
ಇಂದು ( ಸೆಪ್ಟೆಂಬರ್ 10, ಶುಕ್ರವಾರ) ಗಣೇಶ ಚತುರ್ಥಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಭಾದ್ರಪದ ಮಾಸ ಶುಕ್ಲ ಪಕ್ಷದ 4ನೇ ದಿನದಂದು ಗಣೇಶನ ಜನ್ಮದಿನ ಎಂದು ಪುರಾಣದಿಂದ ತಿಳಿದು ಬಂದಿದೆ.

ಮನೆ ಮನೆಗಳಲ್ಲಿ ಗಣೇಶನ ವಿಗ್ರಹ ಕೂರಿಸಿ ವಿಶೇಷ ಪೂಜೆ ಕೂಗೊಳ್ಳುವ ಮೂಲಕ ಹಿಂದೂ ಜನರು ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮುಂದಿನ ದಿನಗಳಲ್ಲಿ ಜೀವನ ತುಂಬಾ ಖುಷಿಯೇ ತುಂಬಿರಲಿ, ಸುಖ ನೆಮ್ಮದಿಯೇ ಜೀವನದಲ್ಲಿರಲಿ, ಸಂಪತ್ತು ಲಭಿಸಲಿ ಎಂದು ಗಣೇಶನನ್ನು ಈ ದಿನ ವಿಶೇಷವಾಗಿ ಆರಾಧಿಸಲಾಗುತ್ತದೆ.

ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ ರಾರಾಜಿಸುತ್ತಿವೆ. ಕಲಾವಿದ ಯಶವಂತ ಕೈಚಳಕದಲ್ಲಿ ಮೂಡಿದೆ ವಿವಿಧ ರೂಪದ ವಿಘ್ನ ನಿವಾರಕ.

ಗಣೇಶನ ವಿವಿಧ ರೂಪ ನೋಡಿ ಜನರು ಖುಷಿಯಾಗಿದ್ದಾರೆ. ಕೊರೊನಾ ಲಸಿಕೆ ಹೊತ್ತ ಗಣಪ. ದೇಹಧಾಡ್ಯ ಗಣಪ ಬೈಕ್ ಸವಾರಿ ಮಾಡುತ್ತಿರುವುದು ಹೆಚ್ಚು ಆಕರ್ಷಣಿಯವಾಗಿದೆ.

ಸಮಸ್ಯೆಗಳೆಲ್ಲ, ಕಷ್ಟಗಳೆಲ್ಲಾ ಬಹುಬೇಗ ಬದುಕಿನಿಂದ ದೂರವಾಗಲಿ ಎಂದು ವಿಘ್ನ ನಿವಾರಕನಲ್ಲಿ ಭಕ್ತಿಯಿಂದ ಬೇಡಿಕೊಳ್ಳುವ ದಿನವಿದು, ಈ ದಿನದಂದು 108 ದರ್ಬೆಗಳನ್ನು ಕೊಯ್ದು ಗಣೇಶನಿಗೆ ಅರ್ಪಿಸಿದರೆ ನಿಮ್ಮ ಬೇಡಿಕೆಗಳೆಲ್ಲವೂ ಪೂರೈಕೆಯಾಗುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ಕೂರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗಣಪತಿಗೆ ಇಷ್ಟವಾದ ಖಾದ್ಯಗಳನ್ನು ಮಾಡಿ ನೈವೇದ್ಯ ನೀಡಲಾಗುತ್ತದೆ. ಗಣಪತಿಗೆ ಪ್ರಿಯವಾದ ಮೋದಕ ಜತೆ ನಾನಾ ವಿಧದ ತಿನಿಸುಗಳು ಈ ದಿನದಂದು ವಿಶೇಷ.

ಸುದೀಪ್ ಅಭಿನಯದ ರೋಣ ಪಾತ್ರಧಾರಿ ಗಣಪ. ಹಸ್ತದಲ್ಲಿ ಮಲಗಿದ ವಿನಾಯಕ ಕೃಷ್ಣನ ಅವತಾರಿ ವೆಂಕಟೇಶ್ವರ ರೂಪದ ಗಣಪ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
Published On - 10:00 am, Fri, 10 September 21