Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂನಾ ಬಳಿ ಇದೆ 350 ದೀಪ ಸ್ತಂಭಗಳ ಚಮತ್ಕಾರಿ ಶಿವನ ಖಂಡೋಬಾ ಮಂದಿರ! ಅದರ ಇತಿಹಾಸ-ಧಾರ್ಮಿಕ ಮಹತ್ವ ಇಲ್ಲಿದೆ

ದೇಶದಲ್ಲಿ ಕೇವಲ ದರ್ಶನ ಭಾಗದಿಂದಲೇ ನಮ್ಮ ದುಃಖ ನೋವು ಮರೆಸುವಂತಹ ದೇವಾಲಯಗಳು ಅನೇಕವಿವೆ. ಅಂತಹ ಒಂದು ಚಮತ್ಕಾರಿ ಖಂಡೋಬಾ ಮಂದಿರ ಪೂನಾ ಸಮೀಪ ಇದೆ. ಅದು ಶಿವ ಮಂದಿರ. ಶಿವನ ಅವತಾರದ ದೇಗುಲ ಇದು. ಈ ದೇಗುಲದ ಸ್ಥಳ ಮಹಿಮೆ, ಇತಿಹಾಸ ಮತ್ತು ಧಾರ್ಮಿಕ ಮಹತ್ವ ಬಹಳಷ್ಟಿದೆ. ಅದನ್ನು ತಿಳಿಯಲು ಬನ್ನೀ... ಚಿತ್ರಗಳ ಮೂಲಕ ಮಂದಿರಕ್ಕೆ ಒಂದು ಸುತ್ತು ಹಾಕೋಣ.

TV9 Web
| Updated By: ಸಾಧು ಶ್ರೀನಾಥ್​

Updated on: Dec 21, 2021 | 6:06 AM

ಖಂಡೋಬಾ ಮಂದಿರದಲ್ಲಿ ದಸರಾ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಆ ವೇಳೆ ಚಿನ್ನದ ಖಡ್ಗವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಆಗ ಭಕ್ತರು 45 ಕೆಜಿನ ತೂಕದ ಖಡ್ಗವನ್ನು ಹಲ್ಲುಗಳಿಂದ ಎತ್ತಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸುತ್ತಾ ಖಂಡೋಬಾ ದೇವರ ಬಗ್ಗೆ ತಮಗಿರುವ ಭಕ್ತಿಯನ್ನು ತೋರಿಸುತ್ತಾರೆ.

ಖಂಡೋಬಾ ಮಂದಿರದಲ್ಲಿ ದಸರಾ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಆ ವೇಳೆ ಚಿನ್ನದ ಖಡ್ಗವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಆಗ ಭಕ್ತರು 45 ಕೆಜಿನ ತೂಕದ ಖಡ್ಗವನ್ನು ಹಲ್ಲುಗಳಿಂದ ಎತ್ತಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸುತ್ತಾ ಖಂಡೋಬಾ ದೇವರ ಬಗ್ಗೆ ತಮಗಿರುವ ಭಕ್ತಿಯನ್ನು ತೋರಿಸುತ್ತಾರೆ.

1 / 6
ಖಂಡೋಬಾ ಮಂದಿರದ ಚಮತ್ಕಾರ ಎನೆಂದರೆ ಸಂತಾನಹೀನ ದಂಪತಿ ಇಲ್ಲಿಗೆ ಭೇಟಿ ನೀಡಿ, ಶಿವನನ್ನು ಭಕ್ತಿಯಿಂದ ಜಪಿಸಿದರೆ ಅಂತಹ ದಂಪತಿಗೆ ಮಕ್ಕಳಾಗುತ್ತವೆ. ಇನ್ನು ವಿವಾಹಕ್ಕೆ ವಿಘ್ನಗಳನ್ನುಎದುರಿಸುತ್ತಿರುವವರು ಈ ಮಂದಿರಕ್ಕೆ ಭೇಟಿ ನೀಡಿ, ಶಿವನ ಆಶೀರ್ವಾದ ಪಡೆದರೆ ಎಲ್ಲಾ ತೊಂದರೆಗಳೂ ನಿವಾರಣೆಯಾಗಿ, ಜೀವನ ಸಂಗಾತಿ ಲಭಿಸಿ, ನಿರ್ವಿಘ್ನವಾಗಿ ವಿವಾಹ ನೆರವೇರುತ್ತದೆ

