Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಐಪಿಎಲ್‌ನಲ್ಲಿದ್ದ ಈ 4 ನಿಯಮಗಳನ್ನು ಟಿ20 ವಿಶ್ವಕಪ್​ನಲ್ಲಿ ಬಳಸುವುದಿಲ್ಲ

T20 World Cup 2024: ಈ ಬಾರಿಯ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಇದರಲ್ಲಿ ಬಳಸಿದ್ದ ನಿಯಮಗಳು ಕೂಡ ಕಾರಣವಾಗಿದ್ದವು. ಆದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಈ ನಿಯಮಗಳ ಬಳಕೆಗೆ ಮಾನ್ಯತೆ ಇರುವುದಿಲ್ಲ. ಅಂತಹ 4 ನಿಯಮಗಳು ಯಾವುವು ಎಂಬುದರ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: May 29, 2024 | 4:12 PM

17ನೇ ಆವೃತ್ತಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮಿಲಿಯನ್ ಡಾಲರ್ ಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜೂನ್ 2 ರಿಂದ ಮಿನಿ ವಿಶ್ವಕಪ್ ಸಮರ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಅರಂಭವಾಗುತ್ತಿದೆ.

17ನೇ ಆವೃತ್ತಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮಿಲಿಯನ್ ಡಾಲರ್ ಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜೂನ್ 2 ರಿಂದ ಮಿನಿ ವಿಶ್ವಕಪ್ ಸಮರ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಅರಂಭವಾಗುತ್ತಿದೆ.

1 / 6
ಇಷ್ಟು ದಿನ ಐಪಿಎಲ್ ಜ್ವರವನ್ನು ಮೈಗೇರಿಸಿಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಒಂದು ತಿಂಗಳು ಟಿ20 ವಿಶ್ವಕಪ್ ಬರಪೂರ ಮನರಂಜನೆ ನೀಡಲಿದೆ. ಈ ಬಾರಿಯ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಇದರಲ್ಲಿ ಬಳಸಿದ್ದ ನಿಯಮಗಳು ಕೂಡ ಕಾರಣವಾಗಿದ್ದವು. ಆದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಈ ನಿಯಮಗಳ ಬಳಕೆಗೆ ಮಾನ್ಯತೆ ಇರುವುದಿಲ್ಲ. ಅಂತಹ 4 ನಿಯಮಗಳು ಯಾವುವು ಎಂಬುದರ ವಿವರ ಇಲ್ಲಿದೆ.

ಇಷ್ಟು ದಿನ ಐಪಿಎಲ್ ಜ್ವರವನ್ನು ಮೈಗೇರಿಸಿಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಒಂದು ತಿಂಗಳು ಟಿ20 ವಿಶ್ವಕಪ್ ಬರಪೂರ ಮನರಂಜನೆ ನೀಡಲಿದೆ. ಈ ಬಾರಿಯ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣಲು ಇದರಲ್ಲಿ ಬಳಸಿದ್ದ ನಿಯಮಗಳು ಕೂಡ ಕಾರಣವಾಗಿದ್ದವು. ಆದರೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಈ ನಿಯಮಗಳ ಬಳಕೆಗೆ ಮಾನ್ಯತೆ ಇರುವುದಿಲ್ಲ. ಅಂತಹ 4 ನಿಯಮಗಳು ಯಾವುವು ಎಂಬುದರ ವಿವರ ಇಲ್ಲಿದೆ.

2 / 6
ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಐಪಿಎಲ್‌ನಲ್ಲಿ ರನ್ ಮಳೆ ಹರಿಯಲು ಪ್ರಮುಖ ಕಾರಣವೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಈ ನಿಯಮದಿಂದಾಗಿ ಪ್ರತಿ ತಂಡವೂ ಒಬ್ಬ ಬ್ಯಾಟರ್​ನನ್ನು ಹೆಚ್ಚುವರಿಯಾಗಿ ಕಣಕ್ಕಿಳಿಸುವ ಅವಕಾಶ ಹೊಂದಿತ್ತು. ಆದರೆ ಟಿ20 ವಿಶ್ವಕಪ್​ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ. ಹೀಗಾಗಿ ಟಾಸ್ ವೇಳೆ ನಾಯಕ ನೀಡಿದ 11 ಆಟಗಾರರ ಪಟ್ಟಿಯೇ ಪಂದ್ಯದಲ್ಲಿ ಆಡಬೇಕಾಗುತ್ತದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಐಪಿಎಲ್‌ನಲ್ಲಿ ರನ್ ಮಳೆ ಹರಿಯಲು ಪ್ರಮುಖ ಕಾರಣವೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಈ ನಿಯಮದಿಂದಾಗಿ ಪ್ರತಿ ತಂಡವೂ ಒಬ್ಬ ಬ್ಯಾಟರ್​ನನ್ನು ಹೆಚ್ಚುವರಿಯಾಗಿ ಕಣಕ್ಕಿಳಿಸುವ ಅವಕಾಶ ಹೊಂದಿತ್ತು. ಆದರೆ ಟಿ20 ವಿಶ್ವಕಪ್​ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ. ಹೀಗಾಗಿ ಟಾಸ್ ವೇಳೆ ನಾಯಕ ನೀಡಿದ 11 ಆಟಗಾರರ ಪಟ್ಟಿಯೇ ಪಂದ್ಯದಲ್ಲಿ ಆಡಬೇಕಾಗುತ್ತದೆ.

