
ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.

ಮಳೆ

ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

ಮಳೆ

ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

ಉತ್ತರ ಕನ್ನಡದಲ್ಲಿ ಮಳೆ ಅಬ್ಬರಕ್ಕೆ ಕಂಗಾಲಾದ ಜನ

ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)
Published On - 12:26 pm, Sat, 24 July 21