ಖಂಡೋಬಾ ಮಂದಿರದ ಚಮತ್ಕಾರ ಎನೆಂದರೆ ಸಂತಾನಹೀನ ದಂಪತಿ ಇಲ್ಲಿಗೆ ಭೇಟಿ ನೀಡಿ, ಶಿವನನ್ನು ಭಕ್ತಿಯಿಂದ ಜಪಿಸಿದರೆ ಅಂತಹ ದಂಪತಿಗೆ ಮಕ್ಕಳಾಗುತ್ತವೆ. ಇನ್ನು ವಿವಾಹಕ್ಕೆ ವಿಘ್ನಗಳನ್ನುಎದುರಿಸುತ್ತಿರುವವರು ಈ ಮಂದಿರಕ್ಕೆ ಭೇಟಿ ನೀಡಿ, ಶಿವನ ಆಶೀರ್ವಾದ ಪಡೆದರೆ ಎಲ್ಲಾ ತೊಂದರೆಗಳೂ ನಿವಾರಣೆಯಾಗಿ, ಜೀವನ ಸಂಗಾತಿ ಲಭಿಸಿ, ನಿರ್ವಿಘ್ನವಾಗಿ ವಿವಾಹ ನೆರವೇರುತ್ತದೆ

2 / 6
ವಿಶಾಲ ಕೋಟೆಯ ತಲುಪಲು 345 ಮೆಟ್ಟಿಲುಗಳನ್ನು ಶ್ರದ್ಧಾ ಭಕ್ತಿಯಿಂದ  ಹತ್ತಿ ಬರುವ ಭಕ್ತರಿಗೆ ಎದುರಿಗೆ ದೊಡ್ಡದಾದ ದೀಪ ಸ್ತಂಭ ಕಾಣಿಸಿಕೊಳ್ಳುತ್ತದೆ. 350 ವಿಶಾಲ ಬಂಡೆಗಳಿಂದ ಕೆತ್ತಿದ ದೀಪ ಸ್ತಂಭ ಇದಾಗಿದೆ. ಒಂದೊಂದು ದೀಪದ ಸುತ್ತಲೂ ನಾಲ್ಕೂ ದಿಕ್ಕುಗಳಲ್ಲಿ ದೀಪ ಬೆಳಗಿಸಬಹುದು. ಅದು ನಿಜಕ್ಕೂ ದಿವ್ಯ ಭವ್ಯ ನೋಟವಾಗಿರುತ್ತದೆ.

ವಿಶಾಲ ಕೋಟೆಯ ತಲುಪಲು 345 ಮೆಟ್ಟಿಲುಗಳನ್ನು ಶ್ರದ್ಧಾ ಭಕ್ತಿಯಿಂದ ಹತ್ತಿ ಬರುವ ಭಕ್ತರಿಗೆ ಎದುರಿಗೆ ದೊಡ್ಡದಾದ ದೀಪ ಸ್ತಂಭ ಕಾಣಿಸಿಕೊಳ್ಳುತ್ತದೆ. 350 ವಿಶಾಲ ಬಂಡೆಗಳಿಂದ ಕೆತ್ತಿದ ದೀಪ ಸ್ತಂಭ ಇದಾಗಿದೆ. ಒಂದೊಂದು ದೀಪದ ಸುತ್ತಲೂ ನಾಲ್ಕೂ ದಿಕ್ಕುಗಳಲ್ಲಿ ದೀಪ ಬೆಳಗಿಸಬಹುದು. ಅದು ನಿಜಕ್ಕೂ ದಿವ್ಯ ಭವ್ಯ ನೋಟವಾಗಿರುತ್ತದೆ.

3 / 6
ಖಂಡೋಬಾ ಮಂದಿರದಲ್ಲಿ ಸ್ಥಾಪಿತವಾಗಿರುವ ವಿಭಿನ್ನ ಪ್ರಕಾರದ ವಿಗ್ರಹಗಳು ವಿಶೇಷವಾಗಿವೆ, ಆಕರ್ಷಕವಾಗಿವೆ. ಖಂಡೋಬಾ ಮಂದಿರದ ಪ್ರವೇಶ ದ್ವಾರದಲ್ಲಿ ಕಂಚಿನ ಬೃಹದಾಕಾರದ ದೀಪ ಸ್ತಂಭಗಳಿವೆ.

ಖಂಡೋಬಾ ಮಂದಿರದಲ್ಲಿ ಸ್ಥಾಪಿತವಾಗಿರುವ ವಿಭಿನ್ನ ಪ್ರಕಾರದ ವಿಗ್ರಹಗಳು ವಿಶೇಷವಾಗಿವೆ, ಆಕರ್ಷಕವಾಗಿವೆ. ಖಂಡೋಬಾ ಮಂದಿರದ ಪ್ರವೇಶ ದ್ವಾರದಲ್ಲಿ ಕಂಚಿನ ಬೃಹದಾಕಾರದ ದೀಪ ಸ್ತಂಭಗಳಿವೆ.

