AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರೀದ್​ ಟೈಮಲ್ಲಿ 6 ಲಕ್ಷ ರೂ ವರೆಗೆ ರೇಟ್​​ ಏರಿಸಿಕೊಂಡಿದ್ದ ಧಾರವಾಡದ ಜಂಗ್ಲಿ ಟಗರು ಹೃದಯಾಘಾತಕ್ಕೆ ಬಲಿ

ಈ ಧಾರವಾಡ ಜಂಗ್ಲಿಯನ್ನು ಖರೀದಿಸಲು ಕಳೆದ ವಾರ ಬಕ್ರೀದ್​ ಟೈಮಲ್ಲಿ ವ್ಯಕ್ತಿಯೊಬ್ಬರು ಬಂದಿದ್ದರು, 6 ಲಕ್ಷ ರೂ ಕೊಡೋದಾಗಿ ಹೇಳಿದ್ದರಂತೆ. ಆದರೆ ಮಾರಾಟ ಮಾಡಲು ಮನೆಯವರು ನಿರಾಕರಿಸಿದ್ದರು. ಅದಾಗಿ ಒಂದು ವಾರಕ್ಕೆ ಟಗರು ಮೃತಪಟ್ಟಿದೆ. ಹೀಗೆ ಆಕಸ್ಮಿಕವಾಗಿ ಮೃತಪಡಲು ಹೃದಯಾಘಾತವೇ ಕಾರಣ ಎನ್ನಲಾಗಿದೆ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​|

Updated on: Jul 04, 2023 | 11:11 AM

Share
ಆತ ಕಾಳಗ ಮಾಡಲು ಕಣದಲ್ಲಿ ಕಾಲೂರಿದರೆ ಎದುರಾಳಿಗಳು ಚಿತ್​ ಆಗುತ್ತಿದ್ದರು, ಮುಂದೆ ಬರಲು ಹಿಂಜರಿಯುತ್ತಿದ್ದರು. ಅದೂ ಮೀರಿ ಕಾಳಗಕ್ಕೆ ಬಂದರೆ ಒಂದೇ ಒಂದು ಡಿಚ್ಚಿಗೆ ತಲೆ ತಿರುಗಿ ಬೀಳುತ್ತಿದ್ದುದು ಗ್ಯಾರಂಟಿ. ಇನ್ನು ಆತ ಯಾವುದೇ ಕಾಳಗದಲ್ಲಿ ಸೋತಿದ್ದೇ ಇಲ್ಲ. ಆತ ಧಾರವಾಡ ಜನರ ಹೆಮ್ಮೆಯ ಮಗ. ಆದರೆ ಆತ ಒಮ್ಮಿಂದೊಮ್ಮೆಲೇ ಇಲ್ಲ ಅಂದರೆ ಹೇಗಾಗಬೇಡ? ಅಂಥದ್ದೊಂದು ಘಟನೆಯಿಂದ ಆತನ ಕುಟುಂಬಸ್ಥರಷ್ಟೇ ಅಲ್ಲ, ಆತನ ಫ್ಯಾನ್ ಗಳು ಕೂಡ ದುಃಖದ ಕಡಲಿಗೆ ಜಾರಿದ್ದಾರೆ.

ಆತ ಕಾಳಗ ಮಾಡಲು ಕಣದಲ್ಲಿ ಕಾಲೂರಿದರೆ ಎದುರಾಳಿಗಳು ಚಿತ್​ ಆಗುತ್ತಿದ್ದರು, ಮುಂದೆ ಬರಲು ಹಿಂಜರಿಯುತ್ತಿದ್ದರು. ಅದೂ ಮೀರಿ ಕಾಳಗಕ್ಕೆ ಬಂದರೆ ಒಂದೇ ಒಂದು ಡಿಚ್ಚಿಗೆ ತಲೆ ತಿರುಗಿ ಬೀಳುತ್ತಿದ್ದುದು ಗ್ಯಾರಂಟಿ. ಇನ್ನು ಆತ ಯಾವುದೇ ಕಾಳಗದಲ್ಲಿ ಸೋತಿದ್ದೇ ಇಲ್ಲ. ಆತ ಧಾರವಾಡ ಜನರ ಹೆಮ್ಮೆಯ ಮಗ. ಆದರೆ ಆತ ಒಮ್ಮಿಂದೊಮ್ಮೆಲೇ ಇಲ್ಲ ಅಂದರೆ ಹೇಗಾಗಬೇಡ? ಅಂಥದ್ದೊಂದು ಘಟನೆಯಿಂದ ಆತನ ಕುಟುಂಬಸ್ಥರಷ್ಟೇ ಅಲ್ಲ, ಆತನ ಫ್ಯಾನ್ ಗಳು ಕೂಡ ದುಃಖದ ಕಡಲಿಗೆ ಜಾರಿದ್ದಾರೆ.

