Shreyas Iyer: ದುಲೀಪ್ ಟ್ರೋಫಿಯಲ್ಲಿ ಫೇಲ್; ಮತ್ತೊಂದು ದೇಶೀ ಟೂರ್ನಿಯತ್ತ ಶ್ರೇಯಸ್ ಅಯ್ಯರ್

|

Updated on: Sep 23, 2024 | 7:55 PM

Shreyas Iyer: ಟೀಂ ಇಂಡಿಯಾದಲ್ಲಿ ಶತಾಯಗತಾಯ ಸ್ಥಾನಗಿಟ್ಟಿಸಿಕೊಳ್ಳುವ ಸಂಕಲ್ಪ ತೊಟ್ಟಿರುವ ಶ್ರೇಯಸ್ ಅಯ್ಯರ್, ಇದೀಗ ಮತ್ತೊಂದು ದೇಶೀ ಟೂರ್ನಿಯನ್ನು ಆಡುವುದುಕ್ಕೆ ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಇರಾನಿ ಕಪ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಅಯ್ಯರ್, ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

1 / 7
ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದೇಶೀ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್, ಇಡೀ ಟೂರ್ನಿಯಲ್ಲಿ ವಿಶೇಷವಾದದ್ದೇನು ಮಾಡಲಿಲ್ಲ. ಟೂರ್ನಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಬಿಟ್ಟರೆ, ಅಯ್ಯರ್ ಬ್ಯಾಟ್​ನಿಂದ ಯಾವುದೇ ಬಿಗ್ ಇನ್ನಿಂಗ್ಸ್ ಕಂಡುಬರಲಿಲ್ಲ. ಇತ್ತ ಅವರ ನಾಯಕತ್ವದ ತಂಡ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಲಿಲ್ಲ.

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದೇಶೀ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್, ಇಡೀ ಟೂರ್ನಿಯಲ್ಲಿ ವಿಶೇಷವಾದದ್ದೇನು ಮಾಡಲಿಲ್ಲ. ಟೂರ್ನಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಬಿಟ್ಟರೆ, ಅಯ್ಯರ್ ಬ್ಯಾಟ್​ನಿಂದ ಯಾವುದೇ ಬಿಗ್ ಇನ್ನಿಂಗ್ಸ್ ಕಂಡುಬರಲಿಲ್ಲ. ಇತ್ತ ಅವರ ನಾಯಕತ್ವದ ತಂಡ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಲಿಲ್ಲ.

2 / 7
ದುಲೀಪ್ ಟ್ರೋಫಿಯಲ್ಲಿ ಎಲ್ಲಾ ಮೂರು ಸುತ್ತುಗಳನ್ನು ಆಡಿದ್ದ ಶ್ರೇಯಸ್ ಅಯ್ಯರ್ ಈ ಮೂರು ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 25.66 ರ ಕಳಪೆ ಸರಾಸರಿಯಲ್ಲಿ 154 ರನ್ ಗಳಿಸಿದರು. ಇದರಲ್ಲಿ 2 ಅರ್ಧ ಶತಕಗಳು ಸೇರಿದ್ದರೆ, ಎರಡು ಬಾರಿ ಅವರು ಖಾತೆ ತೆರೆಯದೆ ಔಟಾಗಿದ್ದರು.

ದುಲೀಪ್ ಟ್ರೋಫಿಯಲ್ಲಿ ಎಲ್ಲಾ ಮೂರು ಸುತ್ತುಗಳನ್ನು ಆಡಿದ್ದ ಶ್ರೇಯಸ್ ಅಯ್ಯರ್ ಈ ಮೂರು ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 25.66 ರ ಕಳಪೆ ಸರಾಸರಿಯಲ್ಲಿ 154 ರನ್ ಗಳಿಸಿದರು. ಇದರಲ್ಲಿ 2 ಅರ್ಧ ಶತಕಗಳು ಸೇರಿದ್ದರೆ, ಎರಡು ಬಾರಿ ಅವರು ಖಾತೆ ತೆರೆಯದೆ ಔಟಾಗಿದ್ದರು.

