AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs AFG: 16 ವೈಡ್, 66 ರನ್! ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಧೋನಿಯ ನಂಬಿಕಸ್ಥ ಬೌಲರ್

SL vs AFG: ಆಶ್ಚರ್ಯಕರ ಸಂಗತಿಯಿಂದರೇ ಇದೇ ಪತಿರಾನ ಐಪಿಎಲ್​ನಲ್ಲಿ ಧೋನಿಯ ನಂಬಿಕಸ್ಥ ಬೌಲರ್ ಎನಿಸಿಕೊಂಡಿದ್ದರು.

ಪೃಥ್ವಿಶಂಕರ
|

Updated on:Jun 03, 2023 | 11:34 AM

Share
ಧೋನಿ ತಂಡವನ್ನು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಲಂಕಾದ ಯುವ ಕ್ರಿಕೆಟರ್ ಮತೀಶಾ ಪತಿರಾನ ಲಂಕಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ನಿನ್ನೆಯಿಂದ ಆರಂಭವಾಗಿರುವ ಏಕದಿನ ಸರಣಿಗೆ ಲಂಕಾ ತಂಡದಲ್ಲಿ ಪತಿರಾನಾಗೆ ಅವಕಾಶ ನೀಡಲಾಗಿದೆ.

ಧೋನಿ ತಂಡವನ್ನು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಲಂಕಾದ ಯುವ ಕ್ರಿಕೆಟರ್ ಮತೀಶಾ ಪತಿರಾನ ಲಂಕಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ನಿನ್ನೆಯಿಂದ ಆರಂಭವಾಗಿರುವ ಏಕದಿನ ಸರಣಿಗೆ ಲಂಕಾ ತಂಡದಲ್ಲಿ ಪತಿರಾನಾಗೆ ಅವಕಾಶ ನೀಡಲಾಗಿದೆ.

1 / 6
ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ ಪತಿರಾನ ತೀರ ದುಬಾರಿ ಎನಿಸಿಕೊಂಡರು. ಚೊಚ್ಚಲ ಪಂದ್ಯದಲ್ಲೇ ಪತಿರಾನ ಬೌಲಿಂಗ್ ಮಾಡಿದ ರೀತಿ ನೋಡಿದರೆ ಬೌಲಿಂಗ್ ಮಾಡುವುದನ್ನೇ ಮರೆತಂತಿದೆ. ತಮ್ಮ ಖೋಟಾದ 8.5 ಓವರ್‌ಗಳನ್ನು ಬೌಲ್ ಮಾಡಿದ ಪತಿರಾನ ಬರೋಬ್ಬರಿ 66 ರನ್‌ ಬಿಟ್ಟುಕೊಟ್ಟರು.

ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ ಪತಿರಾನ ತೀರ ದುಬಾರಿ ಎನಿಸಿಕೊಂಡರು. ಚೊಚ್ಚಲ ಪಂದ್ಯದಲ್ಲೇ ಪತಿರಾನ ಬೌಲಿಂಗ್ ಮಾಡಿದ ರೀತಿ ನೋಡಿದರೆ ಬೌಲಿಂಗ್ ಮಾಡುವುದನ್ನೇ ಮರೆತಂತಿದೆ. ತಮ್ಮ ಖೋಟಾದ 8.5 ಓವರ್‌ಗಳನ್ನು ಬೌಲ್ ಮಾಡಿದ ಪತಿರಾನ ಬರೋಬ್ಬರಿ 66 ರನ್‌ ಬಿಟ್ಟುಕೊಟ್ಟರು.

2 / 6
ಅಲ್ಲದೆ ತಮ್ಮ ಖೋಟಾದಲ್ಲಿ ಬರೋಬ್ಬರಿ 16 ವೈಡ್ ಬಾಲ್‌ಗಳನ್ನು ಎಸೆದು ಲಂಕಾ ತಂಡದ ಸೋಲಿಗೆ ಪ್ರಮುಖ ಕಾರಣವೂ ಆದರು. ಅಂತಿಮವಾಗಿ 55 ರನ್ ಬಾರಿಸಿದ್ದ ರಹಮತ್ ಶಾ ವಿಕೆಟ್ ಪಡೆಯುವಲ್ಲಿ ಪತಿರಾನ ಯಶಸ್ವಿಯಾದರಾದರೂ ಅಷ್ಟರಲ್ಲಿ ಪಂದ್ಯ ಲಂಕಾ ಕೈಯಿಂದ ಜಾರಿ ಹೋಗಿತ್ತು.