1 / 9
ಅಷ್ಟಕ್ಕೂ ಯಾರು ಆತ? ಬನ್ನಿ ನೋಡೋಣ... ಆತ ಕಾಲು ಕೆರೆದು ಓಡಿ ಬಂದು ಹೊಡೆಯೋ ಒಂದೇ ಒಂದು ಡಿಚ್ಚಿಗೆ ಎದುರಾಳಿ ಫಿನಿಷ್; ಹಿಂದೆ ಸರಿದು ಓಡಿ ಹೋದರೆ ಬಚಾವ್; ನುಗ್ಗಿ ಬಂದು ಡಿಚ್ಚಿ ಕೊಡುತ್ತಿದ್ದಂತೆಯೇ ಜನರ ಕೇಕೆ ಶಿಳ್ಳೆ -ಹೀಗೆ ಎದುರಾಳಿಗಳ ಎದೆಯನ್ನೇ ಬೆಚ್ಚಿ ಬೀಳಿಸುವಂತೆ ಡಿಚ್ಚಿ ಕೊಡೋ ಈ ಟಗರಿನ ಹೆಸರು ಧಾರವಾಡ ಜಂಗ್ಲಿ.

ಅಷ್ಟಕ್ಕೂ ಯಾರು ಆತ? ಬನ್ನಿ ನೋಡೋಣ... ಆತ ಕಾಲು ಕೆರೆದು ಓಡಿ ಬಂದು ಹೊಡೆಯೋ ಒಂದೇ ಒಂದು ಡಿಚ್ಚಿಗೆ ಎದುರಾಳಿ ಫಿನಿಷ್; ಹಿಂದೆ ಸರಿದು ಓಡಿ ಹೋದರೆ ಬಚಾವ್; ನುಗ್ಗಿ ಬಂದು ಡಿಚ್ಚಿ ಕೊಡುತ್ತಿದ್ದಂತೆಯೇ ಜನರ ಕೇಕೆ ಶಿಳ್ಳೆ -ಹೀಗೆ ಎದುರಾಳಿಗಳ ಎದೆಯನ್ನೇ ಬೆಚ್ಚಿ ಬೀಳಿಸುವಂತೆ ಡಿಚ್ಚಿ ಕೊಡೋ ಈ ಟಗರಿನ ಹೆಸರು ಧಾರವಾಡ ಜಂಗ್ಲಿ.

2 / 9
ಎದುರಾಳಿ ಎಷ್ಟೇ ಗಟ್ಟಿಯಾಗಿದ್ದರೂ ಧಾರವಾಡ ಜಂಗ್ಲಿ ಒಂದು ಬಾರಿ ಹೊಡೆದರೆ ನೆಲಕ್ಕುರುಳೋದು ಗ್ಯಾರಂಟಿ. ಧಾರವಾಡ ನಗರದ ಕಮಲಾಪುರ ಬಡಾವಣೆಯ ಮಂಜುನಾಥ ಅಮ್ಮಿನಬಾವಿ ಅನ್ನೋರು ನಾಲ್ಕು ವರ್ಷಗಳ ಹಿಂದೆ ಈ ಟಗರನ್ನು ಖರೀದಿಸಿದ್ದರು.

ಎದುರಾಳಿ ಎಷ್ಟೇ ಗಟ್ಟಿಯಾಗಿದ್ದರೂ ಧಾರವಾಡ ಜಂಗ್ಲಿ ಒಂದು ಬಾರಿ ಹೊಡೆದರೆ ನೆಲಕ್ಕುರುಳೋದು ಗ್ಯಾರಂಟಿ. ಧಾರವಾಡ ನಗರದ ಕಮಲಾಪುರ ಬಡಾವಣೆಯ ಮಂಜುನಾಥ ಅಮ್ಮಿನಬಾವಿ ಅನ್ನೋರು ನಾಲ್ಕು ವರ್ಷಗಳ ಹಿಂದೆ ಈ ಟಗರನ್ನು ಖರೀದಿಸಿದ್ದರು.

3 / 9
ಆಗ ಈ ಟಗರಿಗೆ ಮೂರು ವರ್ಷವಾಗಿತ್ತು. ಅಮ್ಮಿನಬಾವಿ ಕುಟುಂಬಸ್ಥರೆಲ್ಲರೂ ಈ ಜಂಗ್ಲಿಯನ್ನು ಮನೆಯ ಮಗನಂತೆಯೇ ಸಾಕಿ, ಬೆಳೆಸಿದರು. ಅಲ್ಲದೇ ಇದನ್ನು ಟಗರು ಕಾಳಗಕ್ಕೆ ಸಿದ್ದ ಮಾಡಿದರು. ನೋಡನೋಡುತ್ತಿದ್ದಂತೆಯೇ ಜಂಗ್ಲಿ ಧಾರವಾಡದಲ್ಲಿ ಫೇಮಸ್ ಆಗಿ ಹೋದ.