3 / 7
ಇದರ ಫಲವಾಗಿ ಶ್ರೇಯಸ್ ಅಯ್ಯರ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನವನ್ನು ಪಡೆಯಲಿಲ್ಲ. ಇದೀಗ ಟೀಂ ಇಂಡಿಯಾದಿಂದ ದೀರ್ಘ ಕಾಲ ಹೊರಗುಳಿಯುವ ಆತಂಕದಲ್ಲಿರುವ ಅಯ್ಯರ್​ಗೆ ಈ ವರ್ಷಾಂತ್ಯದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅವಕಾಶ ಸಿಗುವುದು ಡೌಟ್ ಎನ್ನಲಾಗುತ್ತಿದೆ.

ಇದರ ಫಲವಾಗಿ ಶ್ರೇಯಸ್ ಅಯ್ಯರ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನವನ್ನು ಪಡೆಯಲಿಲ್ಲ. ಇದೀಗ ಟೀಂ ಇಂಡಿಯಾದಿಂದ ದೀರ್ಘ ಕಾಲ ಹೊರಗುಳಿಯುವ ಆತಂಕದಲ್ಲಿರುವ ಅಯ್ಯರ್​ಗೆ ಈ ವರ್ಷಾಂತ್ಯದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅವಕಾಶ ಸಿಗುವುದು ಡೌಟ್ ಎನ್ನಲಾಗುತ್ತಿದೆ.

4 / 7
ಹೀಗಾಗಿ ಟೀಂ ಇಂಡಿಯಾದಲ್ಲಿ ಶತಾಯಗತಾಯ ಸ್ಥಾನಗಿಟ್ಟಿಸಿಕೊಳ್ಳುವ ಸಂಕಲ್ಪ ತೊಟ್ಟಿರುವ ಶ್ರೇಯಸ್ ಅಯ್ಯರ್, ಇದೀಗ ಮತ್ತೊಂದು ದೇಶೀ ಟೂರ್ನಿಯನ್ನು ಆಡುವುದುಕ್ಕೆ ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಇರಾನಿ ಕಪ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಅಯ್ಯರ್, ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಹೀಗಾಗಿ ಟೀಂ ಇಂಡಿಯಾದಲ್ಲಿ ಶತಾಯಗತಾಯ ಸ್ಥಾನಗಿಟ್ಟಿಸಿಕೊಳ್ಳುವ ಸಂಕಲ್ಪ ತೊಟ್ಟಿರುವ ಶ್ರೇಯಸ್ ಅಯ್ಯರ್, ಇದೀಗ ಮತ್ತೊಂದು ದೇಶೀ ಟೂರ್ನಿಯನ್ನು ಆಡುವುದುಕ್ಕೆ ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಇರಾನಿ ಕಪ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಅಯ್ಯರ್, ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

5 / 7
ವಾಸ್ತವವಾಗಿ ಈ ಇರಾನಿ ಕಪ್ ಪಂದ್ಯವು ಹಾಲಿ ರಣಜಿ ಚಾಂಪಿಯನ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡದ ನಡುವೆ ನಡೆಯಲ್ಲಿದೆ. ಅದರಂತೆ ಈ ಬಾರಿಯ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡದ ಪರ ಅಯ್ಯರ್ ಆಡಲಿದ್ದಾರೆ.  ಈ ವರ್ಷ ಮಾರ್ಚ್ 2024 ರಲ್ಲಿ ನಡೆದಿದ್ದ ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ವಾಸ್ತವವಾಗಿ ಈ ಇರಾನಿ ಕಪ್ ಪಂದ್ಯವು ಹಾಲಿ ರಣಜಿ ಚಾಂಪಿಯನ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡದ ನಡುವೆ ನಡೆಯಲ್ಲಿದೆ. ಅದರಂತೆ ಈ ಬಾರಿಯ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡದ ಪರ ಅಯ್ಯರ್ ಆಡಲಿದ್ದಾರೆ. ಈ ವರ್ಷ ಮಾರ್ಚ್ 2024 ರಲ್ಲಿ ನಡೆದಿದ್ದ ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

