- Kannada News Photo gallery Kolar SP who is also an alumnus of the same college where the college was cleaned kolar news in kannada
ತಾವು ಕಲಿತ ಸರ್ಕಾರಿ ಕಾಲೇಜಿಗೆ ಕಾಯಕಲ್ಪ ನೀಡಿದ ಕೋಲಾರ ಎಸ್ಪಿ ಡಿ.ದೇವರಾಜ್
ಕೋಲಾರದ ಸ್ವತಂತ್ರ್ಯ ಪೂರ್ವದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಡಿ.ದೇವರಾಜ್, ಅದೇ ಜಿಲ್ಲೆಯ ಎಸ್ಪಿಯಾಗಿ ಬಂದಿದ್ದಲ್ಲದೆ ತಾನು ಓದಿ ಆ ಕಾಲೇಜನ್ನು ಶುಚಿಗೊಳಿಸಿದ್ದಾರೆ.
Updated on: Nov 20, 2022 | 3:43 PM

Kolar SP who is also an alumnus of the same college where the college was cleaned kolar news in kannada

Kolar SP who is also an alumnus of the same college where the college was cleaned kolar news in kannada

ನೂರಾರು ಎನ್ಎಸ್ಎಸ್, ಎಸ್ಸಿಸಿ ಹಾಗೂ ಸೇವಾದಳದ ವಿದ್ಯಾರ್ಥಿಗಳು ಸೇರಿ ಹಲವು ಸಂಘಟನೆಗಳ ಮುಖಂಡರ ಜೊತೆಗೆ ಬಂದ ದೇವರಾಜ್ ಕಾಲೇಜನ್ನು ಕೆಲವೇ ಗಂಟೆಗಳಲ್ಲಿ ಶುಚಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವೊಂದು ಕಂಪನಿಗಳಿಗೆ ಮನವಿ ಮಾಡಿ ಸಿಎಸ್ಆರ್ ಅನುದಾನದಲ್ಲಿ ಕಾಲೇಜಿನ ಕಾಂಪೌಂಡ್ ಕಟ್ಟಡವನ್ನು ಹೊಸದಾಗಿ ನಿರ್ಮಿಸುವ ಕೆಲಸ ಮಾಡಿದ್ದಾರೆ.

ಕೋಲಾರ ಜಿಲ್ಲೆಗೆ ಕಳೆದ ಒಂದು ವರ್ಷದ ಹಿಂದೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ನಂತರ ದೇವರಾಜ್ ಕೇವಲ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ಉತ್ತಮ ಆಡಳಿತ ಕೊಡುವ ಜೊತೆಗೆ ತಮ್ಮೂರು ತಾವು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಹಲವು ಸಮಾಜಪರ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದು, ತಾವು ಓದಿದ ಕಾಲೇಜಿಗೆ ತಮ್ಮದೇ ಆದ ಏನಾದರು ಕೊಡುಗೆ ನೀಡಬೇಕು ಅನ್ನೋ ಕಾರಣಕ್ಕೆ ವಿಶೇಷ ಕಾಳಜಿ ವಹಿಸಿ ಕಾಲೇಜಿಗೆ ಕಾಯಕಲ್ಪ ಕೊಡುವ ಕೆಲಸ ಮಾಡುತ್ತಿದ್ದಾರೆ.

ಸದ್ಯ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಓದುವ ಈ ಕಾಲೇಜಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಜೊತೆಗೆ ತಾವೇ ಸ್ವತ: ಶ್ರಮದಾನದ ಮೂಲಕ ಶುಚಿಗೊಳಿಸುವ ಕೆಲಸಕ್ಕೆ ಇಳಿದ ಎಸ್ಪಿ ದೇವರಾಜ್ ಅವರ ಕಾರ್ಯಕ್ಕೆ ಸ್ಥಳೀಯರು ಹಾಗೂ ಕಾಲೇಜು ಉಪನ್ಯಾಸಕರು ಕೂಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ತಾವು ಓದಿದ ಕಾಲೇಜು, ತಾವು ಈ ಸ್ಥಾನಕ್ಕೆ ಬರಲು ನೆರವಾದ ಕಾಲೇಜಿನ ದುಸ್ಥಿತಿ ಕಂಡು ಅದಕ್ಕೆ ಕಾಯಕಲ್ಪ ಕೊಡಲು ಮುಂದಾದ ಎಸ್ಪಿ ದೇವರಾಜ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಷ್ಟೇ ಅಲ್ಲದೆ ಇದು ಇತರ ಅಧಿಕಾರಿಗಳಿಗೂ ಮಾದರಿಯಾಗಿದೆ. ಎಲ್ಲರೂ ದೇವರಾಜ್ ಅವರಂತೆ ತಾವು ಓದಿದ ಶಾಲೆ ಹಾಗೂ ಕಾಲೇಜುಗಳೀಗೆ ತಮ್ಮದೇ ಆದ ನೆರವನ್ನು ನೀಡಿದರೆ ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವಿಲ್ಲ. (ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ)
