ಅಲ್ಲದೆ ತಮ್ಮ ಖೋಟಾದಲ್ಲಿ ಬರೋಬ್ಬರಿ 16 ವೈಡ್ ಬಾಲ್‌ಗಳನ್ನು ಎಸೆದು ಲಂಕಾ ತಂಡದ ಸೋಲಿಗೆ ಪ್ರಮುಖ ಕಾರಣವೂ ಆದರು. ಅಂತಿಮವಾಗಿ 55 ರನ್ ಬಾರಿಸಿದ್ದ ರಹಮತ್ ಶಾ ವಿಕೆಟ್ ಪಡೆಯುವಲ್ಲಿ ಪತಿರಾನ ಯಶಸ್ವಿಯಾದರಾದರೂ ಅಷ್ಟರಲ್ಲಿ ಪಂದ್ಯ ಲಂಕಾ ಕೈಯಿಂದ ಜಾರಿ ಹೋಗಿತ್ತು.

3 / 6
ಆಶ್ಚರ್ಯಕರ ಸಂಗತಿಯಿಂದರೇ ಇದೇ ಪತಿರಾನ ಐಪಿಎಲ್​ನಲ್ಲಿ ಧೋನಿಯ ನಂಬಿಕಸ್ಥ ಬೌಲರ್ ಎನಿಸಿಕೊಂಡಿದ್ದರು. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದ ಪತಿರಾನ ಆಡಿದ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದರು.

ಆಶ್ಚರ್ಯಕರ ಸಂಗತಿಯಿಂದರೇ ಇದೇ ಪತಿರಾನ ಐಪಿಎಲ್​ನಲ್ಲಿ ಧೋನಿಯ ನಂಬಿಕಸ್ಥ ಬೌಲರ್ ಎನಿಸಿಕೊಂಡಿದ್ದರು. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದ ಪತಿರಾನ ಆಡಿದ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದರು.

4 / 6
ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ಇದೇ ಪತಿರಾನಗಾಗಿ ಧೋನಿ ಐಪಿಎಲ್​ನಲ್ಲಿ ಬರೋಬ್ಬರಿ 4 ನಿಮಿಷಗಳ ಕಾಲ ಆಟ ನಿಲ್ಲುಂತೆ ಮಾಡಿದ್ದರು. ಇದು ಐಪಿಎಲ್​ನಲ್ಲಿ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿರುವ ಪತಿರಾನಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ಇದೇ ಪತಿರಾನಗಾಗಿ ಧೋನಿ ಐಪಿಎಲ್​ನಲ್ಲಿ ಬರೋಬ್ಬರಿ 4 ನಿಮಿಷಗಳ ಕಾಲ ಆಟ ನಿಲ್ಲುಂತೆ ಮಾಡಿದ್ದರು. ಇದು ಐಪಿಎಲ್​ನಲ್ಲಿ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿರುವ ಪತಿರಾನಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

5 / 6
ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 268 ರನ್ ಗಳಿಸಿತು. ತಂಡದ ಪರ ಚರಿತಾ ಅಸಲಂಕಾ ಗರಿಷ್ಠ 91 ರನ್ ಗಳಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ 98 ರನ್ ಮತ್ತು ರಹಮತ್ ಶಾ 55 ರನ್‌ ಬಾರಿಸಿ ಶ್ರೀಲಂಕಾ ನೀಡಿದ ಗುರಿಯನ್ನು ಅಫ್ಘಾನಿಸ್ತಾನ ಸುಲಭವಾಗಿ ಸಾಧಿಸುವಂತೆ ಮಾಡಿದರು.

ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 268 ರನ್ ಗಳಿಸಿತು. ತಂಡದ ಪರ ಚರಿತಾ ಅಸಲಂಕಾ ಗರಿಷ್ಠ 91 ರನ್ ಗಳಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ 98 ರನ್ ಮತ್ತು ರಹಮತ್ ಶಾ 55 ರನ್‌ ಬಾರಿಸಿ ಶ್ರೀಲಂಕಾ ನೀಡಿದ ಗುರಿಯನ್ನು ಅಫ್ಘಾನಿಸ್ತಾನ ಸುಲಭವಾಗಿ ಸಾಧಿಸುವಂತೆ ಮಾಡಿದರು.

6 / 6

Published On - 11:31 am, Sat, 3 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