- Kannada News Photo gallery Ganesh Chaturthi 2024: 121 KG Silver Ganesha Pratishtapane in Hubballi, Kannada News
ಹುಬ್ಬಳ್ಳಿಯಲ್ಲಿ 121 ಕೆಜಿಯ ಬೆಳ್ಳಿ ಗಣೇಶ ಪ್ರತಿಷ್ಠಾಪನೆ, ಫೋಟೋಸ್ ನೋಡಿ
ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡಿಸುವ ಗಣಪನನ್ನು ನೋಡಲು ಹೊರ ಜಿಲ್ಲೆಗಳಿಂದ ಕೂಡ ಆಗಮಿಸುತ್ತಾರೆ. ಹುಬ್ಬಳ್ಳಿಯಲ್ಲಿ ಮೂರು ಕಡೆ ಬೆಳ್ಳಿ ಗಣೇಶ ವಿಗ್ರಹಗಳನ್ನು ಕೂಡಿಸಲಾಗುತ್ತದೆ. ಫೋಟೋಸ್ ನೋಡಿ.
Updated on: Sep 11, 2024 | 6:00 AM

ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೂಡಿಸುವ ಗಣಪನನ್ನು ಮತ್ತು ಗಣಪತಿ ಪೆಂಡಲ್ಗಳಲ್ಲಿ ಪ್ರದರ್ಶಿಸುವ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ನೋಡಲು ಹೊರ ಜಿಲ್ಲೆಗಳಿಂದ ಕೂಡ ಆಗಮಿಸುತ್ತಾರೆ.

ಹುಬ್ಬಳ್ಳಿಯ ಗಣೇಶೋತ್ಸವದಲ್ಲಿ ವಿಶೇಷವಾಗಿ ಮೂರು ಕಡೆ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಸರಾಫಗಟ್ಟಿ, ಶೀಲವಂತರ ಓಣಿ, ಶಿಂಪಿಗಲ್ಲಿಯಲ್ಲಿ ಬೆಳ್ಳಿ ಗಣಪನನ್ನು ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಗಣಪತಿಗಳ ಫೋಟೋಸ್ ಇಲ್ಲಿವೆ.

ಹುಬ್ಬಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗಣೇಶೋತ್ಸವ ಆರಂಭವಾಗಿದ್ದು ಸರಾಫಗಟ್ಟಿಯಲ್ಲಿ. ಕಳೆದ 65 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಲ್ಲಿ ಕಳೆದ 14 ವರ್ಷಗಳಿಂದ ಬೆಳ್ಳಿ ಗಣೇಶನನ್ನು ಸ್ಥಾಪಿಸಲಾಗುತ್ತಿದೆ. ಮೂಷಿಕ ಸೇರಿ 121 ಕೆಜಿ ಬೆಳ್ಳಿ ಗಣಪತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ರಂಗಕರ್ಮಿಗಳಿಂದ ನಾಟಕವನ್ನು ಆಯೋಜನೆ ಮಾಡಲಾಗಿದೆ.

ಶ್ರೀ ವರಸಿದ್ದಿ ವಿನಾಯಕ ಮಂಡಳಿಯಿಂದ ಶೀಲವಂತರ ಓಣಿಯಲ್ಲಿ ಕಳೆದ 44 ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ 24 ವರ್ಷಗಳಿಂದ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಪ್ರಭಾವಳಿ ಸೇರಿದಂತೆ ಒಟ್ಟು 50 ಕೆಜಿಯ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಗಣೇಶನಿಗೆ 1.25ಕೆಜಿಯ ಬಂಗಾರದ ಆರಭರಣಗಳಿಂದ ಅಲಂಕಾರ ಮಾಡಲಾಗಿದೆ. ಶ್ರೀ ವರಸಿದ್ದಿ ವಿನಾಯಕ ಮಂಡಳಿವತಿಯಿಂದ ಸಾಮಾಜಿಕ ಚಟುವಟಿಕೆಗಳು ಕೂಡ ನಡೆಯುತ್ತವೆ. ಈ ಬಾರಿ ಇಲ್ಲಿ ಶ್ರೀ ಸಿದ್ದಾರೂಢರ ಬಾಲ ಲೀಲೆಯನ್ನು ಪ್ರದರ್ಶಿಸಲಾಗುತ್ತಿದೆ.

ಶ್ರೀ ಮಾರುತಿ ಯುವಕ ಸೇವಾ ಸಂಘದಿಂದ ಶಿಂಪಿಗಲ್ಲಿಯಲ್ಲಿ ಕಳೆದ 60 ವರ್ಷದಿಂದ ಇಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ 18 ವರ್ಷಗಳಿಂದ ಇಲ್ಲಿ 51 ಕೆಜಿಯ ಬೆಳ್ಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಾರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರದರ್ಶನ ಇರಲಿದೆ.



