ಆಗ ಈ ಟಗರಿಗೆ ಮೂರು ವರ್ಷವಾಗಿತ್ತು. ಅಮ್ಮಿನಬಾವಿ ಕುಟುಂಬಸ್ಥರೆಲ್ಲರೂ ಈ ಜಂಗ್ಲಿಯನ್ನು ಮನೆಯ ಮಗನಂತೆಯೇ ಸಾಕಿ, ಬೆಳೆಸಿದರು. ಅಲ್ಲದೇ ಇದನ್ನು ಟಗರು ಕಾಳಗಕ್ಕೆ ಸಿದ್ದ ಮಾಡಿದರು. ನೋಡನೋಡುತ್ತಿದ್ದಂತೆಯೇ ಜಂಗ್ಲಿ ಧಾರವಾಡದಲ್ಲಿ ಫೇಮಸ್ ಆಗಿ ಹೋದ.

4 / 9
ಎಲ್ಲಿಯೇ ಟಗರು ಕಾಳಗ ಇದ್ದರೂ ಅಲ್ಲಿಗೆ ಧಾರವಾಡ ಜಂಗ್ಲಿ ಹಾಜರ್. ಹೀಗೆ ಕಾಳಗಕ್ಕೆ ಹೋದವನು ಒಂದು ಬಾರಿಯೂ ಸೋತಿದ್ದೇ ಇಲ್ಲ. ತನ್ನ ಡಿಚ್ಚಿಯಿಂದಲೇ ಫೇಮಸ್ ಆಗಿದ್ದ ಧಾರವಾಡ ಜಂಗ್ಲಿ ಇಂದು ಮೃತಪಟ್ಟಿದೆ. ಇದರಿಂದಾಗಿ ಅಮ್ಮಿನಬಾವಿ ಕುಟುಂಬ ಮನೆ ಮಗನನ್ನೇ ಕಳೆದುಕೊಂಡಷ್ಟು ದುಃಖದಲ್ಲಿದ್ದಾರೆ.

ಎಲ್ಲಿಯೇ ಟಗರು ಕಾಳಗ ಇದ್ದರೂ ಅಲ್ಲಿಗೆ ಧಾರವಾಡ ಜಂಗ್ಲಿ ಹಾಜರ್. ಹೀಗೆ ಕಾಳಗಕ್ಕೆ ಹೋದವನು ಒಂದು ಬಾರಿಯೂ ಸೋತಿದ್ದೇ ಇಲ್ಲ. ತನ್ನ ಡಿಚ್ಚಿಯಿಂದಲೇ ಫೇಮಸ್ ಆಗಿದ್ದ ಧಾರವಾಡ ಜಂಗ್ಲಿ ಇಂದು ಮೃತಪಟ್ಟಿದೆ. ಇದರಿಂದಾಗಿ ಅಮ್ಮಿನಬಾವಿ ಕುಟುಂಬ ಮನೆ ಮಗನನ್ನೇ ಕಳೆದುಕೊಂಡಷ್ಟು ದುಃಖದಲ್ಲಿದ್ದಾರೆ.

5 / 9
ಮೊನ್ನೆ ಭಾನುವಾರ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಏಳುವಷ್ಟರಲ್ಲಿಯೇ ಜಂಗ್ಲಿ ಕೊನೆಯುಸಿರೆಳೆದಿತ್ತು. ಜಂಗ್ಲಿ ಸತ್ತಿದೆ ಅನ್ನೋದನ್ನು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.

ಮೊನ್ನೆ ಭಾನುವಾರ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಏಳುವಷ್ಟರಲ್ಲಿಯೇ ಜಂಗ್ಲಿ ಕೊನೆಯುಸಿರೆಳೆದಿತ್ತು. ಜಂಗ್ಲಿ ಸತ್ತಿದೆ ಅನ್ನೋದನ್ನು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.