3 / 6
 ನೋ ಬಾಲ್, ವೈಡ್‌ಗೆ ಡಿಆರ್‌ಎಸ್ ಇಲ್ಲ: ಐಪಿಎಲ್‌ನಲ್ಲಿ ಪಂದ್ಯದ ವೇಳೆ ಅಂಪೈರ್​ಗಳು ನೀಡಿದ ವೈಡ್ ಬಾಲ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವಿರುವುದಿಲ್ಲ. ಅಲ್ಲಿ ಆಟಗಾರರು ವೈಡ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ನೋ ಬಾಲ್, ವೈಡ್‌ಗೆ ಡಿಆರ್‌ಎಸ್ ಇಲ್ಲ: ಐಪಿಎಲ್‌ನಲ್ಲಿ ಪಂದ್ಯದ ವೇಳೆ ಅಂಪೈರ್​ಗಳು ನೀಡಿದ ವೈಡ್ ಬಾಲ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವಿರುವುದಿಲ್ಲ. ಅಲ್ಲಿ ಆಟಗಾರರು ವೈಡ್ ಮತ್ತು ನೋ ಬಾಲ್‌ಗಳಿಗೆ ಡಿಆರ್‌ಎಸ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

4 / 6
ಓವರ್​ಗೆ ಒಂದು ಬೌನ್ಸರ್ ಮಾತ್ರ: ಐಪಿಎಲ್ ಪಂದ್ಯಗಳಲ್ಲಿ, ಯಾವುದೇ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಬಹುದಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಒಂದು ಓವರ್‌ನಲ್ಲಿ ಒಂದು ಬೌನ್ಸರ್ ಅನ್ನು ಮಾತ್ರ ಎಸೆಯಬಹುದು. ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಅಥವಾ ವೈಡ್ ಎಂದು ಪರಿಗಣಿಸಲಾಗುತ್ತದೆ.

ಓವರ್​ಗೆ ಒಂದು ಬೌನ್ಸರ್ ಮಾತ್ರ: ಐಪಿಎಲ್ ಪಂದ್ಯಗಳಲ್ಲಿ, ಯಾವುದೇ ಬೌಲರ್ ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಬೌಲ್ ಮಾಡಬಹುದಾಗಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಒಂದು ಓವರ್‌ನಲ್ಲಿ ಒಂದು ಬೌನ್ಸರ್ ಅನ್ನು ಮಾತ್ರ ಎಸೆಯಬಹುದು. ಎರಡನೇ ಬೌನ್ಸರ್ ಎಸೆದರೆ ಅದನ್ನು ನೋ ಬಾಲ್ ಅಥವಾ ವೈಡ್ ಎಂದು ಪರಿಗಣಿಸಲಾಗುತ್ತದೆ.

5 / 6
ಸ್ಟ್ರಾಟೆಜಿಕ್ ಟೈಮ್ ಔಟ್ ಇರುವುದಿಲ್ಲ: ಐಪಿಎಲ್‌ನಲ್ಲಿ, ಇನ್ನಿಂಗ್ಸ್‌ವೊಂದರಲ್ಲಿ ತಲಾ 2 ಬಾರಿ 2.30 ನಿಮಿಷಗಳ ಕಾಲ ಸ್ಟ್ರಾಟೆಜಿಕ್ ಟೈಮ್ ಔಟ್ ನಿಯಮವನ್ನು ಬಳಸಬಹುದಾಗಿತ್ತು. ಅಂದರೆ ಈ ವಿರಾಮದ ಅವಧಿಯಲ್ಲಿ ತಂಡಗಳು ಪಂದ್ಯಕ್ಕನುಗುಣವಾಗಿ ತಮ್ಮ ಆಟವನ್ನು ಬದಲಿಸುವ ಚಿಂತನೆ ನಡೆಸಬಹುದಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ.

ಸ್ಟ್ರಾಟೆಜಿಕ್ ಟೈಮ್ ಔಟ್ ಇರುವುದಿಲ್ಲ: ಐಪಿಎಲ್‌ನಲ್ಲಿ, ಇನ್ನಿಂಗ್ಸ್‌ವೊಂದರಲ್ಲಿ ತಲಾ 2 ಬಾರಿ 2.30 ನಿಮಿಷಗಳ ಕಾಲ ಸ್ಟ್ರಾಟೆಜಿಕ್ ಟೈಮ್ ಔಟ್ ನಿಯಮವನ್ನು ಬಳಸಬಹುದಾಗಿತ್ತು. ಅಂದರೆ ಈ ವಿರಾಮದ ಅವಧಿಯಲ್ಲಿ ತಂಡಗಳು ಪಂದ್ಯಕ್ಕನುಗುಣವಾಗಿ ತಮ್ಮ ಆಟವನ್ನು ಬದಲಿಸುವ ಚಿಂತನೆ ನಡೆಸಬಹುದಿತ್ತು. ಆದರೆ ಟಿ20 ವಿಶ್ವಕಪ್‌ನಲ್ಲಿ ಈ ನಿಯಮವನ್ನು ಬಳಸಲಾಗುವುದಿಲ್ಲ.

6 / 6
Follow us
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು