- Kannada News Photo gallery Finance minister nirmala sitharaman purchase vegetables in chennai video viral
ಚೆನ್ನೈನ ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನು ಖರೀದಿಸಿದ್ದು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡಿದ್ದಾರೆ.
Updated on:Oct 09, 2022 | 8:54 AM

ಚೆನ್ನೈ: ನಾವು ಬೆಳೆದಂತೆ ನಮ್ಮ ಸ್ಟೇಟಸ್ ಕೂಡ ಬದಲಾಗುತ್ತಾ ಹೋಗುತ್ತೆ. ಆದ್ರೆ ಸಾಮಾನ್ಯವಾಗಿ ನಾವು ಇಷ್ಟಪಡುವ ಐಷಾರಾಮಿ ಜೀವನ ನಡೆಸುವ ಸೆಲೆಬ್ರಿಟಿಗಳು, ರಾಜಕಾರಣಿಗಳು ಜನ ಸಾಮಾನ್ಯರಂತೆ ಶಾಪಿಂಗ್ ಮಾಡ್ತಾರಾ? ಅವರಿಗೂ ಹಣದ ಸಮಸ್ಯೆ ಎದುರಾಗುತ್ತಾ? ನಮ್ಮಂತೆ ಶಾಂಪೂ ಖಾಲಿಯಾದಾಗ ಶಾಂಪೂ ಬಾಟಲಿಯಲ್ಲಿ ನೀರಾಕಿ ಸದ್ಯದ ಸಮಯಕ್ಕೆ ಸಾಕು ಅನ್ನುವಂತ ಮನಸ್ಥಿತಿ ಇರುತ್ತಾ? ಹೇಗೆ ಹತ್ತು ಹಲವು ಪ್ರೆಶ್ನೆಗಳು ಮೂಡುತ್ತವೆ. ಆದ್ರೆ ಇಲ್ಲಿ ಮಿತ್ತ ಸಚಿವೆ ಸಾಮಾನ್ಯ ಜನರಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನು ಖರೀದಿಸಿದ್ದು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ತರಕಾರಿ ಖರೀದಿ ವೇಳೆ ಕೆಲವು ಮಾರಾಟಗಾರರೊಂದಿಗೆ ಸಂವಾದ ನಡೆಸಿದರು ಎಂದು ಅವರ ಕಚೇರಿಯ ಟ್ವೀಟ್ ತಿಳಿಸಿದೆ. ವಿಡಿಯೋದಲ್ಲಿ ಅವರು ಕೆಲವು ಸಿಹಿ ಗೆಣಸು, ಹಾಗಲಕಾಯಿ ಆಯ್ದುಕೊಳ್ಳುತ್ತಿರುವುದು ಸೆರೆಯಾಗಿದೆ.

ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋಗೆ ಕಮೆಂಟ್ ಮಾಡಿದ್ದು, "ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರೂ ಸಹ ಹಣದುಬ್ಬರದಿಂದ ತಮ್ಮ ಉಳಿತಾಯ ಹೇಗೆ ಸರಿದೂಗಿಸಬಹುದು ಮತ್ತು ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಲಿತರು" ಎಂದು ಬರೆದುಕೊಂಡಿದ್ದಾರೆ.
Published On - 8:12 am, Sun, 9 October 22




