಾ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದ್ದರು. ಬಹುಶಃ ಶಿಖರ್ ಮತ್ತು ಆಯೇಷಾ ನಡುವಿನ ವೈಮನಸ್ಸಿಗೆ ಇದೂ ಒಂದು ಕಾರಣವಾಗಿರಬಹುದು. ಆದರೆ ಶಿಖರ್ ಧವನ್, ಮಾನಸಿಕ ಹಿಂಸೆ ಮತ್ತು ಮಗನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದ್ದ ಕಾರಣ ಧವನ್, ಈ ಆಸ್ತಿಯನ್ನು ಆಯೇಷಾ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದ್ದರು. ಬಹುಶಃ ಶಿಖರ್ ಮತ್ತು ಆಯೇಷಾ ನಡುವಿನ ವೈಮನಸ್ಸಿಗೆ ಇದೂ ಒಂದು ಕಾರಣವಾಗಿರಬಹುದು. ಆದರೆ ಶಿಖರ್ ಧವನ್, ಮಾನಸಿಕ ಹಿಂಸೆ ಮತ್ತು ಮಗನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

8 / 10
ಆದರೆ ಅನೇಕ ಪ್ರಯತ್ನಗಳ ಹೊರತಾಗಿಯೂ ಧವನ್​ಗೆ ತಮ್ಮ ಮಗನನ್ನು ತಮ್ಮ ಸುಪರ್ದಿಗೆ ಪಡೆಯಲು ಸಾಧ್ಯವಾಗಲಿಲ್ಲ. ಈ ಇಬ್ಬರಿಗೆ 2023 ರಲ್ಲಿ ವಿಚ್ಛೇದನ ಮಂಜೂರು ಮಾಡಿದ ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿಯಾಗುವ ಹಕ್ಕನ್ನು ನೀಡಿತ್ತು. ಅಲ್ಲದೆ ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸುವುದಕ್ಕೂ ಅನುಮತಿ ನೀಡಿದೆ.

ಆದರೆ ಅನೇಕ ಪ್ರಯತ್ನಗಳ ಹೊರತಾಗಿಯೂ ಧವನ್​ಗೆ ತಮ್ಮ ಮಗನನ್ನು ತಮ್ಮ ಸುಪರ್ದಿಗೆ ಪಡೆಯಲು ಸಾಧ್ಯವಾಗಲಿಲ್ಲ. ಈ ಇಬ್ಬರಿಗೆ 2023 ರಲ್ಲಿ ವಿಚ್ಛೇದನ ಮಂಜೂರು ಮಾಡಿದ ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿಯಾಗುವ ಹಕ್ಕನ್ನು ನೀಡಿತ್ತು. ಅಲ್ಲದೆ ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸುವುದಕ್ಕೂ ಅನುಮತಿ ನೀಡಿದೆ.

9 / 10
ಇದಲ್ಲದೆ ಮಗನ ಶಾಲಾ ರಜೆಯ ಅವಧಿಯ ಕನಿಷ್ಠ ಅರ್ಧದಷ್ಟು ರಜೆಯನ್ನು ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಕಳೆಯಲು ಅವಕಾಶ ನೀಡಿದೆ. ಇದಕ್ಕಾಗಿ ಧವನ್ ಕುಟುಂಬದೊಂದಿಗೆ ರಾತ್ರಿಯ ತಂಗುವಿಕೆ ಸೇರಿದಂತೆ ಭೇಟಿ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಧವನ್ ಅವರ ಪತ್ನಿ ಆಯೇಷಾ ಅವರಿಗೆ ನ್ಯಾಯಾಲಯ ಆದೇಶಿಸಿದೆ.

ಇದಲ್ಲದೆ ಮಗನ ಶಾಲಾ ರಜೆಯ ಅವಧಿಯ ಕನಿಷ್ಠ ಅರ್ಧದಷ್ಟು ರಜೆಯನ್ನು ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಕಳೆಯಲು ಅವಕಾಶ ನೀಡಿದೆ. ಇದಕ್ಕಾಗಿ ಧವನ್ ಕುಟುಂಬದೊಂದಿಗೆ ರಾತ್ರಿಯ ತಂಗುವಿಕೆ ಸೇರಿದಂತೆ ಭೇಟಿ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಧವನ್ ಅವರ ಪತ್ನಿ ಆಯೇಷಾ ಅವರಿಗೆ ನ್ಯಾಯಾಲಯ ಆದೇಶಿಸಿದೆ.

10 / 10
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