4 / 6
ಮಂದಿರದಲ್ಲಿ ಶಿವನ ವಿಗ್ರಹ ಇದೆ. ಕುದುರೆಯ ಮೇಲೆ ಯೋಧನ ಹಾಗೆ ಗೋಚರಿಸುವ ಸುಂದರ ಶಿವನ ಪ್ರತಿಮೆ ಇದು. ಶಿವನ ಕೈಯಲ್ಲಿ ಖಡ್ಗ ಹಿಡಿದುಕೊಂಡು ರಾಕ್ಷಸರ ಸಂಹಾರಕ್ಕೆ ಸಿದ್ಧವಿರುವ ಮೂರ್ತಿ ಅದಾಗಿದೆ. ಏಕೆಂದರೆ ಈ ಭೂಮಿಯ ಮೇಲೆ ಮಲ್ಲ ಮತ್ತು ಮಣಿ ರಾಕ್ಷಸರ ಹಾವಳಿ ವಿಪರೀತವಾಗಿತ್ತು. ಅವರನ್ನು ಸಂಹಾರ ಮಾಡಲು ಶಿವ ಮಾರ್ತಾಂಡ ಭೈರವ ರೂಪದಲ್ಲಿ ಅವತರಿಸಿದ್ದ ಎಂಬುದು ನಂಬಿಕೆ. ಮುಂದೆ ಅದು ಖಂಡೋಬಾ ಮಂದಿರದ ಹೆಸರಿನಲ್ಲಿ ಖ್ಯಾತಿ ಪಡೆಯಿತು.

ಮಂದಿರದಲ್ಲಿ ಶಿವನ ವಿಗ್ರಹ ಇದೆ. ಕುದುರೆಯ ಮೇಲೆ ಯೋಧನ ಹಾಗೆ ಗೋಚರಿಸುವ ಸುಂದರ ಶಿವನ ಪ್ರತಿಮೆ ಇದು. ಶಿವನ ಕೈಯಲ್ಲಿ ಖಡ್ಗ ಹಿಡಿದುಕೊಂಡು ರಾಕ್ಷಸರ ಸಂಹಾರಕ್ಕೆ ಸಿದ್ಧವಿರುವ ಮೂರ್ತಿ ಅದಾಗಿದೆ. ಏಕೆಂದರೆ ಈ ಭೂಮಿಯ ಮೇಲೆ ಮಲ್ಲ ಮತ್ತು ಮಣಿ ರಾಕ್ಷಸರ ಹಾವಳಿ ವಿಪರೀತವಾಗಿತ್ತು. ಅವರನ್ನು ಸಂಹಾರ ಮಾಡಲು ಶಿವ ಮಾರ್ತಾಂಡ ಭೈರವ ರೂಪದಲ್ಲಿ ಅವತರಿಸಿದ್ದ ಎಂಬುದು ನಂಬಿಕೆ. ಮುಂದೆ ಅದು ಖಂಡೋಬಾ ಮಂದಿರದ ಹೆಸರಿನಲ್ಲಿ ಖ್ಯಾತಿ ಪಡೆಯಿತು.

5 / 6
ಖಂಡೋಬಾ ಮಂದಿರವು ಮಹಾರಾಷ್ಟ್ರದ ಐತಿಹಾಸಿಕ ಪೂನಾ ನಗರದಿಂದ ಶಿರಡಿಗೆ ಹೋಗುವ ಮಾರ್ಗದಲ್ಲಿದೆ. ಜೆಜೋರಿ ಗ್ರಾಮದ ಬಳಿ ಜಯಾದ್ರಿ ಪರ್ವತ ಶೃಂಖಲೆಯ ಮೇಲೆ ಭಗವಾನ್​ ಖಂಡೋಬಾ ಮಂದಿರವಿದೆ. ಈ ಮಂದಿರ ದ್ವಾಪರ ಯುಗದಿಂದಲೂ ಸ್ಥಾಪನೆಯಾಗಿದ್ದು ಅಂದಿನಿಂದಲೂ ಹಾಗೆಯೇ ಇದೆ.

ಖಂಡೋಬಾ ಮಂದಿರವು ಮಹಾರಾಷ್ಟ್ರದ ಐತಿಹಾಸಿಕ ಪೂನಾ ನಗರದಿಂದ ಶಿರಡಿಗೆ ಹೋಗುವ ಮಾರ್ಗದಲ್ಲಿದೆ. ಜೆಜೋರಿ ಗ್ರಾಮದ ಬಳಿ ಜಯಾದ್ರಿ ಪರ್ವತ ಶೃಂಖಲೆಯ ಮೇಲೆ ಭಗವಾನ್​ ಖಂಡೋಬಾ ಮಂದಿರವಿದೆ. ಈ ಮಂದಿರ ದ್ವಾಪರ ಯುಗದಿಂದಲೂ ಸ್ಥಾಪನೆಯಾಗಿದ್ದು ಅಂದಿನಿಂದಲೂ ಹಾಗೆಯೇ ಇದೆ.

6 / 6
Follow us
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್