6 / 7
ಕ್ರಿಕ್‌ಬಝ್‌ನ ವರದಿ ಪ್ರಕಾರ ಇರಾನಿ ಕಪ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವ ವಹಿಸಲಿದ್ದಾರೆ. ಇವರಲ್ಲದೇ ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಕೂಡ ತಂಡದ ಭಾಗವಾಗಲು ಸಿದ್ಧರಾಗಿದ್ದಾರೆ. ಶಾರ್ದೂಲ್ ಠಾಕೂರ್ ಅವರು ಈ ಪಂದ್ಯಕ್ಕೆ ತಮ್ಮ ಲಭ್ಯತೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕ್ರಿಕ್‌ಬಝ್‌ನ ವರದಿ ಪ್ರಕಾರ ಇರಾನಿ ಕಪ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವ ವಹಿಸಲಿದ್ದಾರೆ. ಇವರಲ್ಲದೇ ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಕೂಡ ತಂಡದ ಭಾಗವಾಗಲು ಸಿದ್ಧರಾಗಿದ್ದಾರೆ. ಶಾರ್ದೂಲ್ ಠಾಕೂರ್ ಅವರು ಈ ಪಂದ್ಯಕ್ಕೆ ತಮ್ಮ ಲಭ್ಯತೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

7 / 7
ಕಳೆದ ಜೂನ್ 12 ರಂದು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾರ್ದೂಲ್ ಠಾಕೂರ್ ಕೂಡ ಅಂದಿನಿಂದ ಕ್ರಿಕೆಟ್​ನಿಂದ ಹೊರಗಿದ್ದರು. ಹೀಗಿರುವಾಗ ಶಾರ್ದೂಲ್ ಠಾಕೂರ್ ವಾಪಸಾಗಿರುವುದು ಟೀಂ ಇಂಡಿಯಾ ಪಾಲಿಗೆ ಶುಭ ಸೂಚನೆಯಾಗಿದೆ. ವಾಸ್ತವವಾಗಿ, ವರ್ಷಾಂತ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ. ಅಲ್ಲದೆ ವಿದೇಶಿ ನೆಲದಲ್ಲಿ ಶಾರ್ದೂಲ್ ಠಾಕೂರ್ ಅವರ ಪ್ರದರ್ಶನ ಅದ್ಭುತವಾಗಿರುವುದರಿಂದ, ಇರಾನಿ ಕಪ್​ನಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನವಿರಲಿದೆ.

ಕಳೆದ ಜೂನ್ 12 ರಂದು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾರ್ದೂಲ್ ಠಾಕೂರ್ ಕೂಡ ಅಂದಿನಿಂದ ಕ್ರಿಕೆಟ್​ನಿಂದ ಹೊರಗಿದ್ದರು. ಹೀಗಿರುವಾಗ ಶಾರ್ದೂಲ್ ಠಾಕೂರ್ ವಾಪಸಾಗಿರುವುದು ಟೀಂ ಇಂಡಿಯಾ ಪಾಲಿಗೆ ಶುಭ ಸೂಚನೆಯಾಗಿದೆ. ವಾಸ್ತವವಾಗಿ, ವರ್ಷಾಂತ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ. ಅಲ್ಲದೆ ವಿದೇಶಿ ನೆಲದಲ್ಲಿ ಶಾರ್ದೂಲ್ ಠಾಕೂರ್ ಅವರ ಪ್ರದರ್ಶನ ಅದ್ಭುತವಾಗಿರುವುದರಿಂದ, ಇರಾನಿ ಕಪ್​ನಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನವಿರಲಿದೆ.