AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ದೂರಿಯಾಗಿ ನಡೆದ ದಹಿಂಕಾಲ ಉತ್ಸವ, ಸಹಸ್ರಾರು ಭಕ್ತರ ಮಧ್ಯ ಪಲಕ್ಕಿ ಮೇಲೆ ಬಂದ ಶ್ರೀ ವೆಂಕಟರಮಣ

ಅಂಕೋಲದಲ್ಲಿ ನಡೆದ ದಹಿಂಕಾಲ ಉತ್ಸವ ಕರಾವಳಿ ಸಂಸ್ಕೃತಿಗೆ ಕೈಗನ್ನಡಿಯಂತಿತ್ತು. ಹೆಜ್ಜೆ ಹೆಜ್ಜೆಗೂ ನಾಡ ಸಂಸ್ಕೃತಿ ವೈಭವ ಮನೆ ಮಾಡಿತ್ತು. ಸಹಸ್ರಾರು ಸಂಖ್ಯೆ ಭಕ್ತರ ಮಧ್ಯ ದೈವದ ಪಲಕ್ಕಿ ಮೆವಣಿಗೆ ನಡೆಯಿತು.

TV9 Web
| Updated By: Rakesh Nayak Manchi|

Updated on:Nov 20, 2022 | 3:00 PM

Share
ಉತ್ತರ ಕನ್ನಡ ಜಿಲ್ಲೆ ಅಂಕೋಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಅದ್ದೂರಿಯಾಗಿ ನಡೆಯಿತು. ಉತ್ಸವದಲ್ಲಿ  ಶ್ರೀ ವೆಂಕಟರಮಣ ಸ್ವಾಮಿ ಹಾಗೂ ಶಾಂತ ದುರ್ಗಾದೇವಿಯ ಮೂರ್ತಿಗಳನ್ನ ಪಲಕ್ಕಿ ಮೇಲೆ ಹೊತ್ತು ನಗರದ ತುಂಬ ಮೆರವಣಿಗೆ ಮಾಡಿ ಭಕ್ತರು ತಮ್ಮ ಭಕ್ತಿಭಾವವನ್ನ ಮೆರೆದರು.

Karwar dahinkala festival was held in a grand manner Uttara kannada news in kannada

1 / 6
ಮೆರವಣಿಗೆ ಉದ್ದಕ್ಕೂ ವಿವಿಧ ಸಂಸ್ಕೃತಿಕ ವಾದ್ಯ ಮೇಳೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಅದರಲ್ಲೂ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾದ ಕ್ಲಮ್ಯಾಕ್ಸ್‌ನ ಚಿತ್ರದ ಸ್ತಬ್ಧ ಚಿತ್ರವು ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿತ್ತು. ದಹಿಂಕಾಲ ಉತ್ಸವಕ್ಕೆ ಬಂದ ಸಹಸ್ರಾರು ಭಕ್ತರು ಈ ಸ್ತಬ್ಧ ಚಿತ್ರನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ತಬ್ಧ ಚಿತ್ರವನ್ನ ತೆಂಗಿನ ನಾರು, ಪಿಓಪಿ ಬಳಸಿ ಖ್ಯಾತ ಕಲಾವಿದ ದಿನೇಶ್ ಮೇತ್ರಿ ಅವರು ಸಿದ್ಧಪಡಿಸಿದ್ದಾರೆ. ಅವರು ಹತ್ತು ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ.

Karwar dahinkala festival was held in a grand manner Uttara kannada news in kannada

2 / 6
Karwar dahinkala festival was held in a grand manner Uttara kannada news in kannada

ದಹಿಂಕಾಲ ಉತ್ಸವ ಅಂದರೆ ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅಂಕೋಲ ನಗರದಲ್ಲಿ ಬಂಡಿ ಬಜಾರ ಕಟ್ಟೆಯ ಮೇಲೆ ಶ್ರೀ ವೆಂಕಟರಮಣ ದೇವರನ್ನು ಪ್ರತಿಷ್ಟಾಪಿಸಿ ದೇವರ ಮುಂದೆ ಒಂದು ಸಮಾಜದವರು ನರ್ತನ ಮಾಡುವ ಸಂಪ್ರದಾಯವಿತ್ತು. ಈ ಸಂಪ್ರದಾಯವನ್ನು ತೊಡೆದು ಹಾಕಲು 7 ದಶಕಗಳ ಹಿಂದೆ ಸಂಕಲ್ಪತೊಟ್ಟ ನಾಮಧಾರಿ ಸಮಾಜದವರು ನರ್ತನ ಸಂಪ್ರದಾಯವನ್ನು ನಿಷೇಧಿಸಿ ಪೌರಾಣಿಕ ಯಕ್ಷಗಾನವನ್ನು ಪ್ರದರ್ಶಿಸುವದರ ಮೂಲಕ ಸಾಮಾಜಿಕ ಕೊಡುಗೆಯಾಗಿ ನೀಡಿದರು.

3 / 6
Karwar dahinkala festival was held in a grand manner Uttara kannada news in kannada

ಈ ಒಂದು ಸುಸಂದರ್ಭಕ್ಕೆ ಹಾಲು ಮೊಸರಾಗುವ ಕಾಲ ( ದಹಿ ಎಂದರೆ ಮೊಸರು) ಎಂದು ಕಲ್ಪಿಸಿ ದಹಿಂಕಾಲ ಉತ್ಸವದ ರೂಢಿ ಆಚರಣೆಗೆ ಬಂತು. ಹಾಗೆ ಹೆಪ್ಪಿಟ್ಟ ಹಾಲು ಮೊಸರಾದಂತೆ ಸಮಾಜದಲ್ಲೀನ ಬದಲಾವಣೆಯು ಮರಳಿ ಹಿಂದಕ್ಕೆ ಹೋಗದಂತೆ ಪ್ರಗತಿಶೀಲರಾಗಬೇಕು ಎಂಬುದು ದಹಿಂಕಾಲದ ಬೀಜ್ ಮಂತ್ರವಾಗಿದೆ. ಅದೇ ಸಂಪ್ರದಾಯ ಇಲ್ಲಿವರಗೆ ನಡೆದು ಕೊಂಡು ಬಂದಿದೆ.

4 / 6
Karwar dahinkala festival was held in a grand manner Uttara kannada news in kannada

ಈ ಉತ್ಸವಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಅದ್ದೂರಿಯಾಗಿ ಉತ್ಸವವನ್ನ ಆಚರಿಸುತ್ತಾರೆ. ಸಾಮಾನ್ಯವಾಗಿ ದಹಿಂಕಾಲ ಉತ್ಸವ ನಡೆಯದೇ ತಾಲೂಕಿನ ಯಕ್ಷಪಟುಗಳು ಕಾಲಿಗೆ ಗೆಜ್ಜೆ ಕಟ್ಟುವುದಿಲ್ಲ. ಸಾಮಾಜಿಕ ಅನಿಷ್ಟ ಪದ್ಧತಿ ತೊಡೆದು ಹಾಕಲು ಕಾಲಿಗೆ ಗೆಜ್ಜೆ ಕಟ್ಟಿದ ಯಕ್ಷಪಟುಗಳು ತಮ್ಮ ಹರಕೆಯಂತೆ ಮೊದಲು ದಹಿಂಕಾಲ ಉತ್ಸವದಲ್ಲಿ ದೇವರ ಮುಂದೆ ತಮ್ಮ ಕುಣಿತದ ಹೆಜ್ಜೆ ಹಾಕಿ ತಮ್ಮ ಕಲೆಯನ್ನು ಮೊದಲು ದೇವರಿಗೆ ಸಮರ್ಪಿಸಿ ನಂತರ ಇತರಡೆ ಯಕ್ಷರಂಗಕ್ಕೆ ಕಾಲಿಡುತ್ತಾರೆ.

5 / 6
Karwar dahinkala festival was held in a grand manner Uttara kannada news in kannada

ಒಟ್ಟಿನಲ್ಲಿ ದಶಕಗಳ ಕಾಲದಿಂದ ಅದ್ದೂರಿಯಾಗಿ ನಡೆಯುತ್ತಿರುವ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಈ ವರ್ಷ ಬಹಳ ಅರ್ಥಪೂರ್ಣವಾಗಿ ಜರುಗಿತು. ಇನ್ನೂ ದೇವರ ಮೆರವಣಿಗೆ ಉದ್ದಕ್ಕೂ ಕಾಂತಾರ ಸಿನಿಮಾದ ಸ್ತಬ್ಧ ಚಿತ್ರ ನೋಡುಗರ ಹುಬ್ಬೆರುವಂತೆ ಮಾಡಿದ್ದಮಂತು ಸತ್ಯ. (ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ)

6 / 6

Published On - 2:59 pm, Sun, 20 November 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!