ಮದ್ವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ದುರಂತ ಸಾವು: ನಟಿ ಆಶಿಕಾ ರಂಗನಾಥ್ ಸಂಬಂಧಿ ಸಾವಿನ ರಹಸ್ಯ ಬಯಲು

Updated on: Nov 30, 2025 | 4:07 PM

ಮದುವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ಇಂದು ಮಸಣ ಸೇರಿದ್ದಾಳೆ. ಪ್ರೀತಿದವನ ಕಿರುಕುಳಕ್ಕೆ ಬೇಸತ್ತು ಇಂಜಿನಿಯರಿಂಗ್ ಓದಿದ್ದ ನಟಿ ಆಶಿಕಾ ರಂಗನಾಥ್​ ಮಾವನ ಮಗಳು ಅಚಲ (22) ದುಡುಕಿನ ನಿರ್ಧಾರ ತೆಗೆದುಕೊಂಡು ಪ್ರಾಣಬಿಟ್ಟಿದ್ದಾರೆ. ಹಾಸನ ಮೂಲದ‌ ಯುವತಿ ಅಚಲ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಪ್ರಿಯಕರನ ಕಿರುಕುಳ ಎಂದು ತಿಳಿದುಬಂದಿದೆ. ಈ ಸಂಬಂಧ ಖುದ್ದು ಅಚಲ ಡೆತ್​​ನೋಟ್​​ನಲ್ಲಿ ಬರೆದಿಟ್ಟಿದ್ದಾಳೆ. ಹಾಗಾದ್ರೆ, ಡೆತ್​​ನೋಟ್​ನಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

1 / 7
ನಟಿ ಆಶಿಕಾ ರಂಗನಾಥ್ ಸಂಬಂಧಿಯಾದ ಹಾಸನ (Hassan) ಮೂಲದ ಯುವತಿ ಬೆಂಗಳೂರಿನ ಪಾಂಡುರಂಗ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಅಚಲ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ನಟಿ ಆಶಿಕಾ ರಂಗನಾಥ್ ಸಂಬಂಧಿಯಾದ ಹಾಸನ (Hassan) ಮೂಲದ ಯುವತಿ ಬೆಂಗಳೂರಿನ ಪಾಂಡುರಂಗ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಅಚಲ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.

2 / 7
ಅಚಲ (22) ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದು, ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಹಂತದಲ್ಲಿದ್ದರು.ಆಕೆ ತನ್ನ ದೂರದ ಸಂಬಂಧಿ ಮಯಾಂಕ್ ಎನ್ನುವಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ, ಮಯಾಂಕ್ ಮದ್ವೆಯಾಗುವುದಾಗಿ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಅಚಲ (22) ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾಗಿದ್ದು, ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಹಂತದಲ್ಲಿದ್ದರು.ಆಕೆ ತನ್ನ ದೂರದ ಸಂಬಂಧಿ ಮಯಾಂಕ್ ಎನ್ನುವಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ, ಮಯಾಂಕ್ ಮದ್ವೆಯಾಗುವುದಾಗಿ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ.

3 / 7
ಇಂಜಿನಿಯರಿಂಗ್ ಓದಿದ್ದ ಯುವತಿ ಅಚಲ, ಮಯಾಂಕ್​ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಮದುವೆಯಾಗುವುದಾಗಿ ನಂಬಿಸಿ ಮಯಾಂಕ್‌ ಮೋಸ ಮಾಡಿದ್ದಾನೆ ಎಂದು ಮೃತ ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈತ ಮದುವೆಗೆ ಮುನ್ನವೇ ದೈಹಿಕ‌ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗ್ತಿದೆ.

ಇಂಜಿನಿಯರಿಂಗ್ ಓದಿದ್ದ ಯುವತಿ ಅಚಲ, ಮಯಾಂಕ್​ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಮದುವೆಯಾಗುವುದಾಗಿ ನಂಬಿಸಿ ಮಯಾಂಕ್‌ ಮೋಸ ಮಾಡಿದ್ದಾನೆ ಎಂದು ಮೃತ ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈತ ಮದುವೆಗೆ ಮುನ್ನವೇ ದೈಹಿಕ‌ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗ್ತಿದೆ.

