ಪೆನ್ಸಿಲ್​ನಲ್ಲಿ ಮೂಡಿಬಂದ ಬಾಲ ಕೃಷ್ಣ; ಇಲ್ಲಿವೆ ಫೋಟೋಸ್​

ಕಿರಣ್ ಹನುಮಂತ್​ ಮಾದಾರ್

Updated on: Aug 25, 2024 | 2:42 PM

ಆಗಸ್ಟ್ 26 ರಂದು ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಈ ನಡುವೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಟ್ಟಣದ ನಳೀನಿ ನವೀನ್ ಕುಮಾರ್ ಎಂಬುವವರು, ಪೆನ್ಸಿಲ್​ನಲ್ಲಿ ಕೃಷ್ಣನನ್ನು ಕೆತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

1 / 6
ಶ್ರೀ ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 26 ರಂದು ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ತಾಯಂದಿರು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. 

ಶ್ರೀ ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 26 ರಂದು ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ತಾಯಂದಿರು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. 

2 / 6

ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲು ಮೀಸಲಾಗಿರುವ ಈ ದಿನವನ್ನು ಸಡಗರದಿಂದ ಎಲ್ಲೆಡೆ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ರಾಯಚೂರಿನಲ್ಲಿ ಪೆನ್ಸಿಲ್​ನಲ್ಲಿ ಬಾಲ ಕೃಷ್ಣನನ್ನು ಕೆತ್ತನೆ ಮಾಡಲಾಗಿದೆ.

3 / 6

ನಾಳೆ(ಸೋಮವಾರ) ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಬಾಲ ಕೃಷ್ಣನನ್ನ ಪೆನ್ಸಿಲ್​ನಲ್ಲಿ ಕೆತ್ತನೆ ಮಾಡಲಾಗಿದ್ದು, ಈ ಮೂಲಕ ವಿಶಿಷ್ಟವಾಗಿ ಕೃಷ್ಣನ ಹುಟ್ಟಿದ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.

4 / 6

ಇನ್ನು ಈ ಕೆತ್ತನೆಮ ಮಾಡಿದವರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಟ್ಟಣದ ನಳೀನಿ ನವೀನ್ ಕುಮಾರ್ ಎಂಬುವವರು, ಪೆನ್ಸಿಲ್​ನಲ್ಲಿ ಕೃಷ್ಣನನ್ನು ಕೆತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

5 / 6

ಪೆನ್ಸಿಲ್​ನಲ್ಲಿ ಮೂಡಿದ ಬಾಲ ಕೃಷ್ಣನ ಸೂಕ್ಷ್ಮ ಕಲಾಕೃತಿ, 1 ಮಿಲಿ ಮೀಟರ್ ಅಗಲ ಹಾಗೂ 1 ಸೆಂಟಿಮೀಟರ್ ಎತ್ತರವಾಗಿದ್ದು,  ಸುಮಾರು ನಾಲ್ಕು ಗಂಟೆಗಳಲ್ಲಿ ಈ ಕಲಾಕೃತಿಯನ್ನ ನಳೀನಿ ಅವರು ಕೆತ್ತನೆ ಮಾಡಿದ್ದಾರೆ.

6 / 6

ಇದು ನಳೀನಿಯವರ 104 ಸೂಕ್ಷ್ಮ ಕಲಾಕೃತಿಯಾಗಿದ್ದು, ಈ ಹಿಂದೆಯೂ ಅಯೋಧ್ಯೆ ದೇವಸ್ಥಾನ ಉದ್ಘಾಟನೆ ವೇಳೆ ಅಯೋಧ್ಯೆಯ ಕಲಾಕೃತಿ ಕೆತ್ತನೆ ಮಾಡಿದ್ದರು. ಇದೀಗ ಬಾಲ ಕೃಷ್ಣನನ್ನು ಪೆನ್ಸಿಲ್​ನಲ್ಲಿ ಕೆತ್ತನೆ ಮಾಡಿದ್ದಾರೆ.

Published On - 2:41 pm, Sun, 25 August 24

Loading...
Unable to load recommendations.
Follow Us