6 / 9
ಮನುಷ್ಯರು ಮೃತಪಟ್ಟಾಗ ಯಾವ ರೀತಿ ಅಂತಿಮಸಂಸ್ಕಾರ ಮಾಡುತ್ತಾರೋ ಅದೇ ರೀತಿ ಜಂಗ್ಲಿ ಅಂತ್ಯಸಂಸ್ಕಾರವನ್ನೂ ಮಾಡಲು ಮನೆಯವರು ನಿರ್ಧರಿಸಿದ್ದಾರೆ. ಟಗರಿನ ಶವವನ್ನು ಮನೆಯಲ್ಲಿ ಇಟ್ಟು, ಅದರ ಸುತ್ತಲೂ ಗೆದ್ದಾಗ ಪಡೆದಿರೋ ನೆನಪಿನ ಕಾಣಿಕೆಗಳನ್ನು ಇಡಲಾಗಿತ್ತು. ಜಂಗ್ಲಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೇಣಮ್ಮನಿಗೆ ಇದೀಗ ಮಗನನ್ನ ಕಳೆದುಕೊಂಡಷ್ಟೇ ದುಃಖವಾಗಿದೆ.

ಮನುಷ್ಯರು ಮೃತಪಟ್ಟಾಗ ಯಾವ ರೀತಿ ಅಂತಿಮಸಂಸ್ಕಾರ ಮಾಡುತ್ತಾರೋ ಅದೇ ರೀತಿ ಜಂಗ್ಲಿ ಅಂತ್ಯಸಂಸ್ಕಾರವನ್ನೂ ಮಾಡಲು ಮನೆಯವರು ನಿರ್ಧರಿಸಿದ್ದಾರೆ. ಟಗರಿನ ಶವವನ್ನು ಮನೆಯಲ್ಲಿ ಇಟ್ಟು, ಅದರ ಸುತ್ತಲೂ ಗೆದ್ದಾಗ ಪಡೆದಿರೋ ನೆನಪಿನ ಕಾಣಿಕೆಗಳನ್ನು ಇಡಲಾಗಿತ್ತು. ಜಂಗ್ಲಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೇಣಮ್ಮನಿಗೆ ಇದೀಗ ಮಗನನ್ನ ಕಳೆದುಕೊಂಡಷ್ಟೇ ದುಃಖವಾಗಿದೆ.

7 / 9
ಧಾರವಾಡದ ಜಂಗ್ಲಿ ಹೃದಯಾಘಾತಕ್ಕೆ ಬಲಿ

ಧಾರವಾಡದ ಜಂಗ್ಲಿ ಹೃದಯಾಘಾತಕ್ಕೆ ಬಲಿ

8 / 9
ಇನ್ನು ಈ ಧಾರವಾಡ ಜಂಗ್ಲಿಯನ್ನು ಖರೀದಿಸಲು ಅನೇಕರು ಬಂದಿದ್ದರಂತೆ. ಕಳೆದ ವಾರವಷ್ಟೇ ಇದನ್ನು ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬರು, 6 ಲಕ್ಷ ರೂಪಾಯಿವರೆಗೆ ಕೊಡೋದಾಗಿ ಹೇಳಿದ್ದರಂತೆ. ಆದರೆ ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಮನೆಯವರು ನಿರಾಕರಿಸಿದ್ದರು. ಅದಾಗಿ ಒಂದು ವಾರಕ್ಕೆ ಟಗರು ಮೃತಪಟ್ಟಿದೆ. ಹೀಗೆ ಆಕಸ್ಮಿಕವಾಗಿ ಮೃತಪಡಲು ಹೃದಯಾಘಾತವೇ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಧಾರವಾಡ ಜನರ ಮನಸ್ಸನ್ನು ಗೆದ್ದಿದ್ದ ಧಾರವಾಡ ಜಂಗ್ಲಿ ಈಗ ನೆನಪಷ್ಟೇ...

ಇನ್ನು ಈ ಧಾರವಾಡ ಜಂಗ್ಲಿಯನ್ನು ಖರೀದಿಸಲು ಅನೇಕರು ಬಂದಿದ್ದರಂತೆ. ಕಳೆದ ವಾರವಷ್ಟೇ ಇದನ್ನು ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬರು, 6 ಲಕ್ಷ ರೂಪಾಯಿವರೆಗೆ ಕೊಡೋದಾಗಿ ಹೇಳಿದ್ದರಂತೆ. ಆದರೆ ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಮನೆಯವರು ನಿರಾಕರಿಸಿದ್ದರು. ಅದಾಗಿ ಒಂದು ವಾರಕ್ಕೆ ಟಗರು ಮೃತಪಟ್ಟಿದೆ. ಹೀಗೆ ಆಕಸ್ಮಿಕವಾಗಿ ಮೃತಪಡಲು ಹೃದಯಾಘಾತವೇ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಧಾರವಾಡ ಜನರ ಮನಸ್ಸನ್ನು ಗೆದ್ದಿದ್ದ ಧಾರವಾಡ ಜಂಗ್ಲಿ ಈಗ ನೆನಪಷ್ಟೇ...

9 / 9
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