4 / 7
ಮಯಾಂಕ್​ ಎಂಬಾತ ಮೃತ ಯುವತಿ ಅಚಲ ತನ್ನ ದೂರದ ಸಂಬಂಧಿಯೇ ಆಗಿದ್ದನಂತೆ. ಪ್ರೀತಿಸೋದಾಗಿ ನಂಬಿಸಿ ಅಚಲ ಜೊತೆ ಸುತ್ತಾಡಿದ್ದ ಈತ, ಮದುವೆಗೆ ಮೊದಲೇ ದೈಹಿಕ‌ ಸಂಬಂಧಕ್ಕೆ ಪೀಡಿಸಿದ್ದ ಎನ್ನಲಾಗ್ತಿದೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕ‌ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಮಯಾಂಕ್​ ಎಂಬಾತ ಮೃತ ಯುವತಿ ಅಚಲ ತನ್ನ ದೂರದ ಸಂಬಂಧಿಯೇ ಆಗಿದ್ದನಂತೆ. ಪ್ರೀತಿಸೋದಾಗಿ ನಂಬಿಸಿ ಅಚಲ ಜೊತೆ ಸುತ್ತಾಡಿದ್ದ ಈತ, ಮದುವೆಗೆ ಮೊದಲೇ ದೈಹಿಕ‌ ಸಂಬಂಧಕ್ಕೆ ಪೀಡಿಸಿದ್ದ ಎನ್ನಲಾಗ್ತಿದೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕ‌ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

5 / 7
ಪ್ರೇಮಿ ಮಯಾಂಕ್  ಮೋಸ ಮಾಡಿದ್ದಾನೆಂದು ಅಚಲ ಮಾಡಿದ್ದ ಮೆಸೇಜ್ ನಿಂದ ದೃಢಪಟ್ಟಿದೆ. ಅಚಲ, ಜೀವನದಲ್ಲಿ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನೀನು ನನಗೆ ಮೋಸ ಮಾಡಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ. ನನ್ನ ಕನಸುಗಳನ್ನು ನೀನು ನುಚ್ಚು ನೂರು ಮಾಡಿದ್ದೀಯ ಎಂದು ಪ್ರಿಯಕರ ಮಯಾಂಕ್​​ಗೆ ಮೆಸೇಜ್ ಮಾಡಿದ್ದಾಳೆ.

ಪ್ರೇಮಿ ಮಯಾಂಕ್ ಮೋಸ ಮಾಡಿದ್ದಾನೆಂದು ಅಚಲ ಮಾಡಿದ್ದ ಮೆಸೇಜ್ ನಿಂದ ದೃಢಪಟ್ಟಿದೆ. ಅಚಲ, ಜೀವನದಲ್ಲಿ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನೀನು ನನಗೆ ಮೋಸ ಮಾಡಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ. ನನ್ನ ಕನಸುಗಳನ್ನು ನೀನು ನುಚ್ಚು ನೂರು ಮಾಡಿದ್ದೀಯ ಎಂದು ಪ್ರಿಯಕರ ಮಯಾಂಕ್​​ಗೆ ಮೆಸೇಜ್ ಮಾಡಿದ್ದಾಳೆ.

6 / 7
ನನಗೆ ನೀನು ಮೋಸ ಮಾಡಿಲ್ಲವಾದರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು. ನೀನು ಮಾಡಿದ ಮೋಸಕ್ಕೆ ತಕ್ಕ ಬೆಲೆ ಕಟ್ಟಲೇ ಬೇಕು ಎಂದು ತನ್ನ ನೋವನ್ನು ಮೆಸೇಜ್​​ನಲ್ಲಿ ಹೇಳಿಕೊಂಡಿದ್ದಾಳೆ.

ನನಗೆ ನೀನು ಮೋಸ ಮಾಡಿಲ್ಲವಾದರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು. ನೀನು ಮಾಡಿದ ಮೋಸಕ್ಕೆ ತಕ್ಕ ಬೆಲೆ ಕಟ್ಟಲೇ ಬೇಕು ಎಂದು ತನ್ನ ನೋವನ್ನು ಮೆಸೇಜ್​​ನಲ್ಲಿ ಹೇಳಿಕೊಂಡಿದ್ದಾಳೆ.

7 / 7
ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಾಸನದ ಮಯಾಂಕ್ ಮತ್ತು ಆತನ ತಾಯಿ ಮೈನಾ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ನಡೆದು 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಬಂಧಿಸದಕ್ಕೆ ಮೃತ ಅಚಲ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಾಸನದ ಮಯಾಂಕ್ ಮತ್ತು ಆತನ ತಾಯಿ ಮೈನಾ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ನಡೆದು 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಬಂಧಿಸದಕ್ಕೆ ಮೃತ ಅಚಲ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 3:54 pm, Sun, 30 November 25